ಪ್ರಧಾನಮಂತ್ರಿ ನರೇಂದ್ರ ಮೋದಿ 500 ಮತ್ತು 1000 ನೋಟುಗಳನ್ನು ರದ್ದುಪಡಿಸಿದ ನಂತರ ಜನಧನ್ ಬ್ಯಾಂಕ್ ಖಾತೆಗಳಿಗೆ 21 ಸಾವಿರ ಕೋಟಿ ರೂ. ನಷ್ಟು ಮೊತ್ತ ಹರಿದು ಬಂದಿದೆ. ವಿಶೇಷ ಏನಪ್ಪಾ ಅಂದರೆ ಇದರಲ್ಲಿ ಬಹುಪಾಲು ಹಣ ಬಂದಿರುವುದು ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಎಂಬುದು. ನೋಟು ನಿಷೇಧದ ನಂತರದ 13 ದಿನಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅಥವಾ ಬಡವರಿಗಾಗಿ ತೆರೆಯಲಾದ ಪ್ರಧಾನ ಮಂತ್ರಿ ಜನಧನ್ ಬ್ಯಾಂಕ್ ಖಾತೆಗಳಲ್ಲಿ 21 ಸಾವಿರ ಕೋಟಿ ರೂ. ಮೊತ್ತ ಡೆಪಾಸಿಟ್ ಮಾಡಲಾಗಿದೆ.
2014 ಆಗಸ್ಟ್ 28 ರಂದು ಜನ್ಧನ್ ಖಾತೆ ಆರಂಭಿಸಲಾಗಿದ್ದು, ಈ ಖಾತೆಗಳಲ್ಲಿ ಗರಿಷ್ಠ 50 ಸಾವಿರ ರೂ. ಜಮಾ ಮಾಡಬಹುದಾಗಿದೆ. ಸರಕಾರ ಈಗ ಜನಧನ್ ಖಾತೆಗಳತ್ತ ಗಮನ ಹರಿಸಿದ್ದು, ಇವುಗಳ ಬಗ್ಗೆ ಪರಿಶೀಲಿಸಿದಾಗ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದ್ದರೆ, ಸಿದ್ಧರಾಮಯ್ಯ ನೇತೃತ್ವದ ಸರಕಾರ ಇರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ನೋಟು ರದ್ದಾದ ನಂತರ 65,000 ಕೋಟಿಯಿಂದ 66,636 ಕೋಟಿಗೆ ಜಮಾ ದಾಖಲಾಗಿದೆ. ನವೆಂಬರ್ 9ರಂದು ಇದ್ದ 25 ಸಾವಿರ ಕೋಟಿ ರೂ. 45,636 ಕೋಟಿ ರೂ.ಗೆ ಏರಿಕೆಯಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
