fbpx
ಭವಿಷ್ಯ

20 ಜೂನ್ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ೨೦ ಜೂನ್ ೨೦೧೭
ಸೂರ್ಯೋದಯ : ೦೫:೨೭
ಸೂರ್ಯಾಸ್ತ : ೧೯:೧೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ
ಪಕ್ಷ : ಕೃಷ್ಣ ಪಕ್ಷ
ತಿಥಿ : ಏಕಾದಶೀ
ನಕ್ಷತ್ರ : ಅಶ್ವಿನಿ
ಯೋಗ : ಅತಿಗಂಡ
ಅಮೃತಕಾಲ : ೦೯:೦೩ – ೧೦:೩೨

ರಾಹು ಕಾಲ: ೧೫:೫೦ – ೧೭:೩೩
ಗುಳಿಕ ಕಾಲ: ೧೨:೨೨ – ೧೪:೦೬
ಯಮಗಂಡ: ೦೮:೫೫ – ೧೦:೩೯

ಮೇಷ (Mesha)


ದಾಯಾದಿಗಳು ವಿಶ್ವಾಸದ ದುರುಪಯೋಗ ಮಾಡಿಯಾರು. ಕಾರ್ಯಧಿರಂಗದಲ್ಲಿ ಉತ್ತಮ ಅಭಿವೃದ್ಧಿಯು ಗೋಚರಕ್ಕೆ ಬರುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ.

ವೃಷಭ (Vrushabh)


ಗುರುಬಲ ನಿಮ್ಮ ಅಭಿವೃದ್ಧಿ ಕಂಡು ಬರುವಂತಹ ರೀತಿಯಲ್ಲಿ ಗೋಚರಕ್ಕೆ ಬರುವುದು. ಅತಿಥಿಗಳ ಆಗಮನ ನಿಮಗೆ ಲಾಭದಾಯಕವಾಗಲಿದೆ. ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ತೋರಿ ಬಂದಾವು.

ಮಿಥುನ (Mithuna)


ಆರ್ಥಿಕವಾಗಿ ಶನಿಯ ಪ್ರತಿಕೂಲತೆ ನಾನಾ ರೀತಿಯ ಅಡಚಣೆಗೆ ಕಾರಣವಾದಾನು. ಬಲವಾದ ಹಿಡಿತ ವಿರಲಿ. ದಾಂಪತ್ಯದಲ್ಲಿ ಹೆಂಡತಿಯ ಸಹಕಾರ ತೋರಿ ಬಂದರೂ ನಿಮ್ಮ ಮೊಂಡುತನ ಅಡ್ಡಿಯಾಗಲಿದೆ.

ಕರ್ಕ (Karka)


ದಂಪತಿಗಳು ಸಂತಾನಭಾಗ್ಯವನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳು ಅವಕಾಶಧಿಧಿವನ್ನು ಪಡೆಯಲಿದ್ದಾರೆ. ಮನೆ ಯಲ್ಲಿ ಪುಣ್ಯಕಾರ್ಯಗಳು ನಡೆದಾವು. ಬಂಧುಗಳಿಗೆ ಸಹಾಯ ಮಾಡಲು ಹೋಗಿ ಋಣಬಾಧೆ.

ಸಿಂಹ (Simha)


ನಿವೇಶನ ಸ್ಥಿರಾಸ್ತಿ ಖರೀದಿಗೆ ಸಕಾಲ. ಉದ್ಯೋಗದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಕಂಡು ಬರಲಿದೆ. ಬಂಧುಗಳ ಆಗಮನ ಸಂತಸ ತಂದೀತು. ಮೇಲಧಿಕಾರಿಗಳಿಗೆ ಮುಂಭಡ್ತಿಯೋಗವಿದೆ. ದಿನಾಂತ್ಯ ಶುಭವಾರ್ತೆ ಶ್ರವಣ.

ಕನ್ಯಾರಾಶಿ (Kanya)


ಪ್ರಣಯಿಗಳು ಪ್ರೇಮ ಪ್ರಸಂಗದಲ್ಲಿ ಸಿಕ್ಕಿ ಬಿದ್ದಾರು. ಜಾಗ್ರತೆ ವಹಿಸಿರಿ. ಮಕ್ಕಳ ಬಗ್ಗೆ ಸಲ್ಲದ ಅಪವಾದ ಭೀತಿ ತಂದೀತು. ಪ್ರವಾಸದಿಂದ ಸಂತಸ ತಂದೀತು. ಹಾಳು ವ್ಯಸನಿಗಳಿಗೆ ಆರೋಗ್ಯದಲ್ಲಿ ಏರುಪೇರಾದೀತು.

ತುಲಾ (Tula)


ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಸ್ಥಾನಮಾನ ಯೋಗ. ಆರೋಗ್ಯದಲ್ಲಿ ಸುಧಾರಣೆ ತೋರಿ ಬಂದರೂ ಉದಾಸೀನತೆ ಮಾಡದಿರಿ. ಲಾಭದಾಯಕನಾದ ಶನಿ ಆರ್ಥಿಕ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ತುಂಬಿ ಕೊಡಲಿದ್ದಾವೆ.

ವೃಶ್ಚಿಕ (Vrushchika)


ಏಕಾದಶನ ಗುರು ಕಾರ್ಯಲಾಭಕ್ಕೆ ಕಾರಣನಾಗಲಿದ್ದಾನೆ. ಶನಿಯ ಪ್ರತಿಕೂಲತೆ ಆಗಾಗ ಆರ್ಥಿಕವ್ಯಯ ಕಳ್ಳಕಾಕರ ಭೀತಿ, ಕಳ್ಳತನಕ್ಕೆ ಕಾರಣವಾಗಬಹುದು. ಜಾಗ್ರತೆ ವಹಿಸಿರಿ. ಆರ್ಥಿಕವಾಗಿ ಕೊಂಡುಕೊಳ್ಳುವಿಕೆಯಲ್ಲಿ ಗಮನ ಇರಲಿ.

ಧನು ರಾಶಿ (Dhanu)


ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ನಿಮ್ಮ ಖಜಾನೆ ಬಗ್ಗೆ ಜಾಗ್ರತೆ ವಹಿಸಿರಿ. ದುಡಿಮೆ ಹೆಚ್ಚಾದರೂ ದುಡಿಮೆಗೆ ತಕ್ಕ ಆದಾಯ ಸಿಗಲಾರದು. ಯೋಗ್ಯ ವಯಸ್ಕರಿಗೆ ಸ್ತ್ರೀ ಲಾಭವಿದೆ. ಸಂಚಾರದಲ್ಲಿ ಜಾಗ್ರತೆ.

ಮಕರ (Makara)


ವಿದೇಶ ಸಂಚಾರದಲ್ಲಿ ಕಾರ್ಯಸಿದ್ಧಿಯಾಗಲಿದೆ. ಯೋಗ್ಯ ಜನರಿಗೆ ಸಾಮಾಜಿಕ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಧನ ಲಾಭವಿದ್ದರೂ ಖರ್ಚು ನಿಲ್ಲದು. ನಿರುದ್ಯೋಗಿಗಳಿಗೆ ಪ್ರಯತ್ನಬಲದಿಂದ ಉದ್ಯೋಗ ಲಾಭವಿದೆ.

ಕುಂಭರಾಶಿ (Kumbha)


ಆಗಾಗ ಅತಿಥಿಗಳ ಆಗಮನ ಸಂತಸ ತಂದೀತು. ವೈಯಕ್ತಿಕವಾಗಿ ಆರೋಗ್ಯ ಭಾಗ್ಯ ವರ್ಧಿಸಿದರೂ ಜಾಗ್ರತೆ ವಹಿಸಿರಿ. ದೇವತಾಕಾರ್ಯಗಳಿಗಾಗಿ ಸಮಯ ವ್ಯಯವಾದೀತು. ಮನೆಯಲ್ಲಿ ಶಾಂತಿ, ಸುಖ ಗೋಚರಕ್ಕೆ ಬರಲಿದೆ.

ಮೀನರಾಶಿ (Meena)


ಕಾರ್ಮಿಕರ ಅಲಸ್ಯದಿಂದ ದಂಡ ಕಟ್ಟುವಂತಾದೀತು. ಅನಿರೀಕ್ಷಿತ ರೀತಿಯಲ್ಲಿ ಸ್ಥಾನಮಾನಕ್ಕೆ ಚ್ಯುತಿ ಬರದಂತೆ ವರ್ತಿಸಿರಿ. ಅತೀ ಸ್ನೇಹಿತರೇ ನಿಮ್ಮ ಬೆನ್ನಿಗೆ ಚೂರಿ ಹಾಕಿಯಾರು. ನೆರೆಹೊರೆಯವರಲ್ಲಿ ಜಾಗ್ರತೆ ಇರಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top