ಅಪ್ಪಿತಪ್ಪಿಯೂ ಮನೆಯಲ್ಲಿ ಈ ಪ್ರತಿಮೆಯನ್ನು ಇಡಬೇಡಿ.ಇಟ್ಟರೆ ದರಿದ್ರ ಗ್ಯಾರಂಟಿ.
ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡುತ್ತಾರೆ.ಮನೆಯಲ್ಲಿ ದೇವರ ಪೂಜೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.ವಿಗ್ರಹಗಳನ್ನು ಹಾಗೂ ದೇವರ ಫೋಟೋಗಳನ್ನು ಪೂಜೆ ಮಾಡುತ್ತಾರೆ. ಆದ್ರೆ ಹಿಂದೂ ಧರ್ಮದ ಪ್ರಕಾರ ಕೆಲವೊಂದು ವಿಗ್ರಹಗಳ ಪೂಜೆ ಮಾಡಬಾರದು.
ಶನಿ ನ್ಯಾಯದ ದೇವರು.ಆತನ ಕಣ್ಣಿನಿಂದ ಯಾರೊಬ್ಬರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಶನಿಯು ಯಾವುದೇ ಮೂರ್ತಿಯನ್ನು ಇಡಬಾರದು.
ಭಗವಂತನಾದ ಶಿವನ ನಟರಾಜ ರೂಪದ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ನಟರಾಜನ ರೂಪ ವಿನಾಶದ ರೂಪ.ಹಾಗಾಗಿ ಇದು ಮನೆಯಲ್ಲಿರಬಾರದು ಎಂದು ಶಾಸ್ತ್ರ ಹೇಳುತ್ತದೆ.
ದೇವಿ ಲಕ್ಷ್ಮೀ ನಿಂತ ಭಂಗಿಯಲ್ಲಿರುವ ಪ್ರತಿಮೆಯನ್ನು ಎಂದೂ ಇಡಬೇಡಿ.ಯಾವಾಗಲೂ ಮನೆಯಲ್ಲಿ ಕುಳಿತಿರುವ ಲಕ್ಷ್ಮೀ ಪ್ರತಿಮೆಯನ್ನು ಮಾತ್ರ ಇಡಬೇಕು.ನಿಂತಿರುವ ಭಂಗಿ ಚಂಚಲ ಸ್ಥಿತಿಯಾಗಿದೆ.ಲಕ್ಷ್ಮೀ ಸ್ಥಿರವಾಗಿ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ.
ಯುದ್ಧ ಮಾಡುವ ದೇವರು.
ದೇವರು ಯಾರೊಂದಿಗೂ ಯುದ್ಧ ಮಾಡುತ್ತಾ ಇರುವ ಅಥವಾ ಯಾವುದನ್ನೋ ದ್ವಂಸ ಮಾಡುತ್ತಿರುವ ಮೂರ್ತಿಯನ್ನು ಮನೆಯ ಮಂದಿರದಲ್ಲಿ ಇಡಬೇಡಿ.ದೇವರು ಭೂಮಿಯ ಒಳಿತಿಗಾಗಿ ಯುದ್ಧ ಮಾಡಿದ್ದರೂ ಸಹ ಅದು ನಿಮಗೆ ಹಾಗೂ ಕುಟುಂಬಕ್ಕೆ ಅಶುಭ.
ಅತಿಯಾದ ಭಾವನೆಗಳಿರುವ ಮೂರ್ತಿಗಳು.
ಕೆಲವೊಂದು ದೇವರ ಕೋಪದಿಂದ ಇರುವ ಮೂರ್ತಿಗಳು ಇರುತ್ತದೆ.ನಟರಾಜನ ಮೂರ್ತಿಯು ಸುಂದರವಾಗಿ ಕಾಣಿಸುತ್ತದೆ ಮತ್ತು ಶಿವನ ರುದ್ರನರ್ತನದ ಮೂರ್ತಿ ಮನೆಯ ಮಂದಿರದಲ್ಲಿ ಇಡುವುದನ್ನು ತಪ್ಪಿಸಿ.ಅತಿಯಾದ ಭಾವನೆ ಇರುವ ಮೂರ್ತಿಗಳು ಮನೆಯ ಮಂದಿರದಲ್ಲಿ ಇಡಬಾರದು.ತುಂಬಾ ಆರಾಮವಾಗಿ ಕುಳಿತಿರುವ ಭಂಗಿಯಲ್ಲಿರುವ ಮೂರ್ತಿಗಳು ಇದ್ದರೆ ಒಳ್ಳೆಯದು.
ಮಂದಿರಕ್ಕೆ ವಾಸ್ತು ಸಲಹೆ.
ಮನೆ ಮತ್ತು ಕಛೇರಿಯಲ್ಲಿ ಇರುವಂತಹ ಮಂದಿರಗಳು ನಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.ನಾವು ಕೋಪ, ಬೇಸರ ಮತ್ತು ಭೀತಿಯಲ್ಲಿರುವಾಗ ನಮಗೆ ನೆರವಾಗುತ್ತದೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.ಇದರಿಂದ ಮನೆಯಲ್ಲಿರುವ ಇತರೆ ಕೋಣೆಗಳಂತೆ ಮಾನೆಯಲ್ಲಿರುವ ಮಂದಿರಕ್ಕೂ ಹೆಚ್ಚಿನ ಗಮನ ಹರಿಸಬೇಕು.
ಎತ್ತರ.
ಮನೆಯ ನೆಲಕ್ಕಿಂತ ಕೆಲವು ಇಂಚು ಎತ್ತರದಲ್ಲಿ ದೇವರ ಮಂದಿರ ಇರಬೇಕು.ನಾವು ನಿಂತುಕೊಳ್ಳುವಾಗ ನಮ್ಮ ಎದೆಯ ನೇರಕ್ಕೆ ಮೂರ್ತಿಯ ತಳವಿರಬೇಕು. ಕೆಳಮಟ್ಟದಲ್ಲಿದ್ದರೆ ದೇವರಿಗೆ ನಾವು ಅಗೌರವ ಸೂಚಿಸಿದಂತೆ.
ಆರಾಮವಾಗಿರಲಿ.
ಮನೆಯಲ್ಲಿನ ಮಂದಿರವು ಕುಳಿತುಕೊಳ್ಳಲು ಮತ್ತು ನಿಲ್ಲಲ್ಲು ಸುಲಭವಾಗಿರಬೇಕು. ಅತಿಯಾಗಿ ತಂಪಿದ್ದರೆ ಹೀಟರ್ ಬಳಸಿ.ಕಡಿಮೆ ಬೆಳಕಿದ್ದರೆ ಹೆಚ್ಚಿನ ದೀಪಗಳನ್ನು ಹಚ್ಚಿ ನಮ್ಮಂತೆ ದೇವರಿಗೂ ಆರಾಮದಾಯಕವಾಗಿರುವ ಸ್ಥಳ ಇಷ್ಟ.
ಭಗವಂತ ಭೈರವ ಶಿವನ ರೂಪ.ಆದ್ರೆ ಭೈರವನ ಮೂರ್ತಿ ಅಥವಾ ಫೋಟೋವನ್ನು ಎಂದೂ ಮನೆಯಲ್ಲಿಡಬಾರದು.ರುದ್ರನಾಗಿರುವ ಭೈರವ ಬ್ರಹ್ಮನ ತಲೆ ಕಡಿದು ಸಂಹಾರಿಯಾಗಿ ರೂಪ ತಳೆದವನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
