fbpx
ದೇವರು

ಸ್ತ್ರೀಯರು ಮಾಂಗಲ್ಯದಲ್ಲಿ ಮುತ್ತು ಮತ್ತು ಹವಳ ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು.

ಸ್ತ್ರೀಯರು ಮಾಂಗಲ್ಯದಲ್ಲಿ ಮುತ್ತು ಮತ್ತು ಹವಳ ಧರಿಸುವುದರ ಹಿಂದಿರುವ ವೈಜ್ಞಾನಿಕ ಕಾರಣಗಳು.

ಸ್ತ್ರೀಯರು ಮಾಂಗಲ್ಯ ಸರದಲ್ಲಿ ಮುತ್ತು ಮತ್ತು ಹವಳವನ್ನು ಧರಿಸುವ ಸಂಪ್ರದಾಯ ನಮ್ಮ ಹಿಂದೂ ಧರ್ಮದಲ್ಲಿದೆ.ಅದು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ  ಅದೆಷ್ಟೋ ಒಳ್ಳೆಯದನ್ನು ಮಾಡುತ್ತದೆ.ಮಾಂಗಲ್ಯ ಸರ ಸ್ತ್ರೀಯರಿಗೆ ಹರಿಶಿನ ಕುಂಕುಮದ ರೀತಿಯಲ್ಲಿಯೇ  ಆರೋಗ್ಯವನ್ನು ಕಾಪಾಡುತ್ತದೆ.

ಹವಳ ಕುಜನಿಗೆ ಪ್ರೀತಿಕಾರಕ ಮತ್ತು ಮುತ್ತು ಚಂದ್ರನಿಗೆ ಪ್ರೀತಿಕಾರಕ. ಇವೆರಡು  ಸೂರ್ಯ ,ಚಂದ್ರರ ತೇಜಸ್ಸು.ಸ್ತ್ರೀಯರಲ್ಲಿ ಲೀನವಾಗಿ ಇರುತ್ತವೆ.

ಹವಳ :- ಸ್ತ್ರೀಯರ ಶರೀರಕ್ಕೆ ಬೇಕಾದ ಉತ್ತೇಜನವನ್ನು ಹವಳ ನೀಡುತ್ತದೆ  ನಾಡಿ ಮಂಡಲವನ್ನು ಚುರುಕಾಗಿ ಇಡುತ್ತದೆ.

ಮುತ್ತು:- ಶರೀರದ ಅತಿಯಾದ ತಾಪಮಾನವನ್ನು ಕಡಿಮೆ ಮಾಡುತ್ತದೆ.  ಮನಸ್ಸಿಗೆ ಪ್ರಶಾಂತತೆ ಮತ್ತು ಸಹನೆಯನ್ನು ನೀಡುತ್ತದೆ.ಮುತ್ತು ಚಂದ್ರ ಗ್ರಹದ ಪ್ರತೀಕ.ದೇಹ ಸುಖ,ಸೌಂದರ್ಯ, ಅನಂದಕ್ಕೆ, ಅನ್ಯೂನ್ಯ ದಾಂಪತ್ಯ ಜೀವನಕ್ಕೆ ಕಾರಣಕರ್ತ. ಶಾರೀರಿಕವಾಗಿ ಕಣ್ಣು,ಕೊಬ್ಬು, ಗ್ರಂಥಿಗಳು, ಸ್ತ್ರೀಯರ ನರ ನಾಡಿಗಳು,ಇಂದ್ರಿಯಗಳು,ಗರ್ಭಧಾರಣೆ, ಮತ್ತು ಪ್ರಸವಕ್ಕೆ ಕಾರಣನು.

ಇನ್ನೂ ಮೂರ್ಖತನ, ಅತಿಯಾದ ಕೋಪ,ಕಲಹ, ಸೋಮಾರಿತನ, ರೋಗ- ರುಜಿನಗಳು, ಸಾಲಭಾದೆ,ರಕ್ತಸ್ರಾವ ಮತ್ತು ಋತುಚಕ್ರದ ದೋಷಕ್ಕೆ ಈ ಗ್ರಹವೆ ಕಾರಣರು.ಆದುದರಿಂದ ಚಂದ್ರ ಮತ್ತು ಕುಜ ಗ್ರಹ ಸ್ತ್ರೀಯರ ಜೀವನದಲ್ಲಿ ಈ ಗ್ರಹಗಳು ಅದೆಷ್ಟು ಪಾತ್ರ ವಹಿಸುತ್ತವೆ ಎಂದು ನೋಡೋಣ ಬನ್ನಿ….

ಖಗೋಳಶಾಸ್ತ್ರದಲ್ಲಿ ಮತ್ತು ಜ್ಯೋತಿಶ್ಶಾಸ್ತ್ರಾದಲ್ಲಿ ಹೇಳಿರುವ ಪ್ರಕಾರ ಮುಖ್ಯವಾಗಿ 27 ನಕ್ಷತ್ರಗಳಿವೆ.ಈ ನಕ್ಷತ್ರಗಳಲ್ಲಿ ಚಂದ್ರನು 27 ದಿವಸವೂ ಸಂಚರಿಸುತ್ತಾನೆ 28 ನೇ ದಿವಸ  ಕುಜನನ್ನು ಸೇರುವ ದಿನವೇ ಸ್ತ್ರೀಯರಿಗೆ ಋತುಸಮಯ (  menustruation or menses). ಭಾರತೀಯ ಸಂಪ್ರದಾಯದಲ್ಲಿ  ಸ್ತ್ರೀಯರಿಗೆ ಮಾಂಗಲ್ಯ ಸರದಲ್ಲಿ ಇರುವ ಪ್ರಾಮುಖ್ಯತೆ ಬೇರೆ ಯಾವುದಕ್ಕೂ ಇಲ್ಲ.

ಅಸಲಿಯಾದಂತಹ ಹವಳ ಧರಿಸುವುದರ ಹಿಂದೆ ನಮ್ಮ ಋಷಿಮುನಿಗಳು ವಿಶೇಷವಾದ ರಹಸ್ಯ  ಅಡಗಿದೆ  ಎಂದು ಹೇಳಿದ್ದಾರೆ. ಆ ರಹಸ್ಯ ವೇನೆಂದರೆ ಮುತ್ತನ್ನು,  ಹವಳವನ್ನು ಧರಿಸಿದ್ದರಿಂದಲೇ ಹಳೇ ಕಾಲದ ಸ್ತ್ರೀಯರಿಗೆ ಶಸ್ತ್ರಚಿಕಿತ್ಸೆಗೆ (operation)  ಒಳಪಟ್ಟಿರುವುದು ಬಹಳ ವಿರಳ.ಆದರೆ ಈಗ ಶಸ್ತ್ರಚಿಕಿತ್ಸೆ ಇಲ್ಲದೇ ಪ್ರಸವವು ನೆಡೆಯುವುದೇ ಇಲ್ಲ ಎಂಬಂತೆ ಆಗಿದೆ.

ಸೂರ್ಯನಿಂದ ಬರುವ ಕೆಂಪು ಮತ್ತು ಬಿಳುಪು ಕಿರಣಗಳನ್ನು ಸ್ವೀಕರಿಸಿ ಸ್ತ್ರೀಯರ ಶರೀರದಲ್ಲಿರುವ  ಪ್ರತಿಯೊಂದು ನಾಡಿ ಮಂಡಲವನ್ನು ಉತ್ತೇಜಿಸುತ್ತದೆ.

ಶಾರೀರಿಕವಾಗಿ ಮತ್ತು ಭೌತಿಕವಾಗಿ ಈ ಎರಡು ಗ್ರಹಗಳು ಸ್ತ್ರೀಯರಲ್ಲಿ ಬರುವ ಕಷ್ಟ ಮತ್ತು ಗ್ರಹ  ದೋಷವನ್ನು ನಿವಾರಿಸುತ್ತದೆ. ಆದ್ದರಿಂದ ಚಂದ್ರ,ಕುಜ ಸಂಯೋಗ ಪ್ರತಿ ಸ್ತ್ರೀಯರ ಜೀವನದಲ್ಲೂ ಅನೇಕ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಯೇ  ಮಾಂಗಲ್ಯದಲ್ಲಿ ಮುತ್ತು ಮತ್ತು ಹವಳ ಧರಿಸುವುದು ಸ್ತ್ರೀಯರ ಜೀವನದಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತದೆ.

ಮತ್ತೊಂದು ವಿಷಯವೇನೆಂದರೆ ಶುಕ್ರನು ವಿವಾಹಕಾರಕನು ಮಾತ್ರ,  ಆದರೆ ಸಂಸಾರ ಜೀವನವನ್ನು ನೆಡೆಸುವಾತ ಕುಜನೇ ಎನ್ನುವುದನ್ನು ಮಾತ್ರ ಮರೆಯಬಾರದು.ಆದ್ದರಿಂದ ಮೊದಲೇ ಕುಜದೋಷ ಇದೆಯೋ ಇಲ್ಲವೋ ಎಂದು ವಿವಾಹಕ್ಕೆ ಮುಂಚೆ ನೋಡುತ್ತಾರೆ.

ಪ್ರತಿಯೊಬ್ಬ ಗೃಹಿಣಿಯು ಜೀವನದಲ್ಲಿ ಮೇಲೆ ತಿಳಿಸಿದ ಈ ಗ್ರಹಗಳ ಸ್ಥಿತಿಗಳು ಚೆನ್ನಾಗಿದ್ದರೆ ಅವರಿಗೆ ಅನಂದವಾದ ಜೀವನ ಲಭಿಸುತ್ತದೆ. ಆದ್ದರಿಂದ ಸ್ತ್ರೀಯರು ಧರಿಸುವ ಮಾಂಗಲ್ಯ ಸರದಲ್ಲಿ ಮುತ್ತು,ಹವಳ ಕೇವಲ ಸಂಪ್ರದಾಯ ಮಾತ್ರವಲ್ಲ ,ಸ್ತ್ರೀಯರ ಆರೋಗ್ಯದ  ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪೂರ್ವಜರು ತಿಳಿಸಿದ ಆಚಾರ ವಿಚಾರಗಳಿವು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top