fbpx
ಆರೋಗ್ಯ

ಈ ಕಷಾಯ ಕುಡಿದರೆ ನೆಗಡಿ ಕೆಮ್ಮು ತಕ್ಷಣ ಮಾಯವಾಗುತ್ತೆ.

* ಬೇಕಾಗುವ ಸಾಮಾಗ್ರಿಗಳು:

ಜೀರಿಗೆ 2 ಚಮಚ
ಅಂಗೈಯ ಅರ್ಧದಷ್ಟು ಅಗಲವಿರುವ ಹಸಿ ಶುಂಠಿ
ಕರಿ ಮೆಣಸು ಅರ್ಧ ಚಮಚ
ಚಕ್ಕೆ 2 ಪೀಸ್
ಲವಂಗ 3-4
ಪುದೀನಾ ಅರ್ಧ ಕಟ್ಟು
ತುಳಸಿಜೀರಿಗೆ 2 ಚಮಚ
ಅಂಗೈಯ ಅರ್ಧದಷ್ಟು ಅಗಲವಿರುವ ಹಸಿ ಶುಂಠಿ
ಕರಿ ಮೆಣಸು ಅರ್ಧ ಚಮಚ
ಚಕ್ಕೆ 2 ಪೀಸ್
ಲವಂಗ 3-4
ಪುದೀನಾ ಅರ್ಧ ಕಟ್ಟು
ತುಳಸಿ
* ಒಂದು ಪಾತ್ರೆಗೆ ಶುಂಠಿಯನ್ನು ಜಜ್ಜಿ ಹಾಕಿ, ಕರಿ ಮೆಣಸು ಮತ್ತು ಜೀರಿಗೆಯನ್ನು ಸ್ವಲ್ಪ ಪುಡಿ ಮಾಡಿ ಹಾಕಿ, ನಂತರ ಉಳಿದ ಪದಾರ್ಥಗಳನ್ನು ಹಾಗೇ ಹಾಕಿ, ಅರ್ಧ ಚಮಚ ಉಪ್ಪು ಸೇರಿಸಿ, ಒಂದು ಲೀಟರ್ ನೀರು ಹಾಕಿ ಚೆನ್ನಾಗಿ ಕುದಿಸಿ. ಒಂದು ಲೀಟರ್ ನೀರು ಅರ್ಧ ಲೀಟರ್ ಆಗುವಷ್ಟು ಹೊತ್ತು ಕುದಿಸಿ, ನಂತರ ಉರಿಯಿಂದ ಇಳಿಸಿ, ಬಿಸಿ-ಬಿಸಿಯಾದ ಕಷಾಯವನ್ನು ಸ್ವಲ್ಪ ತಣ್ಣಗೆ ಮಾಡಿ ಒಂದು ಗ್ಲಾಸ್ ಕುಡಿಯಿರಿ .

ಒಂದು ತುಂಡು ಬೆಲ್ಲವನ್ನು ಕೈಯಲ್ಲಿ ಹಿಡಿದು ತಿನ್ನುತ್ತಾ  ಈ ಕಷಾಯ ಕುಡಿದರೆ ಕಷಾಯವನ್ನು ಕುಡಿಯಲು  ಕಷ್ಟವೆನಿಸುವುದಿಲ್ಲ.

* ಬೇಕಾದ ಪದಾರ್ಥಗಳು :

ಒಣ ಶುಂಠಿ – ಕಿರುಬೆರಳಿನಷ್ಟು
ಕರಿ ಮೆಣಸು, ಜೀರಿಗೆ,
ಕೊತ್ತಂಬರಿ ಬೀಜ (ಹವೀಜ) ಒಂದೊಂದು ಚಮಚ
ಒಂದು ನಿಂಬೆ ಹಣ್ಣು
ಉಪ್ಪು ಮತ್ತು ತುಣುಕು ಬೆಲ್ಲ
ಕೆಂಪು ಕಲ್ಲುಸಕ್ಕರೆ.

ಈ ಒಣ ಶುಂಠಿ ಕಷಾಯ ನೆಗಡಿಗೆ ರಾಮಬಾಣ. ಬಿಸಿಯಿರುವಾಗಲೇ ದಿನಕ್ಕೆರಡು ಬಾರಿ ಹೀರಿದರೆ ನೆಗಡಿ ಗಡಿಬಿಡಿಯಿಂದ ಮಾಯವಾಗಿರುತ್ತದೆ. ಇದಕ್ಕೆ ಒಂದು ಕಡ್ಡಿಯಷ್ಟು ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕೂಡ ಕಡಿಮೆಯಾಗುತ್ತದೆ.
ತಯಾರಿಸುವ ವಿಧಾನ :

ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪತ್ಯೇಕವಾಗಿ ಹುರಿದಿಟ್ಟುಕೊಂಡು ಅದಕ್ಕೆ ಒಣ ಶುಂಠಿ ಹಾಕಿ ಒರಳು ಕಲ್ಲಿನಲ್ಲಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ.  ಈ ಪುಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಬಾಟಲಲ್ಲಿ ತೆಗೆದಿಟ್ಟುಕೊಂಡು ಯಾವಾಗ ಬೇಕೆಂದಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.
ಸ್ಟೌ ಮೇಲೆ ನಾಲ್ಕು ಕಪ್ಪಿನಷ್ಟು ನೀರಿಟ್ಟು ಕುದಿಸಿ. ನೀರು ಕುದಿಯುತ್ತಿರುವಾಗಲೇ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ ಮತ್ತು ಹತ್ತು ನಿಮಿಷ ಕುದಿಸಿ. ಶುಂಠಿ ಕಷಾಯ ಸಿಹಿಯಾಗಿರಬೇಕಿದ್ದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಕುದಿಸಿ ಇಳಿಸಿದ ನಂತರ ಸೋಸಿಕೊಂಡು ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top