fbpx
ಕನ್ನಡ

ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಈ ಭೈರವದುರ್ಗ ಒಂದು

‘ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಈ ಭೈರವದುರ್ಗ ಒಂದಾಗಿದೆ. ನಾಡಪ್ರಭು ಮಾಗಡಿಕೆಂಪೇಗೌಡರ ಪ್ರಮುಖ ಸೇನಾ ನೆಲೆಯಾಗಿತ್ತು. ಹಾಗೂ ಬೆಂಗಳೂರಿನ ಸುತ್ತಲಿನ  ನವದುರ್ಗಗಳಲ್ಲಿ ಪ್ರಮುಖವಾದದ್ದು ಈ ಭೈರವದುರ್ಗ.

ಚಾರಣಿಗರಿಗೆ ಹೇಳಿಮಾಡಿಸಿದ ಬೆಟ್ಟ ಈ ಭೈರವದುರ್ಗ.

ಭೈರವದುರ್ಗ5

ಶೈವಗುರು ಗಗನದಾರ್ಯರು ಶಿವೈಕ್ಯರಾದ ಪವಿತ್ರಸ್ಥಳ ಭೈರವದುರ್ಗ , ಕರ್ನಾಟಕದ ಅತಿ ಎತ್ತರದ ಏಕಶೀಲಾಬೆಟ್ಟಗಳಲ್ಲಿ ಈ ಭೈರವದುರ್ಗದ ಬೆಟ್ಟ ಒಂದಾಗಿದೆ. ಚಾರಣಿಗರಿಗೆ ಹೇಳಿಮಾಡಿಸಿದ ಬೆಟ್ಟ ಇದಾಗಿದೆ.

ಭೈರವದುರ್ಗ6

ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿದ್ದ ಸ್ಥಳಗಳಲ್ಲಿ ಭೈರವದುರ್ಗ ಒಂದು

ಮಾಗಡಿ ಮತ್ತು ಹುಲಿಕಲ್ ನಡುವೆ ಇರುವ ಏಕಶಿಲಾ ಬೆಟ್ಟ ಕುದೂರಿನ ಭೈರವನ ದುರ್ಗ. ಕೆಂಪೇಗೌಡರ ಮನೆದೇವರು ಭೈರವನ ಹೆಸರಿನ ದುರ್ಗವಾಗಿರುವ ಇದೂ ಕೂಡ ಕೆಂಪೇಗೌಡರ ಸೇನಾನೆಲೆಯಾಗಿತ್ತು ಎಂದು ಇಲ್ಲಿನ ಕೋಟೆಯ ಅವಶೇಷಗಳಿಂದ ತಿಳಿದುಬರುತ್ತದೆ. ಸುಂದರವಾಗಿರುವ ಈ ಗಿರಿದುರ್ಗವನ್ನು ಸಂರಕ್ಷಿತ ತಾಣವನ್ನಾಗಿ ಮಾಡಲು ಜನಪ್ರತಿನಿಧಿಗಳು ಸರ್ಕಾರ ಕೈಕೋಡಿಸಬೇಕಿದೆ.

kempegowda13

ಮಾಗಡಿ ಮತ್ತು ಹುಲಿಕಲ್ ನಡುವೆ ಪ್ರಕೃತಿ ದತ್ತವಾಗಿರುವ ಏಕಶಿಲಾ ಬೆಟ್ಟ ಕುದೂರಿನ ಭೈರವದುರ್ಗ, ಕೆಂಪೆಗೌಡರ ಮನೆದೇವರ ಹೆಸರಿನ ದುರ್ಗವಾಗಿರುವ  ಇದು ಕೆಂಪೇಗೌಡರ ಪ್ರಮುಖ ಸೇನಾನೆಲೆಯಾಗಿತ್ತು.

ಭೈರವದುರ್ಗ

ಸಮುದ್ರ ಮಟ್ಟದಿಂದ ಸು||3000 ಮಿಟರ್ ಎತ್ತರದಲ್ಲಿದೆ, ಈ ಬೆಟ್ಟ ಮೆಲ್ಬಾಗದಲ್ಲಿ ಕ್ರಿ.ಶ 17 ನೇ ಶತಮಾನದ ಮುಂಚುಣಿಯಲ್ಲಿ ಮಾಗಡಿ ಕೇಂಪೇಗೌಡರವರ ಕೋಟೆಗಳನ್ನು ನಿರ್ಮಿಸಲಾಗಿದೆ, ಬ್ರಿಟೀಷ್ ಅಧಿಕಾರಿಯಾದ ಮಾರ್ಥಸ್ ಎಂಬಾತನು ಕ್ರಿ.ಶ 1750 ರಲ್ಲಿ  ಈ ಕೋಟೆಗೆ ರಕ್ಷಣಾಗೋಡೆಯನ್ನು ನಿರ್ಮಿಸಿದನು,

ಬೆಂಗಳೂರಿನ ಸುತ್ತಲಿರುವ ನವದುರ್ಗಗಳಲ್ಲಿ ಒಂದಾಗಿದೆ, ಬೆಂಗಳೂರಿನಿಂದ್ದ ಸು||60 km ದೂರದಲ್ಲಿದೆ. ಈ ಬೆಟ್ಟದ ಮಧ್ಯಭಾಗದಲ್ಲಿ ಭೈರವೇಶ್ವರ ಸ್ವಾಮಿಯ ದೇವಾಲಯವು ಗುಹೆಯ ಮಾದರಿಯಲ್ಲಿದೆ, ಶೈವಗುರು ಗಗನದಾರ್ಯರು ಭೈರವನದುರ್ಗದಲ್ಲಿ ಶಿವೈಕ್ಯರಾದರೆಂದು ತಿಳಿಯುತ್ತದೆ.

ಈ ಬೆಟ್ಟಕ್ಕೆ ಭೈರವದುರ್ಗ ಎಂದು ಹೆಸರು ಬರಲು ಕಾರಣ

ಶಿವನ ಶಿರಭಾಗದಲ್ಲಿ ಗಂಗಾಮಾತೆಯನ್ನು ಪಡೆಯದಂತೆ ಈ ಬೆಟ್ಟದ ಶಿರಭಾಗ ಅಂದರೆ ಮೇಲ್ಬಾಗದಲ್ಲಿ  ನೀರಿನ ದೂಣೆಯನ್ನು ಕಾಣಬಹುದಾಗಿರುವುರಿಂದ ಈ ಹೆಸರು ಪಡೆದಿರಬಹುದೆಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭೈರವದುರ್ಗ1

ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಭೈರವದುರ್ಗವನ್ನು ಐತಿಹಾಸಿಕ ಸ್ಥಳ ಎಂದು ಗುರುತಿಸದಿರುವುದು ದುರ ದೃಷ್ಟದ ಸಂಗತಿ .

ಕೋಟೆಯ ಕುರುಹುಗಳು ಅವನತಿಯ ಅಂಚಿನಲ್ಲಿದೆ ಕರ್ನಾಟಕ ಸರ್ಕಾರ ಹಾಗೂ ಪ್ರವಾಸೋಧ್ಯಮ ಇಲಾಖೆ (KSTDC) ಮತ್ತ ಇತಿಹಾಸ ಪ್ರಾಚ್ಯ ಇಲಾಖೆಯು ಕೊಂಚ ಗಮನ ಹರಿಸುವ ಮೂಲಕ ಅಭಿವೃದ್ಧಿಪಡಿಸುವ ಮೂಲಕ ಸಂರಕ್ಷಣೆಗೆ ಸಹಕರಿಸಲು ಭೈರವದುರ್ಗದ ಜನತೆ ವಿನಂತಿಸಿಕೊಳ್ಳುತ್ತಿದ್ದಾರೆ.

ಭೈರವದುರ್ಗ5

ಭೈರವದುರ್ಗದ ವಿಳಾಸ:

ಭೈರವದುರ್ಗವನ್ನು NH 48 ಮತ್ತು SH 94. ಹಾಗೂ ಸೋಲೂರಿನ ರಸ್ತೆಯಿಂದ ತಲುಪಬಹುದಾಗಿದೆ. ಶಿವಗಂಗೆಯಿಂದ ಕೇವಲ 8 ಕಿ.ಮಿ. ಸಮೀಪದಲ್ಲಿದೆ.

ಪರ್ವಪುರ,

ಕುದೂರು,

ಮಾಗಡಿ ತಾಲ್ಲೂಕು,

ರಾಮನಗರ ಜಿಲ್ಲೆ.

PIN-561101

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top