fbpx
ಆರೋಗ್ಯ

ಬಿರುಕು ಬಿಟ್ಟ ಹಿಮ್ಮಡಿಗೆ ಆಯುರ್ವೇದದ ಮನೆಮದ್ದುಗಳು ಮಾಡ್ಕೊಳ್ಳಿ ಸುಂದವಾದ ಕಾಲು ನಿಮ್ಮದಾಗುತ್ತೆ ..

ಬಿರುಕು ಬಿಟ್ಟ ಹಿಮ್ಮಡಿ ಗೆ ಆಯುರ್ವೇದದ ಮನೆಮದ್ದುಗಳು ..

ಹಿಮ್ಮಡಿ ಬಿರುಕು ಬಿಡಲು ಹಲವಾರು ಕಾರಣಗಳಿವೆ ಮುಖ್ಯವಾಗಿ

ದೇಹದಲ್ಲಿ ಉಷ್ಣತೆ ಅತಿಯಾಗುವುದು
ಕರಿದ ತಿಂಡಿಗಳ ಸೇವನೆ
ಹೊಗೆ ಸೊಪ್ಪು ಅತಿಯಾದ ಧೂಮಪಾನ
ಅತಿಯಾದ ಕಾಫಿ ಮತ್ತು ಟೀ ಸೇವನೆ ಮಾಡುವುದು
ವಾತ ಪ್ರಕೃತಿಯವರಲ್ಲಿ ಈ ಸಮಸ್ಯೆ ಸಾಮಾನ್ಯ

ಹಿಮ್ಮಡಿ ಬಿರುಕು ಸಮಸ್ಯೆಗೆ ಪರಿಹಾರಗಳು

ಎರಡು ಚಿಟಕೆ ತ್ರಿಫಲಾ ಮತ್ತು ಅಷ್ಟೇ ಪ್ರಮಾಣದ ಹಿಪ್ಪೆ ಚಕ್ಕೆಯ ಚೂರ್ಣವನ್ನು ತೆಗೆದುಕೊಂಡು ರಾತ್ರಿ ಪಾದಗಳಿಗೆ ಹಚ್ಚುವುದು.

ನಿಂಬೆ ರಸವನ್ನು ಒಡೆದ ಚರ್ಮಕ್ಕೆ ಹಚ್ಚಿ ಒಂಬುದು ಗಂಟೆಯ ನಂತ್ರ ಬೆಣ್ಣೆ ಅಥವಾ ಹಾಲಿನ ಕೆನೆಯನ್ನು ತಿಕ್ಕಬೇಕು .

ಶ್ರೀ ಗಂಧವನ್ನು ಬೆಣ್ಣೆಯಲ್ಲಿ ತೇಯ್ದು ರಾತ್ರಿ ಹಚ್ಚಬೇಕು .

ಮಾವಿನ ಮರದ ಅಂಟನ್ನು ಹಚ್ಚಬೇಕು .

ಐವತ್ತು ಗ್ರಾಂ ಗರುಗ 20 ಗ್ರಾಂ ಮುಟ್ಟಿದರೆ ಮುನಿ 100 ಗ್ರಾಂ ಎಳ್ಳೆಣ್ಣೆ ಅರೆದು ಎಣ್ಣೆಯಲ್ಲಿ ಫ್ರೈ ರೀತಿಯಲ್ಲಿ ಮಾಡಿ 10 ಗ್ರಾಂ ನಷ್ಟು ಪಚ್ಚ ಕರ್ಪೂರವನ್ನು ಸೇರಿಸಿ ಹಚ್ಚಬೇಕು.

ಜೇನು ಮೇಣ , ಕಳ್ಳಿ ಹಾಲು , ಎಕ್ಕ ಹಾಲು ಸಮ ಪ್ರಮಾಣದಲ್ಲಿ ಸೇರಿಸಿ ಹಚ್ಚಬೇಕು .

ಸದಾ ಮೃದುವಾದ ಪಾದ ರಕ್ಷೆಗಳನ್ನೇ ಬಳಸಬೇಕು ಮತ್ತು ಉಷ್ಣ ಪದಾರ್ಥಗಳನ್ನು ಸೇವನೆ ಮಾಡಬಾರದು ಹಾಗೆಯೇ ಚಿಂತೆ ಜಾಗರಣೆ , ಕಡಲೆ , ಉದ್ದು ,ಅವರೇ ಬೆಳೆಗಳ ಸೇವನೆ ನಿಲ್ಲಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top