ಶನೇಶ್ವರನ “ಸಾಡೇ ಸಾಥಿ”ಪ್ರಭಾವವನ್ನು ಹೋಗಲಾಡಿಸುವ ಏಕೈಕ ದೇವಾಸ್ಥಾನ.
ಆಧುನಿಕ ಪ್ರಪಂಚದಲ್ಲಿ ಇಡೀ ಪ್ರಪಂಚವೆ ಬದಲಾಗುತ್ತಿದ್ದರೂ ದೇವರ ಮೇಲಿನ ಭಕ್ತಿಗೆ ಮಾತ್ರ ಯಾವುದೇ ಕುಂದು ಕೋರತೆ ಇಲ್ಲದಾಗಿದೆ.ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಹಲವಾರು ದೇವರುಗಳಿವೆ ಅವುಗಳಲ್ಲಿ ಶನಿ ಮಹಾರಾಜನು ಒಬ್ಬ.ನವಗ್ರಹಗಳಲ್ಲಿ ಅತ್ಯಂತ ಸುಂದರನಾದ ಶನಿಯು ಪುಣ್ಯ, ಪಾಪ, ದುಃಖ, ನೋವು, ಮಾನಸಿಕ ಖಿನ್ನತೆ ಮತ್ತು ವೈರಾಗ್ಯವನ್ನು ನೀಡುತ್ತಾನೆ.ಈ ಲೋಕದ ಸಮಸ್ತ ಜನರಿಗೆ ಶನಿಕಾಟ ತಪ್ಪಿದ್ದಲ್ಲ ಎಂಬುದು ನಿಶ್ಚಿತವಾದ ಮಾತು.ಈ ಶನಿದೇವನು ಇರುವ ರಾಶಿಯ ಜನರಿಗೆ ಕಷ್ಟಗಳನ್ನು ಕೊಡುತ್ತಾನೆ ಇದನ್ನೇ ‘ಸಾಡೇ ಸಾಥಿ’ಎನ್ನುತ್ತಾರೆ.ಆದರೆ ಸಾಡೇ ಸಾಥಿಯ ಸಮಯದಲ್ಲಿ ಶನಿದೇವರ ವಕ್ರ ದೃಷ್ಟಿಯಿಂದ ಪಾರಾಗಲು ಒಂದು ದೇವಾಲಯವಿದೆ. ಅದು ದೇಶದ ಶನೇಶ್ವರನ “ಸಾಡೇ ಸಾಥಿ”ಪ್ರಭಾವವನ್ನು ಹೋಗಲಾಡಿಸುವ ಏಕೈಕ ದೇವಾಸ್ಥಾನ. ಅದುವೇ ಉಜ್ಜಯಿನಿಯ ಕಾಲ ಭೈರವೇಶ್ವರ ಸ್ವಾಮಿ.
ಉಜ್ಜಯಿನಿಯ ಕಾಲ ಭೈರವೇಶ್ವರ ಸ್ವಾಮಿ ದೇವಾಲಯ ತಂತ್ರ ಪಂಥದೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗಿದೆ. ಕಾಲ ಭೈರವನನ್ನು ಶಿವ ದೇವರ ಒಂದು ಅಭಿವ್ಯಕ್ತಿ ರೂಪ ಎಂದು ನಂಬಲಾಗಿದೆ. ಇಲ್ಲಿ ಹೆಚ್ಚಿನ ಮಂದಿ ಪ್ರತಿದಿನ ಬಂದು ಪೂಜೆ ಸಲ್ಲಿಸುವುದನ್ನು ನೀವು ಕಾಣಬಹುದಾಗಿದೆ. ಇಲ್ಲಿ ಮೈಗೆ ಬೂದಿಯನ್ನು ಲೇಪಿಸಿಕೊಂಡ ಅನೇಕ ಸಾಧು ಸಂತರನ್ನು ನೀವು ಕಾಣಬಹುದಾಗಿದೆ.ಇಲ್ಲಿನ ಜನರ ನಂಬಿಕೆಯ ಪ್ರಕಾರ ಯಾರೇ ಮನಪೂರ್ವಕ ಏನೇ ಬೇಡಿಕೊಂಡರೂ ಇಲ್ಲಿನ ಸ್ಥಳದಲ್ಲಿ ಅದನ್ನು ನಿಜವಾಗಿಸುವ ಶಕ್ತಿ ಇದೆ.
ಈ ದೇವಾಸ್ಥಾನದ ವಿಶೇಷತೆ ಎಂದರೆ ದೇವರಿಗೆ ಸಾರಾಯಿಯನ್ನು ನೈವೇದ್ಯವಾಗಿ ನೀಡಲಾಗುತ್ತದೆ.ಮತ್ತು ಅದನ್ನು ಜನರಿಗೆ ತೀರ್ಥವನ್ನಾಗಿ ನೀಡಲಾಗುತ್ತದೆ.ಈ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಶನಿದೇವರ ಸಾಡೇ ಸಾಥಿನಲ್ಲಿರುವ ಜನರಿಗೆ ಶನಿಯ ಕಾಟವು ನಿಲ್ಲುತ್ತದೆ ಎಂದು ಜನರು ನಂಬುತ್ತಾರೆ.ಹಾಗಾಗಿ ಶನಿಮಹಾರಾಜರ ಈ ಸಾಡೇ ಸಾಥಿಯ ಪ್ರಭಾವಕ್ಕೊಳಾಗಿರುವ ಜನರು ಈ ದೇವಾಲಯಕ್ಕೆ ಬಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
