fbpx
Astrology

ನಿತ್ಯ ಭವಿಷ್ಯ 10 ಆಗಸ್ಟ್ 2016

ಮೇಷ

01-Mesha

ವಿದ್ಯಾರ್ಥಿಗಳಿಗೆ ಅನುಕೂಲ. ವ್ಯಾಪಾರಸ್ಥರಿಗೆ ಲೇವಾದೇವಿ ವ್ಯವಹಾರದಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ. ಅದನ್ನು ಚಾಣಾಕ್ಷ ತನದಿಂದ ಬಗೆಹರಿಸಿಕೊಳ್ಳುವಿರಿ. ಸಹೋದರನು ನಿಮಗೆ ಸಹಾಯ ಮಾಡುವ ಸಾಧ್ಯತೆ ಇದೆ.

ವೃಷಭ

02-Vrishabha

ಒಳ್ಳೆಯ ಹೆಸರು ಪಡೆಯುತ್ತೀರಿ. ಪ್ರಯಾಣ ಹಿತಕರವಾಗಿರುತ್ತದೆ. ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಹತ್ತು ಹಲವು ಬಾರಿ ಚಿಂತಿಸಿರಿ. ಆರ್ಥಿಕ ಸದೃಢತೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.

ಮಿಥುನ

03-Mithuna

ದೈವಕೃಪೆಯಿಂದ ವಿವಾಹಯೋಗ್ಯರಿಗೆ ಮನೆಯಲ್ಲಿ ವಿವಾಹದ ಬಗ್ಗೆ ಮಾತುಕತೆಗಳು ನಡೆಯುವವು. ವಿವಾಹದ ಮಾತುಕತೆಯಲ್ಲಿ ಮಹತ್ತರ ಘಟ್ಟ ತಲುಪುವಿರಿ. ಮನಸ್ಸಿಗೆ ನೆಮ್ಮದಿ ಉಂಟಾಗುವುದು.

ಕಟಕ

04-Kataka

ನೀವಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದೊಂದಿಗೆ ದೇಗುಲ ದರ್ಶನ ಮಾಡುವಿರಿ. ಮಗನ ಪ್ರಗತಿಯ ಕಂಡು ಹರ್ಷಚಿತ್ತರಾಗುವಿರಿ. ಆದರೆ ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಕೊಟ್ಟ ಹಣ ವಾಪಸ್ಸು ಬರುವ ಸಾಧ್ಯತೆಯಿದೆ.

ಸಿಂಹ

05-Simha

ಶುಭವಾರ್ತೆ ನಿರೀಕ್ಷಿಸಬಹುದು. ಆರೋಗ್ಯ ಉತ್ತಮ. ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಮನೆಗೆ ಅಲಂಕಾರ ವಸ್ತುಗಳ ಖರೀದಿ ಮಾಡುವಿರಿ.

ಕನ್ಯಾ

06-Kanya

ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸ್ನೇಹಿತರ ಬೆಂಬಲ ದೊರೆಯುವುದು. ಅಧಿಕ ಖರ್ಚು ಎದುರಾಗುವ ಸಂಭವ. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿರಿ. ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

ತುಲಾ

07-Tula

ಹಮ್ಮಿಕೊಂಡ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಕುಲದೇವರ ಆರಾಧನೆಯಿಂದ ಒಳಿತಾಗುವುದು. ವಿನಯಶಾಲಿಯೇ ವಿಜಯಶಾಲಿ ಎಂಬಂತೆ ಈದಿನ ಆದಷ್ಟು ತಾಳ್ಮೆಯಿಂದ ವ್ಯವಹರಿಸಿರಿ.

ವೃಶ್ಚಿಕ

08-Vrishika

ವೃತ್ತಿಯಲ್ಲಿ ಅಲ್ಪ ಶ್ರಮದಿಂದ ದೊಡ್ಡ ಹೆಸರು ಪಡೆಯುವಿರಿ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಿರಿ. ಪ್ರಯಾಣ ಕಾಲದಲ್ಲಿ ಎಚ್ಚರ. ಮುಂಬರುವ ದಿನಗಳಲ್ಲಿ ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು.

ಧನು

09-Dhanussu

ಷೇರು ವ್ಯವಹಾರದಲ್ಲಿ ಕಾದು ನೋಡುವ ತಂತ್ರವನ್ನು ಅನುಸರಿಸುವುದು ಒಳ್ಳೆಯದು. ನೀವು ಲಾಭವಿಲ್ಲ ಎಂದು ಮಾರಿದ ಷೇರು ಮರುದಿನ ಹೆಚ್ಚು ಬೆಲೆಯಲ್ಲಿ ಮಾರಾಟವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮಕರ

10-Makara

ಸುಖಭೋಜನ ಲಭಿಸುವುದು. ನಿಮ್ಮ ಇಚ್ಛೆಯಂತೆ ಕಾರ್ಯಗಳು ನೆರವೇರುತ್ತವೆ. ನೂತನ ಕೆಲಸಗಳು ಕೈಗೂಡುವುದು. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷ ಣಗಳನ್ನು ಕಳೆಯುವಿರಿ.

ಕುಂಭ

11-Kumbha

ಆರಂಭಿಸಿದ ಕೆಲಸ ಕಾರ್ಯಗಳಿಗೆ ಸ್ನೇಹಿತರ ಬೆಂಬಲ ದೊರೆಯುವುದು. ಅಂತೆಯೇ ಅಧಿಕ ಖರ್ಚಿಗೆ ದಾರಿಯಾಗುವುದು. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿರಿ. ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ಮೀನ

12-Meena

ವಾಹನ, ನಿವೇಶನ ಖರೀದಿಸುವವರಿಗೆ ಸಕಾಲ. ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ. ಪತ್ರ ವ್ಯವಹಾರಗಳನ್ನು ಕಾನೂನು ರೀತ್ಯ ತಪಾಸಣೆಗೆ ಒಳಪಡಿಸುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಮೋಸ ಹೋಗುವ ಸಂದರ್ಭವಿರುತ್ತದೆ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top