fbpx
Achivers

ಕ್ರಿಕೆಟ್-ನ ಕೇಳರಿಯದ ಧೀಮಂತ ನಾಯಕ ಕನ್ನಡಿಗ ಶೇಖರ್ ನಾಯಕ್.

ಕ್ರಿಕೆಟ್ನಲ್ಲಿ ೨ ವಿಶ್ವ ಕಪ್ ಗಳನ್ನೂ ಗೆದ್ದಿರುವ ನಾಯಕ ಯಾರು ? ಎಂದರೆ , ನಮಗೆ ತಟ್ಟನೆ ಹೊಳೆಯುವುದು ಮಹೇಂದ್ರ ಸಿಂಗ್ ಧೋನಿ . ಆದರೆ ಬಹಳ ಜನಕ್ಕೆ ತಿಳಿದಿರದ ವಿಚಾರ ಏನೆಂದರೆ , ಆ ಪ್ರಶ್ನೆಗೆ ಮತ್ತೊಂದು ಉತ್ತರವಿದೆ . ಅದು ಹೇಗೆ ಎನ್ನುತೀರಾ ? ಭಾರತದ ಕುರುಡು ಕ್ರಿಕೆಟ್ ತಂಡದ ನಾಯಕ , ೨೦೧೭ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶೇಖರ್ ನಾಯಕ್ ಕೂಡ ಭಾರತಕ್ಕೆ 2 ವಿಶ್ವ ಕಪ್ ಗೆದ್ದಿದ್ದಾರೆ.

ಇವರು ಹುಟ್ಟು ಕುರಡರು , ಇವರಿಗೆ ಕುರುಡುತನ ಅನುವಂಶೀಯ. ೧೯೮೬ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದ ಇವರು , ಕ್ರಿಕೆಟ್ ನ ಅಪರಿಮಿತ ಪ್ರೇಮಿ. ಅವರ ಬಾಲ್ಯಾವಸ್ಥೆಯ ಮೊದಲ ೬ ವರ್ಷ ಪೂರ್ಣ ಕುರುಡರಾಗಿ ಇರುತ್ತಾರೆ. ಒಂದು ದಿನ ಬಿದ್ದಿದ್ದೆ ನೆಪವಾಗಿ ಆಸ್ಪತ್ರೆಗೆ ಹೋದಾಗ , ಅಲ್ಲಿನ ಕಣ್ಣಿನ ಡಾಕ್ಟರ್ , ಇವರಿಗೆ ಆಪರೇಷನ್ ಮಾಡಿದರೆ ಕಣ್ಣು ಬರುವ ಸಾಧ್ಯತೆ ಇದೆ ಎಂದು ಹೇಳುತಾರೆ. ಇದೆ ಇವರ ಬದುಕಿನ ಮಹತ್ವದ ತಿರುವು.

Image result for india blind cricket team captain

ಆ ತಜ್ಞರ ಸಲಹೆಯ ಮೇರೆಗೆ ಇವರಿಗೆ ಆಪರೇಷನ್ ಮಾಡಲಾಗುತ್ತದೆ , ಆ ಆಪರೇಷನ್ ಭಾಗಶಃ ಯಶಸ್ಸಾಗುತ್ತದೆ. ಅವರಿಗೆ ಬಲಗಣ್ಣಿಗೆ ಶೇಕಡಾ 60 ರಷ್ಟು ದೃಷ್ಟಿ ಬರುತ್ತದಾದರೂ , ಎಡ ಕಣ್ಣು ಹಾಗೆಯೆ ಉಳಿಯುತ್ತದೆ.

೧೯೯೪ ರಲ್ಲಿ ಅವನ ತಂದೆ ತೀರಿಕೊಳ್ಳುತಾರೆ. ಆದರೂ ಅವನು ಧ್ರುತಿಗೆಡುವುದಿಲ್ಲ. ಅವನನ್ನು ಶಿವಮೊಗ್ಗದ ಶ್ರೀ ಶಾರದಾ ದೇವಿ ಕುರುಡರ ಶಾಲೆಗೇ ಸೇರಿಸಲಾಗುತ್ತದೆ . ಅವರ ತಾಯಿಗೆ ಮಗನಿಗೆ ಓದಿನ ಕಡೆ ಏಕಾಗ್ರತೆ ಇರಲಿ ಎಂದು ಆಸೆ ಇದ್ದರು ಸಹ ಶೇಖರಿಗಿದ್ದ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಗಮನಿಸಿ ಅದೇ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಹಿಸುತ್ತಾರೆ. ಶೇಖರ್ ಅವರಿಗೆ ತಾಯಿಯೇ ಆಧಾರ ಸ್ಥಂಭವಾಗುತ್ತಾರೆ .

ಆದರೆ ದುರದೃಷ್ಟವಶಾತ್ ೧೯೯೮ ರಲ್ಲಿ ಅವರ ತಾಯಿ ತೀರಿಕೊಳ್ಳುತಾರೆ. ಶೇಖರ್ ಅವರಿಗೆ ದಿಕ್ಕೇ ತೋಚದಂತಾಗುತ್ತದೆ. ಹೊಲದಲ್ಲಿ ಕೆಲಸ ಮಾಡಿ 1000 – 1500 ರೂಪಾಯಿಗಳು ದುಡಿಯಲು ಶುರು ಮಾಡುತಾರೆ. ಎಷ್ಟೇ ಆದರೂ ಪ್ರೀತಿ , ಕಾಳಜಿ ಎನ್ನುವುದು ಅವರ ಪಾಲಿಗೆ ಮರೀಚಿಕೆಯಾಗೇ ಉಳಿಯುತ್ತದೆ. ೨೦೦೦ ಇಸವಿಯಲ್ಲಿ ಮಂಡ್ಯದಲ್ಲಿ ನಡೆದ ಒಂದು ಕ್ರಿಕೆಟ್ ಕ್ರೀಡಾಕೂಟದಲ್ಲಿ ಅವರು ೪೬ ಬಾಲಿಗೆ ೧೩೬ ರನ್ ಹೊಡಿಯುತ್ತಾರೆ.

Image result for india blind cricket team captain

ನಂತರ ಅವರು ಕರ್ನಾಟಕದ ತಂಡಕ್ಕೆ ಆಯ್ಕೆಯಾಗುತ್ತಾರೆ . ಹೀಗೆ ಒಂದೊಂದೇ ಮೆಟ್ಟಿಲುಗಳು, ಸವಾಲುಗಳನ್ನ ದಾಟಿ ಕಡೆಗೆ ೨೦೧೦ ರಲ್ಲಿ ಅವರು ಭಾರತ ತಂಡದ ನಾಯಕನಾಗುತ್ತಾರೆ. ೨೦೧೨ ರಲ್ಲಿ ಇವರ ನಾಯಕತ್ವದ ತಂಡ ಚೊಚ್ಚಲ T20 ವಿಶ್ವ ಕಪ್ ಗೆಲ್ಲುತ್ತದೆ ತದನಂತರ 2014 ರ ಏಕದಿನ ವಿಶ್ವ ಕಪ್ ಕೂಡ ತನ್ನ ಮಡಿಗೇರಿಸಿಕೊಳ್ಳುತದೆ. ಅವರಿಗೆ ಇಷ್ಟೆಲ್ಲಾ ಸಾದಿಸಿದ ನಂತರವೂ ಅಭಿಮಾನಿಗಳ ಬಳಗವಿಲ್ಲ , ಬೆಂಬಲಿಸಲು ಬಿಸಿಸಿಐ ನಂತ ಸಂಸ್ಥೆಗಳಿಲ್ಲ . ಧನಸಹಾಯಕ್ಕೂ ಮುಂದೆಬರಲು ಹೆಚ್ಚು ಜನರಿಲ್ಲ . ಇವರಿಗೆ ಪ್ರಯೋಜಕರು ಕೂಡ ಇತ್ತೀಚಿಗೆ ಬರಲು ಆರಂಭಿಸಿದ್ದಾರೆ. ಇವರ ಈ ಸಾಧನೆಯನ್ನು ಕೇಂದ್ರ ಸರ್ಕಾರ ಗುರುತಿಸಿ , 2017 ರ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿ , ಇವರನ್ನು ಅಭಿನಂದಿಸಿದೆ.

ಈ ಮಾಹಾನುಭಾವನ ಕಥೆ ಎಲ್ಲರಿಗು ಒಂದು ಸ್ಪೂರ್ತಿ , ಇಂಥವರ ಸಂತತಿ ಇನ್ನು ಹೆಚ್ಚಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top