fbpx
ಸಿನಿಮಾ

ಜೀವನದಲ್ಲಿ ಸೋತಾಗ ಕುಗ್ಗಬಾರದು ಎನ್ನುವುದಕ್ಕೆ ಈ ಛಲಗಾರನೇ ಜೀವಂತ ಸಾಕ್ಷಿ.

ಜೀವನದಲ್ಲಿ ಸೋತಾಗ ಕುಗ್ಗಬಾರದು ಎನ್ನುವುದಕ್ಕೆ ಈ ಛಲಗಾರನೇ ಜೀವಂತ ಸಾಕ್ಷಿ…

ವರುಣ್ ಅಗರ್‌ವಾಲ್ ರವರು ಡಿಸೆಂಬರ್ 6, 1987 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಸಿಎಂಆರ್ ಇನಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನೀಯರಿಂಗ್ ಮಾಡಿದರು. ಕಾಲೇಜು ಸಮಯದಲ್ಲಿ ಶಾರ್ಟ್ ಪಿಲ್ಮ್ ಗಳನ್ನು ಮಾಡುತ್ತಿದ್ದರು.ಇವರಿಗೆ ಚಿಕ್ಕ ವಯಸ್ಸಿನಿಂದಲೂ ಸಿನೆಮಾ ಮೇಲೆ ತುಂಬಾ ಅಸೆ ಇತ್ತು ಆದರೆ ಅವರ ತಂದೆ ತಾಯಿಯರ ಒತ್ತಾಯದಿಂದ ಅವರು ಇಂಜಿನಿಯರಿಂಗ್ ಮಾಡಿದರು.ಇಷ್ಟವಿಲ್ಲದ ಮನಸ್ಸಿನಿಂದ ಅನೇಕಾ ಬಾರಿ ಫೇಲ್ ಆಗಿಯೂ ಸತತ ಪ್ರಯತ್ನದಿಂದ ಇಂಜಿನಿಯರಿಂಗ್ ಅನ್ನು ಮುಗಿಸಿದರು.ಇಂಜಿನಿಯರಿಂಗ್ ನಲ್ಲಿ ಆದ ವೈಫಲ್ಯತೆಯಿಂದ ಮನಕುಗ್ಗದೆ ಆತ್ಮವಿಶ್ವಾಸದಿಂದ ಪ್ರಾರಂಭಿಸಿದ ವ್ಯವಹಾರಗಳು ಯಶಸ್ಸನ್ನು ಕಂಡಿವೆ.
ವರುಣ್ ಅಗರ್ವಾಲ್ ಒಬ್ಬ ಫಿಲಂ ಮೇಕರ್ ವಾಣಿಜ್ಯೋದ್ಯಮಿ ಮತ್ತು ಉತ್ತಮ ಲೇಖಕ.ಅವನಿಗೆ 25 ವರ್ಷ ವಯಸ್ಸಾಗುವಷ್ಟರಲ್ಲಿ ಅಲ್ಮಾ ಮೇಟರ್, ರೆಟಿಕ್ಯುಲಾರ್ ಮತ್ತು ಲಾಸ್ಟ್ ಮಿನಿಟ್ ಫಿಲ್ಮ್ಸ್ ಎಂಬ ಮೂರು ಕಂಪೆನಿಗಳನ್ನು ಸ್ಪಾಪಿಸಿದ್ದರು.. ಒಬ್ಬ ಫಿಲಂ ಮೇಕರ್ ಆಗಿ ಆಲ್ಬಮ್ ವೀಡಿಯೊಗಳಲ್ಲಿ ಪ್ರೀತಿ ಝಿಂಟಾ ಮತ್ತು ಎ.ಆರ್ ರಹಮಾನ್ರಂತಹ ಕಲಾವಿದರಿಗೆ ನಿರ್ದೇಶಿಸಿದ್ದಾರೆ ಮತ್ತು ಅವರ ವಿಡಿಯೋಗಳು ಯುಟ್ಯೂಬ್ನಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಪಡೆದಿವೆ.ಇವರು ಬರೆದಿದ್ದ ಪ್ರಥಮ ಕಾದಂಬರಿ “ಹೌ ಐ ಬ್ರೆವ್ಡ್ ಅನು ಆಂಟಿ ಅಂಡ್ ಕೋ-ಫೌಂಡೇಡ್ ಎ ಮಿಲಿಯನ್ ಡಾಲರ್ ಕಂಪೆನಿ” ಅದರ ಬಿಡುಗಡೆಯ ಒಂದು ತಿಂಗಳೊಳಗೆ ಅತಿಹೆಚ್ಚು ಮಾರಾಟವಾಗಿತ್ತು.

ಯುವ ಜನರನ್ನು ಸೆಳೆಯುವ ಸಲುವಾಗಿ ನಂತರ ತನ್ನ ಗೆಳೆಯ ಮಲ್ಹೋತ್ರ ಅವರೊಂದಿಗೆ ಸೇರಿ ಕೇವಲ 1 ಲಕ್ಷ ರೂಪಾಯಿ ಬರಹಗಳಿರುವ ಟಿ-ಶರ್ಟ್ ತಯಾರಿಸುವ ಯೋಜನೆ ರೂಪಿಸಿದರು. ಆದರೆ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಬ್ರಾಂಡೆಡ್ ಕಂಪೆನಿಗಳಿಗೆ ಪೈಪೋಟಿ ನೀಡುವುದು ಕಷ್ಟವಾಗಿತ್ತು. ಆಗ ಹಲವಾರು ಶಾಲಾ- ಕಾಲೇಜುಗಳನ್ನು ಸಂಪರ್ಕಿಸಿ ಟಿ-ಶರ್ಟ್ ಒದಗಿಸಿಕೊಡುವ ವ್ಯವಹಾರವನ್ನು ಕುದುರಿಸಿಕೊಂಡರು. ಇಂದು ಸುಮಾರು 2000ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಟಿ-ಶರ್ಟ್ ಒದಗಿಸುತ್ತಿದ್ದಾರೆ. ಈಗ ದೇಶದ 140 ನಗರಗಳು ಸೇರಿದಂತೆ ಆರು ದೇಶಗಳಲ್ಲಿ ವ್ಯವಹಾರವನ್ನು ನಡೆಸುತ್ತಿದೆ.
ಉತ್ಪನ್ನದ ಪ್ರಚಾರಕ್ಕೆ ಟಿ.ವಿ ಮತ್ತು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಷ್ಟು ಹಣವಿಲ್ಲದಿದ್ದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿದರು. ಇಂದು ಮೂರು ಲಕ್ಷ ಜನರು ಇವರ ಫೇಸ್‌ಬುಕ್ ಪೇಜನ್ನು ಲೈಕ್ ಮಾಡಿದ್ದಾರೆ. 2009ರಲ್ಲಿ ಆರಂಭವಾದ ಈ ಕಂಪೆನಿ ಕೇವಲ ನಾಲ್ಕು ವರ್ಷಗಳಲ್ಲಿ ಸುಮಾರು 7 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಅವರು ಹೇಳುತ್ತಾರೆ.

“ಮಾರುಕಟ್ಟೆ ಮತ್ತು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಉದ್ಯಮ ಸ್ಥಾಪಿಸಲು ಮುಂದಾಗಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮಾಡಬೇಕು. ತಮ್ಮನ್ನು ಸಂಪೂರ್ಣವಾಗಿ ಉದ್ಯಮದಲ್ಲಿ ತೊಡಗಿಸಿಕೊಂಡರೆ ಯಶಸ್ಸು ತಾನಾಗಿಯೇ ಬರುತ್ತದೆ” ಎಂದು ವರುಣ್ ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top