fbpx
ಆರೋಗ್ಯ

ಕರ್ಪೂರದ ಆರತಿ ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣ.

ಕರ್ಪೂರದ ಆರತಿ ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣ.

ಹಿಂದೂ ಸಂಪ್ರದಾಯದಲ್ಲಿ ಅನೇಕ ಆಚರಣೆಗಳು ಇರುವ ವಿಷಯ ಎಲ್ಲರಿಗೂ ಗೊತ್ತು.ಅನಾದಿ ಕಾಲದಿಂದಲೂ ಹಿಂದೂಗಳು ಈ ಆಚರಣೆಗಳನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.ಮುಖ್ಯವಾಗಿ ದೇವರ ಪೂಜೆ ಮಾಡುವಾಗ,ದೀಪ,ಧೂಪ,ಅಗರ್ಭತ್ತಿ ಮತ್ತು ಕರ್ಪೂರದ ಆರತಿ ಮಾಡುವುದು .ಇವೆಲ್ಲವುದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಕರ್ಪೂರದ  ಆರತಿ ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು.ಅದರಿಂದ ನಮಗಾಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಇಂದು ವಿವರವಾಗಿ ತಿಳಿದುಕೊಳ್ಳೋಣ…

(Cinnamon camphora ) ಸಿನ್ನಮಾನ್ ಕೆಂಫೋರ ಎಂಬ ಹೆಸರಿನ ಒಂದು ವೃಕ್ಷದಿಂದ ಕರ್ಪೂರವನ್ನು ತಯಾರಿಸುತ್ತಾರೆ.ಇದನ್ನು ಹೆಚ್ಚಾಗಿ ಹಿಂದೂಗಳ ಪೂಜಾ ಕಾರ್ಯದಲ್ಲಿ ಉಪಯೋಗಿಸುತ್ತಾರೆ.

ಪೂಜಾ ಸಮಯದಲ್ಲಿ ಕರ್ಪೂರದ ಆರತಿಯ ರೂಪದಲ್ಲಿ ದೇವರಿಗೆ ಬೆಳಗುವ ಸಮಯದಲ್ಲಿ ಬರುವ ಹೊಗೆ ನಮ್ಮ ದೇಹ ಮತ್ತು ಆರೋಗ್ಯದ ಮೇಲೆ ಸತ್ಪರಿಣಾಮಗಳನ್ನು ಬೀರುತ್ತದೆ.

ಕರ್ಪೂರದಿಂದ ಬರುವ ಹೊಗೆಯಿಂದ ಅಸ್ತಮಾ,ಟೈಫಾಯ್ಡ್ ,ಮನಸ್ಸಿನ ದುಗುಡ, ಬೆಚ್ಚಿ ಬೀಳುವಿಕೆ, ಹಿಸ್ಟಿರಿಯಾ, ಕೀಲುಗಳ ನೋವು ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಈ ಹೊಗೆಯಿಂದ ವಾತಾವರಣದಲ್ಲಿರುವ  ಕೀಟಾಣುಗಳು, ಸಣ್ಣ ಕ್ರಿಮಿಗಳು ಮತ್ತು ವೈರಸ್ಗಳು  ನಾಶವಾಗುತ್ತವೆ.

ಅಷ್ಟೇ ಅಲ್ಲದೇ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ, ಚರ್ಮದ ಖಾಯಿಲೆಗಳು ಗುಣವಾಗುತ್ತವೆ.ಕರ್ಪೂರದ ವಾಸನೆ ಕೆಲವರಿಗೆ ಇಷ್ಟವಾಗುವುದಿಲ್ಲ ಆದರೆ ಕರ್ಪೂರದ ವಾಸನೆಯನ್ನು  ಸ್ವರ್ಗ ಸುಖಕ್ಕೆ ಹೋಲಿಸಿದ್ದಾರೆ.ಕರ್ಪೂರವೂ ಬೂದಿಯೂ ಸಹ ಉಳಿಯದೆ ಸಂಪೂರ್ಣವಾಗಿ ಉರಿದು ಹೋಗುತ್ತದೆ.ಆದ್ದರಿಂದ ದೇವರ ಪೂಜೆಯಲ್ಲಿ ಇದನ್ನು ಉಪಯೋಗಿಸುತ್ತಾರೆ.

ಕರ್ಪೂರವನ್ನು ಉಪಯೋಗಿಸಿದರೆ ಹೇಗೆ ಸಂಪೂರ್ಣವಾಗಿ ಉರಿದು ಹೋಗುತ್ತದೆಯೋ ಹಾಗೆ ಅದೇ ರೀತಿ ದೇವರ ಎದುರಿಗೆ ನಿಂತಿರುವವರು ಅಹಂಕಾರವು ಉರಿದುಹೋಗಿ ಪರಿಶುದ್ಧರಾಗುತ್ತಾರಂತೆ.

ಕರ್ಪೂರವನ್ನು ಉಪಯೋಗಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಉತ್ಪತ್ತಿಯಾಗಿ ಆ ಶಕ್ತಿ ನಮ್ಮಲ್ಲಿ ಪ್ರವೇಶಿಸಿ ನಮಗೆ ಒಳ್ಳೆಯದನ್ನು ಉಂಟುಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top