ಕೆಂಪು ಸೆರಗು ಅಥವಾ ಅಧಿಕ ಋತುಸ್ರಾವ ಸಮಸ್ಯೆಗೆ ಆಯುರ್ವೇದದ 5 ಮನೆಮದ್ದುಗಳು ಮಾಡ್ಕೊಳ್ಳಿ ಬೇಗ ಸರಿಹೋಗುತ್ತೆ.
ಬಿಳಿದಾಸವಾಳದ ಹದಿನೈದು ಹೂಗಳನ್ನು ತೆಗೆದುಕೊಂಡು ಕಾಲು ಲೀಟರ್ ನೀರಿನಲ್ಲಿ ಕುದಿಸಿ , ನಂತರ ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆಯನ್ನು ಬೆರೆಸಿಡುವುದು , ರಾತ್ರಿ ತಯಾರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮುತ್ತಿನ ನಾಲ್ಕು ದಿನಗಳು ಸೇವನೆ ಮಾಡುವುದು ಹೀಗೆ ನಾಲ್ಕು ತಿಂಗಳು ಋತು ಸಮಯದಲ್ಲಿ ತೆಗೆದುಕೊಳ್ಳಬೇಕು.
ಇಪ್ಪತೈದು ಗ್ರಾಂ ಧನಿಯಾವನ್ನು ಕಾಲು ಲೀಟರ್ ನೀರಿನಲ್ಲಿ ಕುದಿಸಿ ನೀರು ಅರ್ಧ ಇಂಗುವವರೆಗೂ ಕುದಿಸಿ ನಂತರ ಕಲ್ಲುಸಕ್ಕರೆಯನ್ನು ಹಾಕಿ ಶೋಧಿಸಿ ಬಿಸಿಯಿರುವಾಗಲೇ ದಿನಕ್ಕೆ ಮೂರು ವೇಳೆ ಕೊಡಬೇಕು.
ಒಂದು ಇಲುಕು ಬೆಳ್ಳುಳ್ಳಿ , ಸ್ವಲ್ಪ ಕರಿಬೇವು ಎಲೆ , ಸಣ್ಣ ತುಂಡು ಅರಶಿನವನ್ನು ನುಣ್ಣಗೆ ಅರೆದು ಕಾಲು ಅಂಗುಲದಷ್ಟು ಮಾತ್ರೆ ಮಾಡಿ ಋತುಧರ್ಮ ಶುರುವಾಗುವ ಮೂರು ದಿನಕ್ಕೆ ಮುಂಚೆ ದಿನಕ್ಕೆ ಒಂದು ಸಾರಿಯಂತೆ ಸೇವಿಸಿ.
ಇಪ್ಪತೈದು ಗ್ರಾಂ ಅಶ್ವಗಂಧ ಎಲೆಯನ್ನು ಜಜ್ಜಿ ಸ್ವಲ್ಪ ನೀರಿನಲ್ಲಿ ಹಾಕಿ ಒಂದು ರಾತ್ರಿಯ ನಂತ್ರ ಸೋಸಿ ಸಂಗ್ರಹ ಮಾಡಿ , ಈ ಒಂದು ಕಪ್ ರಸವನ್ನು ಮೂರು ಭಾಗ ಮಾಡಿ ದಿನಕ್ಕೆ ಮೂರು ಹೊತ್ತು ಊಟಕ್ಕೆ ಮೊದಲು ತೆಗೆದುಕೊಳ್ಳುವುದು , ಮೂರು ತಿಂಗಳು ಮುಟ್ಟಿನ ಸಮಯದಲ್ಲಿ ತೆಗದುಕೊಳ್ಳುವುದು.
ಮುಟ್ಟಿದರೆ ಮುನಿ ಸೊಪ್ಪಿನ ಹತ್ತು ಹನಿ ರಸವನ್ನು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ದಿನಕ್ಕೊಂದು ಬಾರಿಯಂತೆ ಖಾಲಿ ಹೊಟ್ಟೆಯಲ್ಲಿ ಮೂರು ತಿಂಗಳು ತೆಗದುಕೊಳ್ಳುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
