fbpx
Kannada Bit News

ಬೆಂಗಳೂರಿನ ಮಾಲ್ ಗಳು ಎಷ್ಟು ಸುರಕ್ಷಿತ! ಗೋಪಾಲನ್ ಮಾಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಗಳೂರು: ಬೆಂಗಳೂರಿನ ಬನ್ನೇರುಗಟ್ಟದಲ್ಲಿರುವ ಪ್ರತಿಷ್ಟಿತ ಮಾಲ್ ಗಳಲ್ಲಿ ಒಂದಾದ ಗೋಪಾಲನ್ ಮಾಲ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮಾಲ್ ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಬನ್ನೇರುಗಟ್ಟದಲ್ಲಿರುವ ಗೋಪಾಲನ್ ಮಾಲ್ ನಲ್ಲಿ ಆಕಸ್ಮಿಕ ಫುಡ್ ಕೋರ್ಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ಇತ್ತಿಚೆಗೆ ನಗರದ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್ ನ ಹಿಂಭಾಗದ ಗೋಡೆ ಕುಸಿದಿರುವ ಆಘಾತಕಾರಿ ಘಟನೆ ಸೋಮವಾರ ನಡೆದಿತ್ತು ಅದರ ಬೆನ್ನಲ್ಲೆ ಮತ್ತೊಂದು ಅವಗಡ ಸಂಬವಿಸಿದೆ. ಬೆಂಗಳೂರಿನ ಮಾಲ್ ಗಳು ಎಷ್ಟು ಸುರಕ್ಷಿತ ಎಂಬ ಅನುಮಾನ ಮತ್ತು ಆತಂಕ ಒಮ್ಮೆಲೇ ಹುಟ್ಟಿಕೊಂಡಿದೆ,  ಬೆಂಗೂರಿನ ಮಾಲ್ ಅವಘಡ  ಸಂಭವಿಸಸುತ್ತನೇ ಇದೆ. ಇದರಿಂದ  ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.

ಕಳೆದ ವರ್ಷ  ರಾಜರಾಜೇಶ್ವರಿ ನಗರದ ಗೋಪಾಲನ್ ಆರ್ಕೆಡ್ ನಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿತ್ತು. ಎಂಜಿ ರಸ್ತೆಯ ನವರತನ್ ಜ್ಯುವೆಲ್ಲರ್ಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮೀನಾಕ್ಷಿ ಮಾಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಗೋಪಾಲನ್ ಆರ್ಕಿಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಿಗ ಬನ್ನೇರುಗಟ್ಟದಲ್ಲಿರುವ ಗೋಪಾಲನ್ ಮಾಲ್ ನಲ್ಲಿ ಬೆಂಕಿ ಕಾಣಿಸಿ ಕೊಂಡಿದೆ.

ಬೆಂಗಳೂರಿನ ಮಾಲ್ ಗಳು ಎಷ್ಟು ಸುರಕ್ಷಿತ ಯಾರು ಕೇಳುವವರಿಲ್ಲ ಇದರಿಂದ ಜನರಿಗೆ ತೊಂದರೆ ಯಾಗಿತ್ತಿದೆ. ಕಳೆದ ವರ್ಷ ಸಂಭವಿಸಿದ ಮಾಲ್ ಗಲ ದುರದಂತದಿದ  ಕೆಲವರಿಗೆ ಗಂಭಿರವಾದ ಗಾಯಗಳು ಹಾಗಿದೆ ಮತ್ತು ಸಾವುಗಳು ಸಂಬವಿಸಿದೆ, ಇದರಿಂದ  ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top