fbpx
ಭವಿಷ್ಯ

26 ಜೂನ್ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೨೬ ಜೂನ್ ೨೦೧೭
ಸೂರ್ಯೋದಯ : ೦೫:೨೯
ಸೂರ್ಯಾಸ್ತ : ೧೯:೧೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಶುಕ್ಲ ಪಕ್ಷ
ತಿಥಿ : ತದಿಗೆ
ನಕ್ಷತ್ರ : ಪುಷ್ಯ
ಯೋಗ : ವ್ಯಾಘಾತ
ಅಮೃತಕಾಲ : ೧೫:೩೨ – ೧೬:೫೯

ರಾಹು ಕಾಲ: ೦೮:೫೩ – ೧೦:೩೬
ಗುಳಿಕ ಕಾಲ: ೦೫:೨೭ – ೦೭:೧೦
ಯಮಗಂಡ: ೧೪:೦೨ – ೧೫:೪೫

ಮೇಷ (Mesha)


ಚಿನ್ನ, ಬೆಳ್ಳಿ ವರ್ತಕರಿಗೆ ಹೂಡಿದ ಬಂಡವಾಳದಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ. ಮಹತ್ವದ ಕೆಲಸಗಳು ವಿಳಂಬಗತಿಯಲ್ಲಿ ನಡೆದಾವು ನೌಕರ ವರ್ಗಕ್ಕೆ ಅಸಮಾಧಾನ ತಂದೀತು.

ವೃಷಭ (Vrushabh)


ಬಂಡವಾಳದಾರರಿಗೆ ಲಾಭದಾಯಕ ಆದಾಯ ತಂದರೂ ವಂಚನೆಗೆ ಆಸ್ಪದವಾದೀತು. ವೈವಾಹಿಕ ಸಂಬಂಧಗಳು ಜೋಡಣೆಯಾಗಲಿವೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ.

ಮಿಥುನ (Mithuna)


ಆಗಾಗ ಉದ್ವೇಗದ ಸ್ಥಿತಿ ಯಿಂದಾಗಿ ಕೆಲವೊಮ್ಮೆ ವಿವೇಚನೆ ಕೈಕೊಟ್ಟಿàತು. ವೃತ್ತಿರಂಗದಲ್ಲಿ ನಯವಂಚಕರ ಕೈ ಮೇಲಾಗಿ ಅಪಮಾನ ಪ್ರಸಂಗ ಬಂದೀತು. ದಿನಾಂತ್ಯ ಶುಭವಿದೆ.

ಕರ್ಕ (Karka)


ಆಗಾಗ ಆರ್ಥಿಕವಾಗಿ ಕೊರತೆಗಳು ಕಾಣಿಸಲಿವೆ. ವೃತ್ತಿರಂಗದಲ್ಲಿ ನೌಕರ ವರ್ಗಕ್ಕೆ ಕಲಹಕ್ಕೆ ಕಾರಣವಾಗಬಹುದು. ನಿರುದ್ಯೋಗಿಗಳಿಗೆ ಹೆಚ್ಚಿನ ಸಮಾಧಾನಸಿಗದು. ಸರಕಾರದಲ್ಲಿ ಜಾಗ್ರತೆ.

ಸಿಂಹ (Simha)


ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯೋಗ್ಯ ವಯಸ್ಕರ ಸಂಬಂಧಗಳು ಜಾರಿಗೊಳ್ಳಲಿವೆ. ವ್ಯಾಪಾರ, ವ್ಯವಹಾರಗಳು ಲಾಭವಲ್ಲವಾದರೂ ನಷ್ಟವಾಗದು.

ಕನ್ಯಾರಾಶಿ (Kanya)


ಶ್ರೀ ದೇವತಾ ಕಾರ್ಯಗಳಿಗಾಗಿ ಧನವ್ಯಯ ವಾಗಬಹುದು. ಸಾಂಸಾರಿಕವಾಗಿ ಅನಾವಶ್ಯಕವಾಗಿ ಖರ್ಚುಗಳು ಅಧಿಕವಾಗಲಿವೆ. ದಾಂಪತ್ಯದಲ್ಲಿ ಹೆಚ್ಚಿನ ಸಮಾಧಾನ, ಸಂಯಮವಿರಲಿ. ದಿನಾಂತ್ಯ ಶುಭ.

ತುಲಾ (Tula)


ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗೆ ಗುರಿಯಾಗದಿರಿ. ಖರ್ಚುವೆಚ್ಚಗಳಲ್ಲಿ ಸದ್ಯದಮಟ್ಟಿಗೆ ಹಿಡಿತ ಬಿಗಿಯಾಗಿರಲಿ. ಹಿರಿಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.

ವೃಶ್ಚಿಕ (Vrushchika)


ವೃತ್ತಿರಂಗದಲ್ಲಿ ನಿಮ್ಮ ಪ್ರಯತ್ನಬಲ ಸಾರ್ಥಕ ವಾದೀತು. ಆಗಾಗ ಅಡೆತಡೆಗಳು ತೋರಿಬಂದರೂ ಕಾರ್ಯಸಾಧನೆಗೆ ಶ್ರೀ ದೇವತಾನುಗ್ರಹವಿದೆ. ಕಂಕಣಬಲ ಗಟ್ಟಿಯಾಗಲಿದೆ. ಇದು ಉತ್ತಮ ಕಾಲ.

ಧನು ರಾಶಿ (Dhanu)


ವಕ್ರ ಶನಿ ಪ್ರತಿಕೂಲ ಪರಿಣಾಮವನ್ನು ತೋರಿಸಿಯಾನು ಆದರೂ ಲಾಭಸ್ಥಾನದ ಕೇತು ಅಡೆತಡೆಗಳನ್ನು ದೂರಮಾಡಿ ಕಾರ್ಯಸಾಧಕನಾದಾನು. ಸಂಚಾರದಲ್ಲಿ , ಚಾಲನೆಯಲ್ಲಿ ಜಾಗ್ರತೆ ಇರಲಿ.

ಮಕರ (Makara)


ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಿದರೂ ಪ್ರಯತ್ನಬಲ ಅತೀ ಅಗತ್ಯ. ಆರ್ಥಿಕವಾಗಿ ಯಾರನ್ನೂ ನಂಬದಂತಹ ಪರಿಸ್ಥಿತಿ ತಂದೀತು. ಕೃಷಿಕರಿಗೆ ಸಹಕಾರ ಕಂಡು ಬಂದೀತು.

ಕುಂಭರಾಶಿ (Kumbha)


ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ತೋರಿಬಂದಾವು. ನವ ದಂಪತಿಗಳಿಗೆ ಸಂತಾನ ಭಾಗ್ಯಕ್ಕೆ ವಿಳಂಬ ತಂದೀತು. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ನಷ್ಟವಾಗದಂತೆ ಜಾಗ್ರತೆ ವಹಿಸಿರಿ.

ಮೀನರಾಶಿ (Meena)


ಹಿರಿಯರಿಗೆ ತೀರ್ಥಯಾತ್ರಾ ಭಾಗ್ಯವಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಅಡೆತಡೆ ಕಂಡು ಬರಲಿದೆ. ದೇಹಾರೋಗ್ಯ ಆಗಾಗ ಏರುಪೇರಾದೀತು. ಸಂಚಾರದಿಂದ ಕಾರ್ಯಸಿದ್ಧಿಯಾದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top