fbpx
ಭವಿಷ್ಯ

ಕೆಲವು ವಸ್ತುಗಳನ್ನು ದಾನ ಮಾಡಿದ್ರೆ ದಷ್ಟ ದರಿದ್ರಗಳು ಬರುತ್ತದೆಯಂತೆ ಹಾಗಂತ ಶಾಸ್ತ್ರ ಹೇಳುತ್ತೆ..

5 ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನ ಮಾಡಬೇಡಿ:

ದಾನವು ಮನಷ್ಯನು ಮಾಡಬೇಕಾದ ಪುಣ್ಯಕಾರ್ಯಗಳಲ್ಲಿ ಮಹತ್ತರವಾದದು. ಅದು ಅವನ ಔದಾರ್ಯತೆಯನ್ನು ಎತ್ತಿ ಹಿಡಿಯುತ್ತದೆ. ಇದು ಪರೋಕ್ಷವಾಗಿ ನಮ್ಮ ಪುಣ್ಯಫಲಗಳನ್ನು ಹೆಚ್ಚಿಸುತ್ತದೆ. ಅನ್ನದಾನ, ಸಂಪತ್ತಿನ ದಾನ ಮುಂತಾದವು ಮನುಷ್ಯನಿಗೆ ಶ್ರೇಯಸ್ಕರ ಅಲ್ಲದೇ ಅವನ ಗ್ರಹಗತಿಯನ್ನೇ ಬದಲಿಸಿ ಸದ್ಗತಿ ದೊರಕಿಸುತ್ತದೆ ಎಂಬ ನಂಬಿಕೆಯಿದೆ.

ಆದರೆ ದಾನ ಮಾಡಬೇಕೆಂದು ಏನೇನೋ ದಾನ ಮಾಡುವುದಲ್ಲ. ಅಲ್ಲದೇ ಅಪಾತ್ರದಾನವೂ ಸಲ್ಲದು. ಇವು ದಾನಿಗಳಿಗೂ ಹಾಗೂ ದಾನ ಪಡೆದವರು ಇಬ್ಬರಿಗೂ ತೊಂದರೆಯನ್ನು ಉಂಟು ಮಾಡುತ್ತದೆ. ಅಂತಹ ದಾನಕ್ಕೆ ನಿಷಿದ್ಧವಾದ ವಸ್ತುಗಳನ್ನು ತಿಳಿಯೋಣ ಬನ್ನಿ.

ಹಳಸಿದ ಆಹಾರ: ಅನ್ನದಾನ ಮಹಾದಾನವೆಂಬುದು ಸತ್ಯ. ಆದರೆ ಎಂದಿಗೂ ಹಾಳಾದ ಆಹಾರ ಪದಾರ್ಥಗಳನ್ನು ದಾನ ಮಾಡಬಾರದು. ಅದು ತರವಲ್ಲ. ಈ ದಾನವು ನಮ್ಮನ್ನು ಅನಗತ್ಯ ತೊಂದರೆಗಳಿಗೆ ಸಿಕ್ಕಿಸುತ್ತದೆ. ಕಾನೂನು ರೀತಿಯ ತೊಂದರೆಗಳಿಗೆ ಸಿಕ್ಕಿಸಿ ನಮ್ಮ ಖರ್ಚನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ಇದು ಮೂಢನಂಬಿಕೆ ಎನಿಸಬಹುದು ಆದರೆ ತಿನ್ನಲು ಯೋಗ್ಯವಾಗಿರದ ಆಹಾರವನ್ನು ಪರರಿಗೆ ದಾನ ಮಾಡಿದೆ ಎನ್ನುವುದು ಎಷ್ಟು ನ್ಯಾಯ ಎಂದು ನೀವೇ ಯೋಚಿಸಿ.

ಹರಿತವಾದ ವಸ್ತುಗಳು: ಚಾಕು, ಚೂರಿ, ಕತ್ತರಿ, ಸೂಜಿ ಇಂತಹುಗಳನ್ನು ದಾನ ಮಾಡಬಾರದು. ಇದರಿಂದ ದುರದೃಷ್ಟ ಬರುವುದಲ್ಲದೆ ಪ್ರೀತಿ ಪಾತ್ರರೊಡನೆ ಮನಸ್ತಾಪವಾಗುತ್ತದೆ ಎಂಬ ನಂಬಿಕೆಯಿದೆ.

ಮುರಿದ ಆಟಿಕೆಗಳು ಹಾಗೂ ಹರಿದ ಬಟ್ಟೆಗಳು: ಮುರಿದ ವಸ್ತುಗಳು ಹಾಗೂ ಹರಿದ ಬಟ್ಟೆಗಳನ್ನು ದಾನ ಕೊಡಬಾರದು. ಅದು ಒಳ್ಳೆಯದಲ್ಲ. ನ್ಯಾಯವಾಗಿ ಯೋಚಿಸಿದರೆ ಯಾರೂ ಅಂತಹ ಕೊಡುಗೆಗಳಿಂದ ಸಂತೃಪ್ತರಾಗುವುದಿಲ್ಲ. ಅವುಗಳನ್ನುವಿಲೇವಾರಿ ಮಾಡಬೇಕಷ್ಟೇ.

ಪೊರಕೆ: ಪೊರಕೆಯನ್ನು ದಾನ ಮಾಡುವುದು ಶ್ರೇಯಸ್ಕರವಲ್ಲ. ಇದರಿಂದ ಲಕ್ಷ್ಮಿ ಒಲಿಯುವುದಿಲ್ಲ. ಅಲ್ಲದೇ ದಾನ ಮಾಡಿದವರಿಗೆ ಆರ್ಥಿಕ ನಷ್ಟವಾಗುವ ನಂಬಿಕೆಯಿದೆ.

 

ಪ್ಲಾಸ್ಟಿಕ್ ಸಾಮಾನುಗಳು: ಸಾಮಾನ್ಯವಾಗಿ ಪ್ಲಾಸ್ಟಿಕ್ ಪದಾರ್ಥಗಳನ್ನು ಯಾರೂ ದಾನ ಕೊಡುವುದಿಲ್ಲ. ಇದರಿಂದ ಉದ್ಯೋಗದಲ್ಲಿ ಪ್ರಗತಿ ಸಾಧ್ಯವಿಲ್ಲ ಎನ್ನುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top