ಕೇಂದ್ರ ಬಜೆಟ್ ನಲ್ಲಿ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲಾಗಿದೆ.
ಬಜೆಟ್ ನಲ್ಲಿ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲಾಗಿದೆ. ದೇಶದ ವಿಕಾಸಕ್ಕೆ ದೊಡ್ಡ ಹೆಜ್ಜೆಯಾಗಿದ್ದು, ಆರ್ಥಿಕ ವಿಕಾಸಕ್ಕೆ ಬೆಂಬಲ ಸಿಗಲಿದೆ. ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದೆ ಎಂದಿದ್ದಾರೆ. ಇದರಲ್ಲಿ ನಮ್ಮ ರೈತರ, ಯುವ ಜನತೆಯ ಭವಿಷ್ಯ ಅಡಗಿದೆ ಎಂದಿದ್ದಾರೆ.
ಕೇಂದ್ರ ಬಜೆಟ್ ಮಂಡನೆಯ ಮುಖ್ಯ ಉದ್ದೇಶ ಡಿಜಿಟಲ್ ವ್ಯವಹಾರಕ್ಕೆ ಪ್ರಮುಖ್ಯತೆ ಕೊಟ್ಟಿದ್ದಾರೆ, ಭಾರತ ದೇಶ ಅಭಿವೃದ್ಧಿ ಪತದಲ್ಲಿ ಮುಂದೆಸಾಗಲು ನಮ್ಮಪ್ರಧಾನ ಮಂತ್ರಿಯವರು ನಾನ ಹೊಸ ವಿಚಾರಗಳನ್ನು ಹೊರತರುತ್ತಿದ್ದಾರೆ ಇದರಲ್ಲಿ ಪ್ರಮುಖವಾತದ ವಿಷಯ ವೆಂದರೆ ಈ ಡಿಜಿಟಲ್ ವ್ಯವಹಾರ ಒಂದು ಪ್ರಮುಖ ಪಾತ್ರವಾಗಿದೆ.
ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಸರ್ಕಾರದ ಭೀಮ್ ಆ್ಯಪ್ ಮೂಲಕ ವ್ಯವಹಾರ ನಡೆಸುವವರಿಗೆ ಕ್ಯಾಶ್ಬ್ಯಾಕ್ ಯೋಜನೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಭಾರತಲ್ಲಿ ಡಿಜಿಟಲ್ ಕ್ರಾಂತಿಯಾಗ್ತಾ ಇದೆ. 125 ಲಕ್ಷ ಮಂದಿ ಭೀಮ್ ಆ್ಯಪ್ ಬಳಸುತ್ತಿದ್ದಾರೆಂದು ಜೇಟ್ಲಿ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ಆಧಾರಿತ ವ್ಯವಹಾರ ಕೂಡ ಶೀಘ್ರವೇ ಶುರುವಾಗಲಿದೆ. ಸರ್ಕಾರಿ ಕಚೇರಿಗಳಲ್ಲಿಯೂ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗ್ತಾ ಇದ್ದು, ಸರ್ಕಾರಿ ಸಂಸ್ಥೆಗಳಿಗೆ ಡಿಜಿಟಲ್ ಪಾವತಿ ಕಡ್ಡಾಯಗೊಳಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
