fbpx
ದೇವರು

ಪಂಚಭೂತಗಳನ್ನು ಪ್ರತಿನಿಧಿಸುವ ಶಿವ ದೇವಾಲಯಗಳು ಒಮ್ಮೆ ಭೇಟಿ ಕೊಟ್ರೆ ಪುಣ್ಯ ಬರುತ್ತೆ ಅಂತ ಶಾಸ್ತ್ರಗಳಲ್ಲಿ ಹೇಳ್ತಾರೆ..

ಪಂಚಭೂತಗಳನ್ನು ಪ್ರತಿನಿಧಿಸುವ ಶಿವ ದೇವಾಲಯಗಳು

ಪಂಚಭೂತ ದೇವಾಲಯ ಸ್ಥಳಗಳು ಶಿವನಿಗೆ ಅರ್ಪಿತವಾಗಿವೆ. ಪಂಚ ಎಂದರೆ ಐದು.ಭೂತ ಎಂದರೆ ಮೂಲಧಾತು. ಪಂಚಭೂತಗಳು ಇಂತಿವೆ. ಪೃಥ್ವಿ, ಜಲ, ಅಗ್ನಿ,ವಾಯು  ಮತ್ತು ಆಕಾಶ. ಈ ಸ್ಥಳಗಳು ದಕ್ಷಿಣ ಭಾರತದಲ್ಲಿ ಭಾರೀ ಪ್ರಾಮುಖ್ಯತೆಯನ್ನು ಪಡೆದಿವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ.

ಏಕಾಂಬರೇಶ್ವರ :

ಈ ದೇವಾಲಯವು ತಮಿಳುನಾಡಿನ ಕಾಂಚೀಪುರಂನಲ್ಲಿದೆ. ಇಲ್ಲಿನ ಮಖ್ಯ ಮೂರ್ತಿ ಏಕಾಂಬರೇಶ್ವರ. ಇಲ್ಲಿರುವ ಶಿವಲಿಂಗವು ಭೂ ತತ್ವವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಆ ಶಿವಲಿಂಗವು ಪೃಥ್ವಿ ಲಿಂಗ ಎಂದೇ ಪ್ರಸಿದ್ಧಿ ಪಡೆದಿದೆ.

ಜಂಬುಕೇಶ್ವರ:

ಎರಡನೆಯದು ತಿರುವನೈಕದಲ್ಲಿರುವ ಜಂಬುಕೇಶ್ವರ. ಈ ದೇವಾಲಯವು ಶಿವ ಪಾರ್ವತಿಯರಿಗೆ ಅರ್ಪಿತವಾಗಿದೆ. ಇಲ್ಲಿನ ಶಿವಲಿಂಗ ಜಲ ತತ್ವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಶಿವನನ್ನು ಜಂಬುಕೇಶ್ವರನೆಂದೂ ಪಾರ್ವತಿದೇವಿಯನ್ನು ಅಖಿಲಾಂಡೇಶ್ವರಿಯೆಂದು ಆರಾಧಿಸುತ್ತಾರೆ.

ಅಣ್ಣಾಮಲೈ:

ಮೂರನೆಯದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಶಿವಲಿಂಗ. ಇದು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಶಿವನು ತನ್ನ ಭಕ್ತರನ್ನು ಹರಸಲು ಅರ್ಧನಾರೀಶ್ವರನ ರೂಪದಲ್ಲಿ ಪ್ರತ್ಯಕ್ಷನಾಗಿದ್ದನು ಎಂಬ ಪ್ರತೀತಿಯಿದೆ.

ಕಾಳಹಸ್ತೀಶ್ವರ:

ನಾಲ್ಕನೆಯದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀ ಕಾಳಹಸ್ತೀಶ್ವರ. ಇಲ್ಲಿರುವ ಶಿವಲಿಂಗವು ವಾಯು ತತ್ವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಶಿವನನ್ನು ಕಾಳಹಸ್ತೀಶ್ವರನಾಗಿಯೂ, ಪಾರ್ವತಿಯನ್ನು ಜ್ಞಾನಪ್ರಸೂನಾಂವಬಿಕೆಯೆಂದೂ ಆರಾಧಿಸುತ್ತಾರೆ.

ಚಿದಂಬರಂ:

ತಮಿಳುನಾಡಿನ ಚಿದಂಬರಂನಲ್ಲಿ ಶಿವನು ಅಲೌಕಿಕ ನಾಟ್ಯ ವಿಶಾರದ ನಟರಾಜನ ರೂಪದಲ್ಲಿದ್ದು ಆಕಾಶ ತತ್ವವನ್ನು ಪ್ರತಿನಿಧಿಸುತ್ತಾನೆ. ಈ ದೇವಾಲಯವು ಶಿವ-ವಿಷ್ಣು ಇಬ್ಬರಿಗೂ ಅರ್ಪಿತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top