fbpx
ಆರೋಗ್ಯ

ಬೆರಳಿನ ತುದಿಯಲ್ಲಿ ಸಿಪ್ಪೆ ಏಳುತ್ತಿರುವ ಸಮಸ್ಯೆಗೆ ಮನೆಯಲ್ಲೇ ಸಿಗುವ ಈ 7 ವಸ್ತುಗಳಿಂದ ಪರಿಹಾರ ಕಂಡ್ಕೊಳಿ.

ಬೆರಳಿನ ತುದಿಯಲ್ಲಿ ಸಿಪ್ಪೆ ಏಳುತ್ತಿರುವ ಸಮಸ್ಯೆಗೆ ಮನೆಯಲ್ಲೇ ಸಿಗುವ  ಈ  7 ವಸ್ತುಗಳಿಂದ ಪರಿಹಾರ ಕಂಡ್ಕೊಳಿ..

 

ನಮ್ಮ ಕೈ ಮತ್ತು ಕಾಲುಬೆರಳ ತುದಿಯಲ್ಲಿ ಆಗಾಗ ಚರ್ಮವು ಸಿಪ್ಪೆಯಂತೆ ತೆಳ್ಳಗೆ ಏಳುತ್ತದೆ.ದೇಹದಲ್ಲಿ ಯಾವುದಾದರೂ ಪೋಷಕಾಂಶದ ಕೊರತೆಯಾದರೆ ಈ ರೀತಿಯ ಸಮಸ್ಯೆಯು ಕಾಣಿಸುಕೊಳ್ಳುತ್ತದೆ.ಉಗುರಿನ ತುದಿಯಲ್ಲಿ ಬರುವ ಈ ಸಿಪ್ಪೆಯಾಕಾರದ ಚರ್ಮವು ಮೇಲ್ಭಾಗದಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ.ಇದನ್ನು ಕೀಳಲು ಹೋದರೆ ಮೇಲ್ಭಾಗದ ಚರ್ಮವೂ ಸುಲಿದುಬರುವುದರಿಂದ ಇದನ್ನು ಕೀಳುವ ಪ್ರಯತ್ನ ಮಾಡಬಾರದು.ಈ ಸಮಸ್ಯೆಗಾಗಿ ಅನೇಕ ಮನೆಮದ್ದುಗಳೂ ಇವೆ. ಅವುಗಳನ್ನು ಅನುಸರಿಸಿದರೆ ಸಿಪ್ಪೆಯು ಉದುರಿ ಬೇರೆ ಹೊಸಚರ್ಮ ಬರಲು ಸಾಧ್ಯವಾಗುತ್ತದೆ.ಆ ವಿಧಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ ನೋಡಿ.

1.ಉಗುರುಬೆಚ್ಚನೆಯ ಬಿಸಿ ನೀರು :

ಉಗುರುಬೆಚ್ಚನೆ ಬಿಸಿ ನೀರಿನಲ್ಲಿ ಬೆರಳತುದಿಗಳನ್ನು ಸುಮಾರು 15ನಿಮಿಷಗಳವರೆಗೆ ಮುಳುಗಿಸಿಡುವುದರಿಂದ ಸಿಪ್ಪೆ ಎದ್ದಿರುವ ಚರ್ಮ ನಿಧಾನವಾಗಿ ಒಣಗಿ ಸಡಿಲಗೊಂಡು ಸುಲಭವಾಗಿ ಕಳಚಿಕೊಳ್ಳುತ್ತದೆ. ಬೇಗ ಈ ಸ್ಥಳದಲ್ಲಿ ಹೊಸ ಮತ್ತು ಆರೋಗ್ಯವಂತ ಚರ್ಮ ಬೆಳೆಯುತ್ತದೆ.

2.ಜೇನು ಮತ್ತು ನಿಂಬೆ:

ಒಂದು ಬಟ್ಟಲಿನಲ್ಲಿ ಉಗುರುಬೆಚ್ಚನೆಯ ನೀರನ್ನು ತುಂಬಿಸಿ ಸಮಪ್ರಮಾಣದಲ್ಲಿ ಒಂದು ಚಮಚ ಜೇನು ಮತ್ತು ಲಿಂಬೆರಸವನ್ನು ಮಿಕ್ಸ್ ಮಾಡಿ ಆ ಬಟ್ಟಲಿನೊಳಕ್ಕೆ ಕೈಗಳನ್ನು ಮುಳುಗಿಸಿಡಿ. ಸುಮಾರು ಹದಿನೈದು ನಿಮಿಷದ ನಂತರ ಕೈಗಳನ್ನು ತೆಗೆದು ಸೋಪು ಬಳಸದೆ ಒಣ ಬಟ್ಟೆಯಿಂದ ಕೈಯನ್ನು ಒರೆಸಿಕೊಳ್ಳಿ.ಹೀಗೆ ಎರಡು ದಿನ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ.

3.ಆಲಿವ್ ಎಣ್ಣೆ:

ಸುಲಿತ ಕಂಡುಬಂದಿರುವ ಬೆರಳಿನ ತುದಿಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ಚನ್ನಾಗಿ ಮಸ್ಸಾಜ್ ಮಾಡಿ ನಂತರ ಅದನ್ನು ಒಣಗಲು ಬಿಡಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ.

4.ಸೌತೆಕಾಯಿ:

ಒಂದು ಎಳೆಸೌತೆಯ ಬೀಜವನ್ನು ತೆಗೆದು ಕೇವಲ ತಿರುಳನ್ನು ಮಾತ್ರ ಅರೆದು ಬೆರಳಿನ ತುದಿಭಾಗಕ್ಕೆ ದಪ್ಪನಾಗಿ ಹಚ್ಚಿ.ಸುಮಾರು 20 ನಿಮಿಷಗಳವರೆಗೆ ಹಾಗೇ ಇರಲು ಬಿಟ್ಟು ನಂತರ ಚರ್ಮ ಕೊಂಚ ಬಿಗಿಯಾಯಾದಂತ ಅನುಭವವಾದರೆ ಇನ್ನು ಸ್ವಲ್ಪ ಒಣಗಲು ಬಿಟ್ಟು ಅನಂತರ ಉಗುರುಬೆಚ್ಚನೆಯ ಬಿಸಿ ನೀರಿನಿಂದ ತೊಳೆದುಕೊಂಡರೆ ಈ ಸಮಸ್ಯೆ ಮಾಯವಾಗುತ್ತದೆ.

5.ಮೊಸರು:

Sour cream

ಮೊಸರಿಗೆ ನೀರು ಹಾಕದೇ ಹಾಗೇ ಚರ್ಮಕ್ಕೆ ನೇರವಾಗಿ ಹಚ್ಚಿ ಒಣಗಲು ಬಿಡಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆದು ಒಣ ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಿ. ಹೀಗೆ ದಿನಕ್ಕೆ ಮೂರರಿಂದ ನಾಲ್ಕುಬಾರಿ ಮಾಡಿದರೆ ಉಗುರು ತುದಿಯಲ್ಲಿ ಸಿಪ್ಪೆಸುಲಿಯುವುದು ನಿಲ್ಲುತ್ತದೆ.

6.ಕೊಬ್ಬರಿ ಎಣ್ಣೆ:

ಯಾವುದೇ ರಾಸಾಯನಿಕವನ್ನು ಸೇರಿಸದ ಪರಿಶುದ್ಧ ಕೊಬ್ಬರಿ ಎಣ್ಣೆಯನ್ನು ಒಲೆಮೇಲಿಟ್ಟು ಒಂಚೂರು ಬಿಸಿಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಸುಲಿಯುತ್ತಿರುವ ಚರ್ಮಕ್ಕೆ ಹಚ್ಚಿ ಬೆಳಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವುದರ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

7.ಹರಳೆ ಎಣ್ಣೆ:

ಹರಳೆ ಎಣ್ಣೆಯನ್ನು ನೇರವಾಗಿ ಸುಲಿಯುತ್ತಿರುವ ಚರ್ಮಕ್ಕೆ ಹಾಕಿ ಐದು ನಿಮಿಷಗಳ ವರೆಗೆ ಮಸ್ಸಾಜ್ ಮಾಡಿ. ನಂತರ ಅದನ್ನು ಒಣಗಲು ಬಿಡಿ.ಹತ್ತು ನಿಮಿಷಗಳ ನಂತರ ತಣ್ಣೀರಿನಿಂದ ಕೈಯನ್ನು ತೊಳೆದುಕೊಳ್ಳಿ.

.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top