fbpx
ಭವಿಷ್ಯ

8 ಜೂನ್ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೦೮ ಜೂನ್ ೨೦೧೭
ಸೂರ್ಯೋದಯ : ೦೫:೨೬
ಸೂರ್ಯಾಸ್ತ : ೧೯:೧೩
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ
ಪಕ್ಷ : ಶುಕ್ಲ ಪಕ್ಷ
ತಿಥಿ : ಚತುರ್ದಶೀ
ನಕ್ಷತ್ರ : ಅನುರಾಧ
ಯೋಗ : ಸಿದ್ದಿ
ಅಮೃತಕಾಲ : ೧೪:೩೪ – ೧೬:೨೨

ರಾಹು ಕಾಲ: ೧೪:೦೩ – ೧೫:೪೬
ಗುಳಿಕ ಕಾಲ: ೦೮:೫೩ – ೧೦:೩೬
ಯಮಗಂಡ: ೦೫:೨೬ – ೦೭:೧೦

ಮೇಷ (Mesha)


ಆರ್ಥಿಕ ಮುಗ್ಗಟ್ಟು ಸ್ವಾಭಾವಿಕವಾದರೂ ಧನಾಗಮನ ಸದ್ಯದಲ್ಲೇ ತೋರಿ ಬರುವುದು. ವಾಹನ ಸಂಚಾರದ ಬಗೆY ಜಾಗ್ರತೆ ವಹಿಸಿರಿ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಇರುವುದು. ಉದ್ಯೋಗದಲ್ಲಿ ಶುಭವಾರ್ತೆ.

ವೃಷಭ (Vrushabh)


ಪ್ರಣಯ ಪ್ರಸಂಗದಿಂದ ಯುವಕ ಯುವತಿಯರು ಜಾರಿಕೊಳ್ಳುವುದು ಮುಖ್ಯವಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ಅನುಕೂಲವಾಗಲಿದೆ. ಉದ್ಯೋಗದಲ್ಲಿ ಸದ್ಯದಲ್ಲೇ ಅಧಿಕಾರಿ ವರ್ಗಕ್ಕೆ ಮುಂಭಡ್ತಿ ಯೋಗವಿದೆ.

ಮಿಥುನ (Mithuna)


ಶೇರು, ಬ್ಯಾಂಕು ವ್ಯವಹಾರದಲ್ಲಿ ಯಾ ಜಾಮೀನು ವ್ಯವಹಾರಗಳಿಂದ ದೂರವಿರಿ. ಹುಟ್ಟುಹಬ್ಬಗಳಿಂದ ಮನೆಯಲ್ಲಿ ಸಂತಸದ ವಾತಾವರಣ. ದೂರದ ಸಂಬಂಧಿಗಳು ಬರಲಿದ್ದಾರೆ. ದಿನಾಂತ್ಯ ಸಂತಸ.

ಕರ್ಕ (Karka)


ಶೀತ, ಕಫ‌, ತಲೆನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳು ಆಗಾಗ ತೋರಿ ಬರಲಿವೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಆಗಾಗ ಸೋಲು ಯಾ ಗೆಲುವು ಕ್ಷಣಿಕವಾಗಿರುತ್ತದೆ. ದೃಢ ನಿರ್ಧಾರದಿಂದ ಮುಂದುವರಿಯಿರಿ.

ಸಿಂಹ (Simha)


ವ್ಯಾಪಾರಿಗಳ ಜೀವನದಲ್ಲಿ ಗೊಂದಲ, ಸಮಸ್ಯೆಗಳು ತೋರಿ ಬಂದಾವು. ಸಾಂಸಾರಿಕಧಿವಾಗಿ ವ್ಯವಹಾರಧಿದಲ್ಲಿ ಖರ್ಚುವೆಚ್ಚಗಳು ಅಧಿಕವಾದಾವು. ಆದರೂ ಭೀತಿ ಪಡದಿರಿ. ಆತ್ಮ ವಿಶ್ವಾಸ ಪ್ರಯತ್ನದಿಂದ ಮುಂದುವರಿಯಿರಿ.

ಕನ್ಯಾರಾಶಿ (Kanya)


ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ತಾತ್ಕಾಲಿಕವಾಗಿ ದೊರೆಯಲಿವೆ. ಹಿರಿಯರಿಗೆ ತೀರ್ಥಯಾತ್ರೆಯ ಅವಕಾಶಧಿ ಒದಗಿ ಬಂದೀತು. ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳಿರಿ.

ತುಲಾ (Tula)


ಆಗಾಗ ಲಾಭಸ್ಥಾನದ ಶನಿ ಆರ್ಥಿಕ ಸಂಪನ್ನತೆಗೆ ಕಾರಣನಾದಾನು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ಸಾಂಸಾರಿಕವಾಗಿ ನೆಮ್ಮದಿಯ ಜೀವನ ಗೋಚರಕ್ಕೆ ಬರಲಿದೆ.

ವೃಶ್ಚಿಕ (Vrushchika)


ವಿದ್ಯಾರ್ಥಿಗಳಿಗೆ ಮುಂದಿನ ಹೆಚ್ಚಿನ ಅಭ್ಯಾಸದ ಅವಕಾಶಗಳು ಒದಗಿ ಬಂದಾವು. ನೂತನ ವ್ಯಾಪಾರ ವ್ಯವಹಾರಗಳನ್ನು ದೃಢ ನಿರ್ಧಾರಗಳಿಂದ ಮುಂದುವರಿಸಿಕೊಂಡು ಹೋಗುವುದು. ಸಂಚಾರದಲ್ಲಿ ಜಾಗ್ರತೆ.

ಧನು ರಾಶಿ (Dhanu)


ಸದ್ಯದಲ್ಲೇ ಶ್ರೀ ಕುಲದೇವತಾನುಗ್ರಹಧಿದಿಂದ ನಿಮಗೆ ಎಲ್ಲಾ ವಿಧದಲ್ಲಿ ಸಾರ್ಥಕತೆ ಕಂಡು ಬರಲಿದೆ. ಅದ ಕಾರಣ ಎಲ್ಲಾ ವಿಧದಲ್ಲಿ ಮುಂದುವರಿಯಲು ಹೊಸ ಚಿಂತನೆಗೆ, ಕೆಲಸಕಾರ್ಯಗಳಿಗೆ ಸರಿಯಾಗಿ ಆಲೋಚಿಸಿರಿ.

ಮಕರ (Makara)


ದೂರ ಸಂಚಾರದ ಕೆಲಸಕಾರ್ಯ ಗಳು ಸಿದ್ದಿಯಾಗಲಿವೆ. ವೈಯಕ್ತಿಕವಾಗಿ ಶ್ರೀದೇವತಾನುಗ್ರಹ ನಿಮ್ಮನ್ನು ನಾನಾ ರೀತಿಯಲ್ಲಿ ಕಾಪಾಡಲಿದೆ. ಶುಭ ಚಿಂತನೆಗಳಿಗೆ ಚಾಲನೆ ನೀಡಿರಿ. ದಿನಾಂತ್ಯ ಶುಭ.

ಕುಂಭರಾಶಿ (Kumbha)


ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿ ಬರಲಿವೆ. ಸಾಂಸಾರಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ನಿಮಗೆ ಅಚ್ಚರಿ ತಂದೀತು. ವೃತ್ತಿ ರಂಗದಲ್ಲಿ ಉದ್ಯೋಗ ರಂಗದಲ್ಲಿ ಮುನ್ನಡೆ ಇದೆ.

ಮೀನರಾಶಿ (Meena)


ಲಾಭ ಸ್ಥಾನದ ರಾಹು, ಶ್ರೀದೇವತಾನುಗ್ರಹ ನಿಮ್ಮ ಮುನ್ನಡೆಗೆ ಸಾಧಕವಾಗುವುದರಿಂದ ಮುನ್ನಡೆಗೆ ಇದು ಸಕಾಲ. ಆರ್ಥಿಕ, ದೈಹಿಕ, ಮಾನಸಿಕ ಅಭಿವೃದ್ಧಿ ಗೋಚರಕ್ಕೆ ಬರುವುದು. ಸಂಚಾರ ಒದಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top