1997 ರಲ್ಲಿ ಪ್ರಥಮವಾಗಿ ಮಾಡಿದ್ದೆ ಅಲಮಟ್ಟಿ ಡ್ಯಾಮ್ ನ ಎತ್ತರವನ್ನು ಚಂದ್ರಬಾಬು ನಾಯ್ಡುವಿನ ವಿರೋಧದ ನಡುವೆಯು 519 ಮೀಟರ್ ನಿಂದ 524 ಮೀಟರ್ಗೆ ಏರಿಸುವ ವಿನ್ಯಾಸಕ್ಕೆ ಅಂಗೀಕಾರ ನೀಡಿದರು.
ಆದಾಗಿಯೂ ಚಂದಬಾಬು ನಾಯ್ಡು ಮತ್ತು ದೇವೇಗೌಡರ ನಡುವೆ ನಡುವೆ ನಡೆದ ವಾಕ್ ಸಮರದ ದೃಶ್ಯಾವಳಿಗಳು ನಿಮಗಾಗಿ..
ಇದು ಕೃಷ್ಣ ನದಿಯ ನೀರನ್ನು ಹೆಚ್ಚಾಗಿ ಬಳಸುವ ಪ್ರಯತ್ನ ಎಂದು ಅಂದಿನ ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು.
ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದರಿಂದ ಶ್ರೀಶೈಲಂ ಮತ್ತು ನಾಗಾರ್ಜುನ ಸಾಗರ ಜಲ ನಿಲ್ದಾಣಗಳಿಗೆ ನೀರಿನ ಹರಿವು ಪರಿಣಾಮ ಬೀರುತ್ತದೆ ಮತ್ತು ರಾಜ್ಯದ ರೈತರ ಮೇಲೆ ಪರಿಣಾಮ ಬೀರುತ್ತದೆ ಎಂದು ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು .
ಆದರೆ ಈ ನೀರಿನ ಒಂದು ಹನಿಯನ್ನು ಕೃಷಿಗಾಗಿ ಬಳಸವುದಿಲ್ಲ ಬದಲಾಗಿ ಎಲೆಕ್ಟ್ರಿಸಿಟಿ ಉತ್ಪಾದನೆಗೆ ಬಳಕೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದರು .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
