fbpx
ಜೀವನ ಕ್ರಮ

ಮೇಲಿರೋನಿಗೆ ಬುದ್ದಿ ಇಲ್ಲ ಅಂದ್ರೆ ಅವ್ನ ಕೆಳ್ಗಿರೋರ ಕಥೆ ಕೇಳ್ಬೇಕಾ ? ಕಥೆ ..

ಮೂರ್ಖರ  ರಾಜ ..

 

ಒಂದು ದಿನ ರಾಜ್ಯದ ರಾಜ ಮತ್ತು ಮಂತ್ರಿ ಒಂದು ಉದ್ಯಾನವನದಲ್ಲಿ ಓಡಾಡುತ್ತಿದ್ದರು. ಆಗ ರಾಜ ಮಂತ್ರಿಯ ಬಳಿ “ಮಂತ್ರಿಗಳೇ,ನಮ್ಮ ರಾಜ್ಯದಲ್ಲಿ ಮೂರ್ಖರ ಸಂಖ್ಯೆ ಹೆಚ್ಚೋ? ಬುದ್ಧಿವಂತರ ಸಂಖ್ಯೆ ಹೆಚ್ಚೋ?,”ಎಂದು ಕೇಳಿದ.

ಈ ಪ್ರಶ್ನೆಗೆ ಮಂತ್ರಿಯು  “ಮೂರ್ಖರ ಸಂಖ್ಯೆಯೇ ಹೆಚ್ಚು ಸ್ವಾಮಿ”ಎಂದು ರಾಜನಿಗೆ ಉತ್ತರಿಸುತ್ತಾನೆ.

ಮಂತ್ರಿಯ ಮಾತನ್ನು ಒಪ್ಪದ ರಾಜನು “ಇಲ್ಲ..ಇಲ್ಲ..ನಮ್ಮ ರಾಜ್ಯದಲ್ಲಿ ಬುದ್ದಿವಂತರೇ  ಹೆಚ್ಚಿದ್ದಾರ ಮತ್ತು ಮೂರ್ಖರ ಸಂಖ್ಯೆ ಕಡಿಮೆ’ ಎಂದನು.

ಇಬ್ಬರ ನಡುವೆ ವಾದಗಳು ಜೋರಾಯಿತು.   “ನಮ್ಮ ನಮ್ಮಲ್ಲಿ ಯಾಕೆ ವಾದ,? ಪರೀಕ್ಷಿಸಿ ನೋಡೋಣ’ ಎಂದು ಅದನ್ನು ಪರೀಕ್ಷೆ ಮಾಡಲು ರಾಜ ಡಂಗೂರ ಸಾರಿಸಿದ.

“ನಮ್ಮ ರಾಜ್ಯದಲ್ಲಿರುವ ಜನ ತಮ್ಮ ಮೂರ್ಖತನ ಪ್ರದರ್ಶಿಸಬೇಕು. ಯಾರು ಅತಿ ಹೆಚ್ಚು ಮೂರ್ಖತನ ಪ್ರದರ್ಶಿಸುತ್ತಾರೋ ಅವರಿಗೆ ಬಹುಮಾನ ನೀಡಲಾಗುತ್ತದೆ”ಎಂದು  ಡಂಗೂರ ಸಾರಿಸಿದ.

ಡಂಗೂರು ಕೇಳಿದ ಜನ ಅರಮನೆಗೆ ಮುಗಿಬಿದ್ದು ತಮ್ಮ ಮೂರ್ಖತನವನ್ನು ಪ್ರದರ್ಶಿಸತೊಡಗಿದರು.

ಒಬ್ಬನು “ಮಹಾ ಪ್ರಭು ನಾನು ಪ್ರತಿದಿನ ಮೀನುಗಳಿಲ್ಲದ ನದಿಯಲ್ಲಿ ಮೂಟೆಗಟ್ಟಲೆ ಮೀನುಗಳನ್ನು ಹಿಡಿಯುತ್ತೇನೆ “ಎಂದು ಹೇಳುತ್ತಾನೆ

ಅಲ್ಲೇ ಇದ್ದ ಮತ್ತೊಬ್ಬ “ಸ್ವಾಮೀ ನಾನು ಕತ್ತೆಗೆ ಭಾರ ಆಗಬಾರದೆಂದು ಮೂಟೆ ಹೊತ್ತಿದ್ದ ಕತ್ತೆಯನ್ನು ನನ್ನ  ಹೆಗಲಮೇಲೆ ಹೊತ್ತುಕೊಳ್ಳುತ್ತೇನೆ”.ಎಂದನು

ಇದನ್ನು ಕಂಡು ಆಶ್ಚರ್ಯನಾದ ರಾಜ ಮಂತ್ರಿಯಲ್ಲಿ ಕೇಳಿದ, ” ಮಂತ್ರಿಗಳೇ, ನಮ್ಮ ರಾಜ್ಯದಲ್ಲಿ ಇಷ್ಟು ಮಂದಿ ಮೂರ್ಖರೇ ಇದಾರೆ? ಇದೆಲ್ಲ ನಿನಗೆ ಹೇಗೆ ಗೊತ್ತಿತ್ತು?’ ಎಂದು ಕೇಳುತ್ತಾನೆ.

ಆಗ ಮಂತ್ರಿಯು ರಾಜನಲ್ಲಿ, “ಇಂಥ ಮೂರ್ಖರ ಬಗ್ಗೆ ತಿಳಿಯುದಕ್ಕಾಗಿ  ಸಮಯ ಹಾಳು ಮಾಡುತ್ತಿರುವ ಮಹಾಪ್ರಭುಗಳೇ ಮೂರ್ಖರಾಗಿರುವಾಗ ಅವರ ರಾಜ್ಯದಲ್ಲಿ ಇರುವ  ಪ್ರಜೆಗಳು ಮೂರ್ಖರಾಗಿರುತ್ತಾರೆಯಲ್ಲವೇ”ಎಂದು ಹೇಳಿದಾಗ ರಾಜನಿಗೆ ತನ್ನ ಮೂರ್ಖತನದ ಅರಿವಾಗುತ್ತದೆ.

 

ಕತೆಯ ನೀತಿ: ಮೂರ್ಖತನದ ಕೆಲಸಕ್ಕೆ ಸಮಯ ಹಾಳುಮಾಡುವುದೂ ಸಹ ಮೂರ್ಖತನವೇ

(It’s foolish to waste time for stupid work )

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top