ಫೆಬ್ರವರಿ 19, 2017 (ಭಾನುವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಅಷ್ಟಮೀ ತಿಥಿ,
ಅನುರಾಧ ನಕ್ಷತ್ರ,
ರಾಹುಕಾಲ: ಸಂಜೆ 4:55 pm – 6:23 pm
ಗುಳಿಕಕಾಲ: ಮಧ್ಯಾಹ್ನ 3:28 pm – 4:55 pm
ಯಮಗಂಡಕಾಲ: ಮಧ್ಯಾಹ್ನ 12:33 pm – 2:00 pm
ಮೇಷ
ಮಾರ್ಗಾಯಾಸದಿಂದ ಕಾಲಹರಣವಾದೀತು. ಹಣ ಸದ್ವಿನಿಯೋಗದಿಂದ ಕಾರ್ಯಸಿದ್ಧಿ, ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ನೆಮ್ಮದಿಯ ಜೀವನ ಹತ್ತಿರವಿದೆ.
ವೃಷಭ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ, ಆದಾಯ ಉತ್ತಮವಿದ್ದರೂ ಖರ್ಚು ಜಾಸ್ತಿ, ನ್ಯಾಯಾಲಯ ಕೆಲಸ ಕಾರ್ಯಗಳು ಮುನ್ನಡೆಯಲ್ಲಿ ಸಾಗಲಿವೆ.
ಮಿಥುನ
ಜಲೋತ್ಪನ್ನ ವಸ್ತುಗಳಿಗೆ ಬೇಡಿಕೆ, ವಾಹನ ಖರೀದಿಸುವಾಗ ದುಡುಕದಿರಿ, ವಿದ್ಯಾರ್ಥಿಗಳಿಗೆ ಯಶೋಭಿವೃದ್ಧಿ ಇರುತ್ತದೆ. ವಿವಾಹಕ್ಕೆ ಅನುಕೂಲಕರ ಸಮಯ.
ಕಟಕ
ಬಂಧು ವರ್ಗದವರಿಂದ ಸಹಾಯ, ಪುಣ್ಯ ಕಾರ್ಯದಿಂದ ನೆಮ್ಮದಿ ತಂದೀತು, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭ, ಮನಸ್ಸಿಗೆ ನೆಮ್ಮದಿ ಕಾಣುವಿರಿ.
ಸಿಂಹ
ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇರಲಿ, ಬ್ಯಾಂಕ್ ಹೋಟೆಲ್, ಭೂ ಖರೀದಿ ವ್ಯವಹಾರಸ್ಥರಿಗೆ ಉತ್ತಮ ಲಾಭ ತಂದು ಕೊಡಲಿದೆ. ಆಗಾಗ ಕಿರಿಕಿರಿಯಿಂದ ಬೇಸರ.
ಕನ್ಯಾ
ಪ್ರವಾಸದಿಂದ ಸಂತಸ, ಹಣಕಾಸು ವಿಚಾರದಲ್ಲಿ ಜಾಗ್ರತೆ ಮಾಡಿದಷ್ಟು ಉತ್ತಮ, ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ, ಅಲೆದಾಟ ಜಾಸ್ತಿಯಾಗಲಿದೆ.
ತುಲಾ
ಬಂಧು ವರ್ಗದ ಸಹಕಾರ ಸಂತಸ ತಂದೀತು, ಹಿರಿಯರಿಗೆ ಗೌರವ, ಸನ್ಮಾನ ನಿಮ್ಮ ಸಂಪಾದನೆ ಹೆಚ್ಚಿನ ರೀತಿಯಲ್ಲಿ ವೃದ್ಧಿಯಾಗಲಿದೆ. ಪ್ರೇಮಿಗಳಿಗೆ ಸಂತಸ.
ವೃಶ್ಚಿಕ
ಸಾಂಸಾರಿಕವಾಗಿ ನೆಮ್ಮದಿ ತರುತ್ತದೆ. ವಿದ್ಯೆಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಇರುತ್ತದೆ. ಪ್ರಭಾವಿತ ವ್ಯಕ್ತಿಗಳ ಸಹಕಾರದಿಂದ ಕಾರ್ಯಸಿದ್ಧಿ, ಆರೋಗ್ಯ ಭಾಗ್ಯ.
ಧನು
ದೇವತಾಕಾರ್ಯಗಳಿಂದ ಖರ್ಚು ತಂದೀತು, ಅತೃಪ್ತಿ ಮನೋಭಾವದಿಂದಾಗಿ ಕಸಿ ವಿಸಿಯಾಗಲಿದೆ, ದಿನಾಂತ್ಯದಲ್ಲಿ ಅನಿರೀಕ್ಷಿತ ಶುಭವಾರ್ತೆ ಕೇಳಿ ಬರಲಿದೆ.
ಮಕರ
ಅವಿವಾಹಿತರಿಗೆ ಸಂಭ್ರಮದ ಕಾಲ, ಯಂತ್ರ ಸಾಮಗ್ರಿಗಳಿಗೆ ಖರ್ಚು, ಆದರೂ ಕಾರ್ಯಾನುಕೂಲಕ್ಕೆ ಸಾಧಕವಾದೀತು. ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಅಗತ್ಯ.
ಕುಂಭ
ಸಮಸ್ಯೆಗಳ ಜಂಜಾಟದಿಂದ ಮುಕ್ತರಾಗುವಿರಿ, ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ, ವೃತ್ತಿರಂಗದಲ್ಲಿ ಮುಂಭಡ್ತಿಯ ಸೂಚನೆ.
ಮೀನ
ಪಿತ್ರಾರ್ಜಿತಕ್ಕಾಗಿ ಸ್ವಲ್ಪ ಕಲಹ, ಆಗಾಗ ಕಾರ್ಯಕ್ಷೇತ್ರದಲ್ಲಿ ಶತ್ರುಭೀತಿ, ನಿಮ್ಮ ತಾಳ್ಮೆ-ಸಹನೆ ಅಗತ್ಯ, ಹೋಟೆಲ್ ವ್ಯಾಪಾರದಲ್ಲಿ ಲಾಭ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
