ಮೇಷ
ನಿಮ್ಮ ಒಳ್ಳೆಯತನವನ್ನು ಮತ್ತೊಬ್ಬರು ದುರುಪಯೋಗ ಪಡಿಸಿಕೊಳ್ಳುವರು ಎಚ್ಚರವಿರಲಿ, ನಿರೀಕ್ಷೆಗಿಂತ ಹೆಚ್ಚು ಹಣಕಾಸಿನ ಸಹಾಯ ದೊರಕಲಿದೆ. ಮಿತ್ರರ ಭೇಟಿ.
ವೃಷಭ
ಶೀಘ್ರದಲ್ಲೇ ಸಂತಸದ ಸುದ್ದಿಯೊಂದು ಬರಲಿದೆ. ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ ಸಾಧ್ಯತೆ, ಆರೋಗ್ಯದ ಬಗ್ಗೆ ಗಮನವಿರಲಿ, ಸಂಗಾತಿಯೊಡನೆ ದೂರ ಪ್ರಯಾಣ.
ಮಿಥುನ
ಸಾಮಾಜಿಕ ಸೇವೆಯಲ್ಲಿ ಒಳ್ಳೆಯ ಕೀರ್ತಿ ಲಭಿಸಲಿದೆ, ಮಕ್ಕಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಮನೆಯವರೊಂದಿಗೆ ತೀರ್ಥ ಕ್ಷೇತ್ರ ಪ್ರಯಾಣ.
ಕಟಕ
ನಿಮ್ಮ ಕಾರ್ಯಕ್ಷೇತ್ರದ ಸಂಧಾನಕ್ಕಾಗಿ ಮೇಲಧಿಕಾರಿಗಳಿಂದ ಒತ್ತಡ, ಕೃಷಿ ಕೈಗಾರಿಕೆಯ ವ್ಯವಹಾರದಲ್ಲಿ ಲಾಭ, ರಾಜಕೀಯದವರಿಂದ ಬೆಂಬಲ.
ಸಿಂಹ
ಮನೆಯಲ್ಲಿ ವಿಶೇಷ ಕಾರ್ಯಕ್ರಮ ಬಂಧುಗಳು ಭಾಗಿ, ಸರಕಾರಿ ಕೆಲಸದವರಿಗೆ ಬಿಡುವಿಲ್ಲದ ಕೆಲಸ, ಪ್ರಯಾಸದಿಂದ ಅಧಿಕ ಖರ್ಚು, ಕಾರ್ಯವಿಫಲ.
ಕನ್ಯಾ
ಸಾಹಿತಿಗಳಿಗೆ ಉತ್ತಮ ಅವಕಾಶ ಕೀರ್ತಿ ಪ್ರಾಪ್ತಿ, ನ್ಯಾಯಾಲಯದಲ್ಲಿ ಜಯ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಬರಲಿವೆ, ಮಾನಸಿಕ ತೃಪ್ತಿ.
ತುಲಾ
ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ, ವ್ಯಾಪಾರದಲ್ಲಿ ಹೆಚ್ಚಿನ ಲಾಭ, ಕೆಲಸ ಕಾರ್ಯಗಳಿಗೆ ಅನುಕೂಲಕರವಾದ ದಿನ.
ವೃಶ್ಚಿಕ
ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ, ವಿದೇಶಿ ವ್ಯವಹಾರದಲ್ಲಿ ಸ್ವಲ್ಪ ಮನಸ್ತಾಪ, ದೇವತಾ ದರ್ಶನದಿಂದ ಕಷ್ಟಗಳು ಪರಿಹಾರ.
ಧನು
ಆರ್ಥಿಕ ಅಡಚಣೆಗಳು ಪರಿಹಾರವಾಗಲಿವೆ. ಶಾರೀರಿಕ ಆಯಾಸದಿಂದ ಕೆಲಸದಲ್ಲಿ ಉದಾಸೀನತೆ, ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸ.
ಮಕರ
ಭೂ ಖರೀದಿಗೆ ಅನುಕೂಲಕರವಾದ ದಿನ, ಸಂಗಾತಿಯೊಂದಿಗೆ ಮನಸ್ತಾಪ, ಗೃಹ ನಿರ್ಮಾಣಕ್ಕಾಗಿ ಮಿತ್ರರಲ್ಲಿ ಸಮಾಲೋಚನೆ, ಅಧಿಕಾರ ಪ್ರಾಪ್ತಿ.
ಕುಂಭ
ದೇವತಾನುಗ್ರಹದಿಂದ ನಿಮ್ಮ ಮನಸ್ಸಿನ ಕಾರ್ಯದಲ್ಲಿ ಯಶಸ್ಸು, ಲಾಭ, ಅಣ್ಣನ ಆರೋಗ್ಯದಲ್ಲಿ ಏರು ಪೇರು, ಮನರಂಜನೆಯತ್ತ ಆಸಕ್ತಿ.
ಮೀನ
ವಿಶೇಷ ಭೋಜನ ಕೂಟದಲ್ಲಿ ಭಾಗಿಯಾಗುವ ಸಾಧ್ಯತೆ, ದೂರದಿಂದ ಬಂದ ಕರೆಯೊಂದು ನಿಮಗೆ ಸಂತಸ ತಂದೀತು. ಅಧ್ಯಯನಕ್ಕೆ ಉತ್ತೇಜನ ದೊರೆಯಲಿದೆ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
