fbpx
ಭವಿಷ್ಯ

6 ಜೂಲೈ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೦೬ ಜುಲೈ ೨೦೧೭
ಸೂರ್ಯೋದಯ : ೦೫:೩೩
ಸೂರ್ಯಾಸ್ತ : ೧೯:೧೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಶುಕ್ಲ ಪಕ್ಷ
ತಿಥಿ : ತ್ರಯೋದಶೀ
ನಕ್ಷತ್ರ : ಅನುರಾಧ
ಯೋಗ : ಶುಭ
ಅಮೃತಕಾಲ : ೨೫:೨೯ – ೨೭:೧೬

ರಾಹು ಕಾಲ: ೧೪:೦೯ – ೧೫:೫೨
ಗುಳಿಕ ಕಾಲ: ೦೮:೫೯ – ೧೦:೪೨
ಯಮಗಂಡ: ೦೫:೩೩ – ೦೭:೧೬

ಮೇಷ (Mesha)


ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರಿ ಬರಲಿದೆ. ಸಾಂಸಾರಿಕವಾಗಿ ನೆಮ್ಮದಿಯ ಜೀವನ ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಭೂ ಖರೀದಿಗೆ ಸಾಧ್ಯತೆ ಇದೆ. ಕುಲದೇವತಾ ದರ್ಶನ ಭಾಗ್ಯವಿರುವುದು.

ವೃಷಭ (Vrushabh)


ಆಗಾಗ ಧನಾಗಮನವಿದೆ. ಹಳೇ ಸ್ನೇಹಿತರ ಭೇಟಿ ಸಂತಸ ತರಲಿದೆ. ಮಕ್ಕಳ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಸಮಾಧಾನ ಸಿಗಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ. ನಿರುದ್ಯೋಗಿಗಳಿಗೆ ಒದ್ದಾಟವಿದೆ.

ಮಿಥುನ (Mithuna)


ಆಗಾಗ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಕಂಡು ಬರಲಿದೆ. ಹಿರಿಯರಿಗೆ ಶ್ರೀದೇವತಾ ದರ್ಶನ ಭಾಗ್ಯವಿದೆ. ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಅಧಿಕ ಖರ್ಚು ವೆಚ್ಚ ವಿರುತ್ತದೆ. ದಾಂಪತ್ಯದಲ್ಲಿ ಸಂತಾನ ಯೋಗ.

ಕರ್ಕ (Karka)


ಮಾನಸಿಕವಾಗಿ ಕಿರಿಕಿರಿ ಅಸಮಾಧಾನ ಕಂಡು ಬಂದರೂ ಶನಿಯ ಲಾಭಸ್ಥಾನದಿಂದ ಅನಿರೀಕ್ಷಿತ ಶುಭ ಪ್ರಸಂಗಗಳು ಕಂಡು ಬರಲಿವೆ. ಹಾಗೆ ಆಗಾಗ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ತೋರಿ ಬರಲಿದೆ.

ಸಿಂಹ (Simha)


ಲಾಭ ಸ್ಥಾನದ ಗುರು ಮುನ್ನಡೆಗೆ ಸಾಧಕನಾಗುತ್ತಾನೆ. ಅಡೆತಡೆಗಳು ತೋರಿ ಬಂದರೂ ಕಾರ್ಯಸಾಧನೆಯಾಗಲಿದೆೆ. ದಾಂಪತ್ಯದಲ್ಲಿ ಸಹನೆ ಸಮಾಧಾನ ತೋರಿ ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.

ಕನ್ಯಾರಾಶಿ (Kanya)


ಯೋಗ್ಯ ವಯಸ್ಕರಿಗೆ ಕನ್ಯಾ ಲಾಭ ವಿದ್ದರೂ ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ. ಮನೆಯಲ್ಲಿ ಆಲಂಕಾರಿಕ ವಸ್ತುಗಳ ಖರೀದಿ ಇದೆ. ಯೋಗ್ಯ ಜನರ ಒಡನಾಟ ಭವಿಷ್ಯಕ್ಕೆ ಸಾಧಕವಾದೀತು. ಮುಂದುವರಿಯಿರಿ.

ತುಲಾ (Tula)


ಅಧಿಕಾರಿ ವರ್ಗದವರಿಗೆ ಉತ್ತಮ ಅಭಿವೃದ್ಧಿ ಇದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ತೋರಿ ಬಂದರೂ ಜಾಗ್ರತೆ ಆಗತ್ಯವಿದೆ. ಧನಾಗಮನ ನಾನಾ ರೀತಿಯಲ್ಲಿ ತೋರಿ ಬಂದೀತು. ದಿನಾಂತ್ಯ ಶುಭವಿದೆ.

ವೃಶ್ಚಿಕ (Vrushchika)


ಮನೆಯಲ್ಲಿ ಶುಭಮಂಗಲ ಕಾರ್ಯಗಳ ಸಂಭ್ರಮ. ಪ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ. ಉತ್ತಮ ಯೋಗ ಬರುವುದರಿಂದ ಪ್ರಯತ್ನಿಸಿರಿ.

ಧನು ರಾಶಿ (Dhanu)


ಸದ್ಯದಲ್ಲೇ ತೋರಿ ಬರುವ ಅಭಿವೃದ್ಧಿಗಾಗಿ ಕಾಯುವಂತಹ ಪರಿಸ್ಥಿತಿ ಕಂಡು ಬಂದೀತು. ಹಣಕಾಸಿನ ವಿಚಾರದಲ್ಲಿ ಆಗಾಗ ಅಡಚಣೆಗಳಿರುತ್ತವೆ. ಜಾಗ್ರತೆ ವಹಿಸಿರಿ. ಶ್ರೀದೇವತಾ ದರ್ಶನ ಭಾಗ್ಯ ಸಂತಸ ತಂದೀತು.

ಮಕರ (Makara)


ಮಕ್ಕಳ ವಿಚಾರದಲ್ಲಿ ಅನಾವಶ್ಯಕ ಚಿಂತೆ ಹತ್ತುವುದು. ಗುರು ಹಿರಿಯರ ಮಾರ್ಗದರ್ಶನ ಸೂಕ್ತ ಸಲಹೆಗಳನ್ನು ಅಲಿಸಿರಿ. ಕೆಲಸಕಾರ್ಯಗಳಲ್ಲಿ ಅಡೆತಡೆಗಳೇ ಹೆಚ್ಚು. ವಿದೇಶ ಸಂಚಾರ ಯೋಗದಿಂದ ಕಾರ್ಯಸಿದ್ಧಿ.

ಕುಂಭರಾಶಿ (Kumbha)


ಆತಿಥಿಗಳ ಆಗಮನ ಸಂತಸ ತಂದರೂ ದಾಯಾದಿಗಳ ಮಾತು ಬೇಸರ ತಂದೀತು. ಶ್ರೀದೇವತಾ ದರ್ಶನ ಭಾಗ್ಯದಿಂದ ಮನಸ್ಸು ನಿರ್ಮಲವಾಗಲಿದೆ. ವ್ಯಾಪಾರ, ಉದ್ಯಮದಲ್ಲಿ ಚೇತರಿಕೆ ಇರುವುದು. ದಿನಾಂತ್ಯ ಅತಿಥಿಗಳ ಆಗಮನ.

ಮೀನರಾಶಿ (Meena)


ಆಗಾಗ ಸಂಚಾರ ಒದಗಿ ಬರಲಿದೆ. ಸ್ನೇಹಿತರ ಸಹಕಾರ ಸಂತಸ ತರಲಿದೆ. ವ್ಯಾಪಾರ, ಉದ್ಯೋಗದಲ್ಲಿ ಹೆಚ್ಚಿನ ಲಾಭವಿದೆ. ಆಗಾಗ ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸುವಂತಾದೀತು. ವೈಯಕ್ತಿಕವಾಗಿ ಜಾಗ್ರತೆ ಇರಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top