ಈ ಶ್ಲೋಕವನ್ನು ಪಠಿಸಿ ಮಲಗಿದರೆ ನಿದ್ರೆಯಲ್ಲಿ ಕೆಟ್ಟ ಕನಸುಗಳು ಬರುವುದಿಲ್ಲ.
ಸಾಧಾರಣವಾಗಿ ಕನುಸುಗಳು ಪ್ರತಿಯೊಬ್ಬರಿಗೂ ಕನಸಿನಲ್ಲಿ ಬರುತ್ತಿರುತ್ತವೆ. ಪ್ರಕೃತಿಗೆ ಸಂಬಂಧಿಸಿದ ದೃಶ್ಯಗಳು, ಪ್ರಾಣಿಗಳು, ಪ್ರಮಾದಕರ ಸಂಘಟನೆಗಳು, ಹಬ್ಬ ಆಚರಣೆಗಳು ಮೊದಲಾದವುಗಳು ಕನಸಿನಲ್ಲಿ ಕಾಣಿಸುತ್ತಿರುತ್ತವೆ.
ಒಳ್ಳೆಯ ಕನಸುಗಳು ಬಂದರೆ ನಿದ್ರೆಯಿಂದ ಎದ್ದಾಗ ಆ ಕನಸನ್ನು ಜ್ಞಾಪಕ ಮಾಡಿಕೊಂಡು ಆನಂದ ಪಡುತ್ತೇವೆ.ಕೆಟ್ಟ ಕನಸುಗಳು ಬಿದ್ದರೆ ಭಯ ಪಡುತ್ತೇವೆ.ಆ ಕೆಟ್ಟ ಕನಸು ಎಲ್ಲಿ ನಿಜವಾಗುತ್ತದೋ ಎಂಬ ಭಯ ಮನಸ್ಸಿನಲ್ಲಿ ಕಾಡುತ್ತಿರುತ್ತದೆ.
ಆದರಿಂದ ಮಾನಸಿಕವಾಗಿ ಯಾತನೆ ಇನ್ನೂ ಹೆಚ್ಚುತ್ತದೆ. ಹಾಗೆ ಕೆಟ್ಟ ಕನಸುಗಳು ಯಾವಾಗಲೂ ಕನಸಿನಲ್ಲಿ ಬರುತ್ತಿದ್ದರೆ.ಈ ಶ್ಲೋಕವನ್ನು ಪಠಿಸಬೇಕು ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತವೆ.ಆ ಶ್ಲೋಕವನ್ನು ನಾವು ಈಗ ತಿಳಿಯೋಣ.
“ರಾಮಂ ಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ l
ಶಯನೇಯಃ ಸ್ಮರೇನ್ನಿತ್ಯಂ ದುಃಸ್ವಪ್ನ ತಸ್ಯ ನಶ್ಯತಿ ll”
ಇದರ ಅರ್ಥವೇನೆಂದರೆ, ಶ್ರೀ ರಾಮ, ಆಂಜನೇಯ, ಗರುಡ, ಭೀಮಸೇನ, ದೇವರನ್ನು ಯಾರು ಮಲಗುವ ಮುನ್ನ ಸ್ಮರಿಸುವರೋ ಅವರಿಗೆ ಕೆಟ್ಟ ಕನಸು ಭಾಧಿಸುವುದಿಲ್ಲ ಅನ್ನುವುದು ಈ ಶ್ಲೋಕದ ಭಾವ.
ಈ ಶ್ಲೋಕವನ್ನು ಮಲಗುವ ಮುನ್ನ ಪಠಿಸುವುದರಿಂದ ಕೆಟ್ಟ ಕನಸುಗಳು ನಮ್ಮ ಹತ್ತಿರವೂ ಸುಳಿಯುವುದಿಲ್ಲ. ಅದಲ್ಲದೇ ಸಾಕ್ಷಾತ್ ಹನುಮಾನ್ ನಮ್ಮ ಕನಸಿನಲ್ಲಿ ಕಾಣಿಸಿಕೊಂಡು ಧೈರ್ಯವನ್ನು ಹೇಳಿ ನಮ್ಮ ಭಯವನ್ನು ದೂರ ಮಾಡುತ್ತಾರೆ.
ಮುಖ್ಯವಾಗಿ ಚಿಕ್ಕ ಮಕ್ಕಳಿಗೆ ಮಲಗುವ ಮುನ್ನ ಈ ಶ್ಲೋಕವನ್ನು ಪಠಿಸುವ ಅಭ್ಯಾಸ ಮಾಡಿಸುವುದು ಒಳ್ಳೆಯದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
