fbpx
ತಿಂಡಿ ತೀರ್ಥ

ಹಿತಿಕಿದ ಅವರೆಕಾಳಿನ ಸಾರು ಮಾಡೋದು ತುಂಬಾ ಸಿಂಪಲ್..

ಹಿತ್ಕವರೆ ಕಾಳಿನ ಸಾಂಬಾರ್

ಕರ್ನಾಟಕದ ಫೇಮಸ್ ಡಿಶ್‍ಗಳಲ್ಲಿ ಹಿತ್ಕವರೆ ಕಾಳಿನ ಸಾಂಬಾರು ಕೂಡ ಒಂದು. ಅವರೆಕಾಯಿ ಸೀಸನ್‍ಲ್ಲಿ ಹೆಚ್ಚಾಗಿ ಇದನ್ನ ಮಾಡ್ತಾರೆ. ಹಲವು ವಿಧಾನಗಳಲ್ಲಿ ಈ ಸಾಂಬಾರು ಮಾಡ್ತಾರೆ.

ಅವುಗಳಲ್ಲಿ ಒಂದು ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
ಹಿತ್ಕವರೆ ಕಾಳು- 2 ಕಪ್
ಕೊತ್ತಂಬರಿ ಬೀಜ 1 ಚಮಚ
ಜೀರಿಗೆ 1 ಚಮಚ
ಉದ್ದಿನ ಬೇಳೆ ಅರ್ಧ ಚಮಚ
ಕಡ್ಲೆ ಬೇಳೆ 1 ಚಮಚ
ಮೆಂತೆ ಕಾಲು ಚಮಚ
ಸಾಸಿವೆ ಕಾಲು ಚಮಚ

ಚಕ್ಕೆ ಅರ್ಧ ಇಂಚು
ಇಂಗು ದೊಡ್ಡ ಚಿಟಿಕೆ
ಲವಂಗ 3
ಶುಂಠಿ ಅರ್ಧ ಇಂಚು
ಬೆಳ್ಳುಳ್ಳಿ 2 ಎಸಳು
ಒಣಮೆಣಸಿನಕಾಯಿ 5,6
ತೆಂಗಿನ ತುರಿ ಅರ್ಧ ಕಪ್
ಬೆಳ್ಳುಳ್ಳಿ 1(ಚಿಕ್ಕದು) ಕಟ್ ಮಾಡಿಕೊಳ್ಳಿ
ಕರಿಬೇವಿನ ಎಲೆ 8 ರಿಂದ 10
ಬೆಲ್ಲ 2 ಚಮಚ(ಇಷ್ಟವಿದ್ದಲ್ಲಿ ಬಳಸಿ)
ಉಪ್ಪು ರುಚಿಗೆ ತಕ್ಕಷ್ಟು
ಹುಣಸೆಹಣ್ಣಿನ ರಸ 1 ಚಮಚ

ಮಾಡುವ ವಿಧಾನ:

ಸಿಪ್ಪೆತೆಗೆದು ಹಿದುಕಿದ ಅವರೆಕಾಳಿಗೆ ಅಂದಾಜು 1 ಕಪ್ ನೀರು ಹಾಗೂ 1 ಚಿಟಿಕೆ ಉಪ್ಪು ಹಾಕಿ ಬೇಯಲು ಇಡಿ.

ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಿವೆ, ಮೆಂತ್ಯೆ, ಚೆಕ್ಕೆ, ಲವಂಗ ಇಂಗು, ಒಣಮೆಣಸಿನಕಾಯಿ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ 2 ರಿಂದ 3 ನಿಮಿಷ ಚೆನ್ನಾಗಿ ಫೈ ಮಾಡಿ ಬಳಿಕ ಪ್ಲೇಟಿಗೆ ಹಾಕಿ.

ನಂತರ ಅದೇ ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಬೆಳ್ಳುಳ್ಳಿ, ಶುಂಠಿ, ಕಟ್ ಮಾಡಿದ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ.

ಬಳಿಕ ಇವುಗಳನ್ನೆಲ್ಲಾ ಒಂದು ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ತುರಿದ ತೆಂಗಿನ ಕಾಯಿ, ಹುಣಸೆ ಹಣ್ಣನ್ನು ಬೆರೆಸಿ ಅರ್ಧ ಕಪ್ ನೀರು ಹಾಕಿ ರುಬ್ಬಿಕೊಳ್ಳಿ.

ಇತ್ತ ಬೆಂದ ಅವರೆಕಾಳಿಗೆ ಬೆಲ್ಲ, ಸ್ವಲ್ಪ ಉಪ್ಪು ಹಾಗೂ, ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಒಗ್ಗರಣೆ ಹಾಕಿದ್ರೆ ಹಿತ್ಕವರೆ ಕಾಳಿನ ಸಾಂಬಾರ್ ಸವಿಯೋದಕ್ಕೆ ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top