ಉದ್ಯಮಿ ವಿಜಯ್ ಮಲ್ಯ ಅವರು ತಮ್ಮ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಗಾಗಿ ಸುಮಾರು 9 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲವನ್ನು ದೇಶದ ವಿವಿಧ ಬ್ಯಾಂಕ್ ಗಳಿಂದ ಪಡೆದುಕೊಂಡಿದ್ದರು. ಮೊನ್ನೆ ತಾನೇ ವಿಜಯ್ ಮಲ್ಯ ಅವರು ತೆಗೆದುಕೊಂಡಿದ್ದ ಕೋಟಿ ಕೋಟಿ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿದ್ದ SBI ಗೆ ಹೀಗೊಂದು ಸಂಕಷ್ಟ ಎದುರಾಗಿದೆ. ಸಂಕಷ್ಟಕ್ಕೆ ಕಾರಣ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಣ್ಣೇದೊಡ್ಡಿ ಗ್ರಾಮದ ರೈತ ಮುಖಂಡೆ ಸುನಂದಮ್ಮ ಅವರ ಪುತ್ರ ಸುಧಾಕರ್.
ಸುಧಾಕರ್ ತಮ್ಮ 7 ಲಕ್ಷ ರು ಸಾಲವನ್ನು ಮನ್ನಾ ಮಾಡಿ ಎಂದು ಶಿವಪುರ ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಗೆ ಮನವಿ ಮಾಡಿದ್ದಾರೆ.ಸಾವಿರಾರು ಕೋಟಿ ರೂ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರು ಮದ್ಯದ ದೊರೆ ವಿಜಯ್ ಮಲ್ಯ ಸಾಲ ಮನ್ನಾ ಮಾಡಿದಂತೆ ತಮ್ಮ ಸಾಲವನ್ನು ಮನ್ನಾ ಮಾಡಿ ಎಂದು ಬ್ಯಾಂಕ್ ಮ್ಯಾನೇಜರ್ ಗೆ ಪತ್ರ ಬರೆದಿದ್ದಾರೆ.
“2005- 06 ನೇ ಸಾಲಿನಲ್ಲಿ ಶಿವಪುರದಲ್ಲಿರುವ ಎಸ್ಬಿಐ ಬ್ಯಾಂಕ್ ನಲ್ಲಿ ಟ್ರ್ಯಾಕ್ಟರ್ ಸಾಲ ಪಡೆದಿದ್ದ ಶೇ. 80ರಷ್ಟು ಹಣವನ್ನು ಕೃಷಿ ಚಟುವಟಿಕೆಗಳಿಗಾಗಿ ಬಳಸಿಕೊಂಡಿದ್ದೇನೆ. ಉಳಿದ ಹಣವನ್ನು ವೈಯಕ್ತಿಕ ಕಾರಣಗಳಿಗಾಗಿ ವೆಚ್ಚಿಸಿದ್ದೇನೆ. 4.91ಲಕ್ಷ ರೂ. ಟ್ರಾಕ್ಟರ್ ಖರೀದಿಗಾಗಿ ಸಾಲ ಮಾಡಿದ್ದೇನೆ.” ಎಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಪಣ್ಣೇದೊಡ್ಡಿ ಗ್ರಾಮದ ರೈತ ಮುಖಂಡೆ ಸುನಂದಮ್ಮ ಅವರ ಪುತ್ರ ಹೇಳುತ್ತಾರೆ.
ಅಂದು ಪಡೆದ ಸಾಲವೀಗ ಅಸಲು ಬಡ್ಡಿ ಸೇರಿಸುಮಾರು ಏಳು ಲಕ್ಷ ರೂಪಾಯಿ ದಾಟಿದೆ. ಸರಿಯಾಗಿ ಮಳೆ ಬಾರದ ಕಾರಣ ಈ ಸಾಲವನ್ನು ತೀರಿಸಲು ಆಗುತ್ತಿಲ್ಲ. ನೀವು ಈಗ ಹೇಗೆ ಸಾಲ ತೀರಿಸಲಾಗದೇ ದೇಶ ಬಿಟ್ಟು ಹೋಗಿರೋ ಮದ್ಯದ ದೊರೆ ವಿಜಯ್ ಮಲ್ಯರ ಸಾವಿರಾರು ಕೋಟಿ ಸಾಲ ಮನ್ನ ಮಾಡಿರುವಂತೆ ನಮ್ಮ ಸಾಲವನ್ನೂ ಮನ್ನಾ ಮಾಡಿ ಎಂದು ಕೋರಿದ್ದಾರೆ.
ರೈತರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ…!! ಭಾರತ ಪ್ರಕಾಶಿಸುತ್ತಿದೆ ಬಿಡಿ…
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
