fbpx
ಆರೋಗ್ಯ

ಮಂಡಿ ನೋವು , ಬೆನ್ನು ನೋವು ಇನ್ಯಾವುದೇ ನೋವಿದ್ರು ಎಲೆಕೋಸು ಒಂದಿದ್ರೆ ಸಾಕು ವಾಸಿ ಆಗೋಕೆ..

ಮಂಡಿ ನೋವು , ಬೆನ್ನು ನೋವು ಇನ್ಯಾವುದೇ ನೋವಿದ್ರು ಎಲೆಕೋಸು ಒಂದಿದ್ರೆ ಸಾಕು ವಾಸಿ ಆಗೋಕೆ..

ಎಲೆಕೋಸು ಕೆಲವು ಜನರಲ್ಲಿ ಗ್ಯಾಸ್ ಟ್ರಬಲ್ ಉಂಟುಮಾಡುತ್ತದೆ ಆದರೆ ಎಲೆಕೋಸಿನಲ್ಲಿ ಇತರ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಅನೇಕ ಜನರಿಗೆ ಗೊತಿಲ್ಲ . ಹೃದಯದ ಕಾಯಿಲೆ ಮತ್ತು ಮಧುಮೇಹ ಸೇರಿದಂತೆ ಅಸಂಖ್ಯಾತ ಆರೋಗ್ಯ ಸಮಸ್ಯೆಗಳನ್ನು ಕಡಿಮೆಗೊಳಿಸಲು ಈ ಎಲೆಗಳಿಗೆ ಸಾಮರ್ಥ್ಯವಿದೆ ಎಂದು ಹಲವಾರು ವೈಜ್ಞಾನಿಕ ಅಧ್ಯಯನಗಳು ಖಚಿತಪಡಿಸಿವೆ.

ನೈಸರ್ಗಿಕ ನೋವು ನಿವಾರಕ :

ಎಲೆಕೋಸು ಎಲೆಗಳನ್ನು ನೋವನ್ನು ತಗ್ಗಿಸಲು ಮತ್ತು ಉರಿಯೂತವನ್ನು ತಡೆಗಟ್ಟಲು ಬಳಸಲಾಗುತ್ತದೆ , ವಿಜ್ಞಾನಿಗಳು ನಡೆಸಿದ ವೈಜ್ಞಾನಿಕ ಅಧ್ಯಯನವು ಅಪೆಜಿನಿನ್ ಎಂಬ ಅಪರೂಪದ ಫ್ಲೊವೊನೈಡ್ ಅನ್ನು ಎಲೆಕೋಸು ಎಲೆಗಳು ಹೊಂದಿದ್ದು , ಉರಿಯೂತ , ನೋವು ಕಡಿಮೆ ಮಾಡುತ್ತದೆಯಂತೆ .

ನೋವು ನಿವಾರಕ ಚಿಕಿತ್ಸೆ ಮಾಡುವ ವಿಧಾನ :

ಕೆಲವು ಎಲೆಕೋಸು ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಸಂಪೂರ್ಣವಾಗಿ ತೊಳೆಯಿರಿ ಆನಂತ್ರ ಒಣಗಲು ಬಿಡಿ .
ತೊಂದರೆಯುಳ್ಳ ಅಥವಾ ನೋವಿನ ಪ್ರದೇಶದ ಮೇಲೆ ಎಲೆಕೋಸು ಎಲೆಗಳನ್ನು ಹಾಕಿ .
ಅಂಟಿಕೊಳ್ಳುವ ಪ್ಲಾಸ್ಟರ್ ಅಥವಾ ಬ್ಯಾಂಡೇಜ್ ಸಹಾಯದಿಂದ ನೋವಿನ ಪ್ರದೇಶದಲ್ಲಿರುವ ಎಲೆಗಳ ಮೇಲೆ ಸುತ್ತಿ.


ರಾತ್ರಿ ಹೊತ್ತು ಹಾಗೆ ಇರಲು ಬಿಟ್ಟು ಬಿಡಿ.
ನೋವು ನಿಲ್ಲುವ ವರೆಗೂ ದಿನ ಹೊಸ ಎಲೆಗಳನ್ನು ಇರಿಸುತ್ತ ಹೋಗಿ
ಕೆಲವು ತಜ್ಞರು ಕೆಂಪು ಎಲೆಕೋಸು ಎಲೆಗಳು ಉತ್ತಮವಾಗಿ ಕೆಲಸ ಮಾಡುತ್ತವೆ ಎಂದು ನಂಬುತ್ತಾರೆ ಆದರೆ ನೀವು ಯಾವುದೇ ರೀತಿಯ ಎಲೆಕೋಸು ಎಲೆಗಳನ್ನು ಬಳಸಬಹುದು.

ಹಾರ್ಟ್ ಅಟ್ಯಾಕ್ ತಪ್ಪಿಸುತ್ತದೆ :

ಆಂಥೋಸಿಯಾನ್ ಎಂಬ ನೀರಿನಲ್ಲಿ ಕರಗಬಲ್ಲ ವರ್ಣದ್ರವ್ಯ ಕೆಂಪು ಎಲೆಕೋಸಿನಲ್ಲಿ ಕಂಡುಬರುತ್ತದೆ . ಉರಿಯೂತವನ್ನು ಕಡಿಮೆ ಮಾಡಲು ಈ ಬಣ್ಣವು ಸಹಾಯ ಮಾಡುತ್ತದೆ ಎಲೆಕೋಸಿನಲ್ಲಿ ಪಾಲಿಫೀನಾಲ್ ಹೆಚ್ಚಿನ ಮಟ್ಟದಲ್ಲಿ ಇದ್ದು ರಕ್ತದೊತ್ತಡ ಕಡಿಮೆ ಮಾಡಿ , ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ನೀವು ಹೃದ್ರೋಗವನ್ನು ತಪ್ಪಿಸಲು ಬಯಸಿದರೆ, ಈ ಸಲಹೆಗಳನ್ನು ಅನುಸರಿಸಿ:

ಪ್ರತಿದಿನವೂ ಎರಡು ಟೇಬಲ್ಸ್ಪೂನ್ ಎಲೆಕೋಸು ಬೇಯಿಸಿ ಸೇವಿಸಿ.
ಅಥವಾ
ಪ್ರತಿದಿನವೂ ಒಂದು ಕಪ್ ಹಸಿ ಎಲೆಕೋಸು ರಸವನ್ನು ಸೇವಿಸಿ.

ಸ್ತನ್ಯಪಾನದಿಂದ ಉಂಟಾಗುವ ಊತ :

ಎಲೆಕೋಸು ಅಹಿತಕರ ಬ್ರಾ ಗಳನ್ನೂ ಧರಿಸಿ ಉಂಟಾಗುವ ಒತ್ತಡ ಮತ್ತು ನೋವು ಶಮನಗೊಳಿಸುತ್ತದೆ ,
ಹಾಗೆಯೇ ಸ್ತನ್ಯಪಾನದಿಂದ ಉಂಟಾಗುವ ಊತ, ನೋವು ಮತ್ತು ಅಸ್ವಸ್ಥತೆಗಳನ್ನು ನಿವಾರಿಸುತ್ತದೆ.

ಟೈಪ್ 2 ಮಧುಮೇಹ :

ಜನರಲ್ಲಿ ಸಕ್ಕರೆಯ ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ಟೈಪ್ 2 ಮಧುಮೇಹವನ್ನು ದೂರ ತಳ್ಳುತ್ತದೆ.ಪ್ರತಿದಿನವೂ ಎರಡು ಟೇಬಲ್ಸ್ಪೂನ್ ಎಲೆಕೋಸು ಬೇಯಿಸಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top