fbpx
ದೇವರು

ಶ್ರೀರಾಮನ ಜನ್ಮಸ್ಥಳ ಅಯೋಧ್ಯೆ ಅರವತ್ತು ಲಕ್ಷ ಮಂದಿ ಕೊರಿಯನ್ನರಿಗೆ ತವರಂತೆ ಯಾಕೆ ಗೊತ್ತಾ?

ಅರವತ್ತು ಲಕ್ಷ ಮಂದಿ ಕೊರಿಯನ್ನರು ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯನ್ನ ತಮ್ಮ ತವರು ಎಂದು ಭಾವಿಸಿದ್ದಾರೆ ಏಕೆ ಗೊತ್ತೇ…!

ಅಯೋಧ್ಯಾ ನಗರವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ.ಅಯೋದ್ಯೆ ಮತ್ತು ಕೊರಿಯಾಗಳ ಇತಿಹಾಸಗಳಲ್ಲಿ ಒಂದಕ್ಕೊಂದು ಸಂಬಂಧವಿದೆ ಎಂದು ಹೇಳಿದರೆ ತಾವು ನಂಬಲೇಬೇಕು.ಪ್ರತಿ ವರ್ಷವೂ ಸಾವಿರಾರು ದಕ್ಷಿಣ ಕೊರಿಯಾದ ಪ್ರವಾಸಿಗರು ಉತ್ತರಪ್ರದೇಶದ ಅಯೋಧ್ಯಾಕ್ಕೆ ಭೇಟಿ ನೀಡುತ್ತಾರೆ.ಪ್ರತಿವರ್ಷ ಸುಮಾರು ಅರವತ್ತು ಲಕ್ಷ ಕೊರಿಯನ್ನರು ಇಲ್ಲಿಗೆ ಭೇಟಿ ನೀಡುತ್ತಾರೆ

ಇವರು ಶ್ರೀ ರಾಮನ ಜನ್ಮಭೂಮಿಗೆ ಬರುವ ಕಾರಣ ಅವರ ದೇಶದ ದಂತಕಥೆಯಾಗಿರುವ ರಾಣಿ ಹೇಯ್ ಹ್ವಾಂಗ್. ” ಸುರಿರತ್ನ” ಎಂದೂ ಸಹ ಕರೆಯಲ್ಪಡುವ ಇವರಿಗೆ ಗೌರವ ಸೂಚಿಸಲು ಬರುತ್ತಾರೆ ಎಂದು ಇತಿಹಾಸ ಹೇಳುತ್ತದೆ.ಇತಿಹಾಸಕಾರರು ಇವಳನ್ನು ಗಯಾ ಸಾಮ್ರಾಜ್ಯದ ಮೊದಲ ರಾಣಿ ಎಂದು ಹೇಳುತ್ತಾರೆ.

ಇತಿಹಾಸದ ಪ್ರಕಾರ ರಾಣಿ ಸುರಿರತ್ನ ರವರ ಮೂಲ ಸ್ಥಳ ಅಯೋದ್ಯೆಯಾಗಿದ್ದು ಅವರು ತಮ್ಮ ಹದಿನಾರನೇ ವಯಸಿನಲ್ಲಿ ಕ್ರಿ.ಶ.48ರಲ್ಲಿ ದಕ್ಷಿಣ ಕೋರಿಯಾಗೆ ತೆರಳಿ ಅಲ್ಲಿನ ರಾಜ ಕರಕ್ ಕ್ಲಾನ್ ನ “ಕಿಮ್ ಕುರೋ” ರನ್ನುಮದುವೆಯಾಗಿ ಕೊರಿಯಾದಲ್ಲಿ ಉತ್ತಮವಾಗಿ ಆಡಳಿತವನ್ನು ಮಾಡಿ ದಂತಕತೆಯಾಗಿ ಉಳಿಯುತ್ತಾಳೆ. ಹಾಗಾಗಿ “ಕರಕ್ ಕ್ಲಾನ್” ಪ್ರಾಂತ್ಯದ ಸುಮಾರು ಅರವತ್ತುಲಕ್ಷ ಜನರು ಪ್ರತೀ ವರ್ಷವೂ ಅಯೋದ್ಯೆಗೆ ಬಂದು ರಾಣಿ “ಸುರಿರತ್ನ” ರವರಿಗೆ ಗೌರವ ಸಲ್ಲಿಸುತ್ತಾರೆ ಎಂದು ಹೇಳಲಾಗುತ್ತದೆ.

ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿರವರು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಶ್ರೀ ರಾಮನ ಜನ್ಮಸ್ಥಳ ಅಯೋದ್ಯೆಯಲ್ಲಿ ರಾಣಿ ಹೇಯ್ ಹ್ವಾಂಗ್. ” ಸುರಿರತ್ನ”ರ ಒಂದು ಸ್ಮಾರಕವನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.ರಾಣಿ ಹೇಯ್ ಹ್ವಾಂಗ್. ” ಸುರಿರತ್ನ”ರ ಸ್ಮಾರಕವನ್ನು ನಿರ್ಮಿಸಲು ದಕ್ಷಿಣ ಕೊರಿಯಾದ ಸರ್ಕಾರವು ಸಹ ಒಪ್ಪಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top