fbpx
ಸಮಾಚಾರ

ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ, ಸಿದ್ದು ಚಿಂತನೆ.

ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಸಿದ್ದು ಚಿಂತನೆ

ಈ ರಾಜ್ಯಕ್ಕೆ ಅಧಿಕೃತವಾದ ಒಂದು ಬಾವುಟವಿದೆಯೇ? ಇಲ್ಲವೆಂದಾದರೆ ಅದರ ಅನಿವಾರ್ಯ ಕರ್ನಾಟಕಕ್ಕಿದೆಯೇ? ಎಂಬ ಹಳೆ ಪ್ರಶ್ನೆ ಮತ್ತೆ ಎಲ್ಲ ಕಡೆ ಕೇಳಿ ಬರುತ್ತಿದೆ.ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳು ವುದು ಅಷ್ಟು ಸುಲಭವಿಲ್ಲ. ಏಕೆಂದರೆ ದೇಶದಲ್ಲಿ ಎಲ್ಲಾ ರಾಜ್ಯಗಳು ಭಾರತದ ಅಧಿಕೃತ ರಾಷ್ಟ್ರ ದ್ವಜವಾದ ತ್ರಿವರ್ಣ ಧ್ವಜವನ್ನು ಮಾತ್ರ ಹೊಂದಬೇಕೆಂಬ ನಿಯಮವಿದೆ. ಆದರೂ ಕರ್ನಾಟಕದಲ್ಲಿ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ನಾಡಧ್ವಜವನ್ನಾಗಿ ಪರಿಗಣಿಸಲಾಗಿದೆ. ಆದರೆ, ಇದಕ್ಕೆ ಯಾವುದೇ ಅಧಿಕೃತವಾದ ಮಾನ್ಯತೆ ಇಲ್ಲ.

ಒಂದು ಕಡೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರುವ ಮೂಲಕ ಪ್ರಾದೇಶಿಕ ಭಾಷೆಗಳ ಅಸ್ಥಿತ್ವವನ್ನು ಅಲುಗಾಡಿಸಲು ಒಂದೆಡೆ ಸದ್ದಿಲ್ಲದೆ ಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಸರ್ಕಾರ ಪ್ರತ್ಯೇಕ ಧ್ವಜ ಹೊಂದಲು ಮುಂದಾಗಿದೆ.

ಸಮಿತಿಯ ರಚನೆ:

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜವನ್ನು ರೂಪಿಸಿ, ಅದಕ್ಕೆ ಕಾನೂನು ಚೌಕಟ್ಟು ನೀಡಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ರಾಜ್ಯ ಸರ್ಕಾರ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ಅಧಿಕೃತವಾಗಿ ನಾಡಧ್ವಜವನ್ನಾಗಿ ಮಾನ್ಯ ಮಾಡಲು 9 ಮಂದಿ ಹಿರಿಯ ಸಾಹಿತಿಗಳ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಅಧ್ಯಯನ ನಡೆಸಿ ಹಾಲಿ ಇರುವ ಧ್ವಜವನ್ನೇ ಅಂಗೀಕರಿಸಬೇಕೆ, ಇಲ್ಲವೇ ಹೊಸದೊಂದು ಧ್ವಜವನ್ನು ಮಾನ್ಯ ಮಾಡಬೇಕೆ ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಈ ಬಗ್ಗೆ ಆಸಕ್ತಿ ವಹಿಸಿ,ಅದಕ್ಕಾಗಿಯೇ 9 ಮಂದಿ ಸಮಿತಿಯನ್ನು ರಚಿಸಿದ್ದಾರೆ.

ದೇಶದ ಪ್ರಶ್ನೆ ಬಂದಾಗ ನಾವು ಹೇಗೆ ತ್ರಿವರ್ಣ ಧ್ವಜದಡಿಯಲ್ಲಿ ಒಂದಾಗಿ ನಿಲ್ಲುತ್ತಾ ಬಂದಿದ್ದೇವೆಯೋ, ಹಾಗೆಯೇ ಕನ್ನಡದ ಪ್ರಶ್ನೆ ಬಂದಾಗ ಹಳದಿ-ಕೆಂಪು ಬಾವುಟದಡಿ ನಿಂತುಕೊಂಡಿದ್ದೇವೆ. ಹಾಗಾಗಿ ಸರಕಾರ ಅಧಿಕೃತವಾಗಿ ನ್ಯಾಯಾಲಯದಲ್ಲಿ ಕೆಂಪು-ಹಳದಿ ಕನ್ನಡದ ಬಾವುಟ ಎಂದು ಘೋಷಿಸಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top