fbpx
ದೇವರು

ಮಂಗಳವಾರ ಏಕೆ ಕೂದಲು ಕತ್ತರಿಸಬಾರದು ಗೊತ್ತಾ?

 

ಮಂಗಳವಾರ ಏಕೆ ಕೂದಲು ಕತ್ತರಿಸಬಾರದು ಓದಿ ವೈಜ್ಞಾನಿಕ ಹಾಗು ತಾರ್ಕಿಕ ಉತ್ತರ !

 

ಧಾರ್ಮಿಕ ಕಾರಣಗಳು :

1.ಮಂಗಳ ಗ್ರಹದ ಅಧಿಪತಿ ಕುಜಗ್ರಹವಾಗಿದ್ದು ತಲೆಯ ಕೂದಲು,ರಕ್ತ ,ಉಗುರು ಹಾಗು ಚರ್ಮದ ಮೇಲೆ ಬಹಳ ಪರಿಣಾಮವನ್ನು ಉಂಟುಮಾಡುತ್ತವೆ .

2. ಕೂದಲು ಚೌರ ಮಾಡಿಸಿಕೊಳ್ಳುವುದು ಅಪಶಕುನ ಎಂದು ಭಾವಿಸಲಾಗುತ್ತದೆ ,ಏಕೆಂದರೆ ಮನೆಯಲ್ಲಿ ತಂದೆ ತೀರಿಕೊಂಡಾಗ ಗಂಡು ಮಕ್ಕಳು ಚೌರ ಮಾಡಿಸಿಕೊಳ್ಳುತ್ತಾರೆ ಆದ್ದರಿಂದ ಆ ದಿನ ಕೂದಲು ಚೌರ ಮಾಡಿಸಿಕೊಂಡರೆ 8 ತಿಂಗಳು ಆಯುಸ್ಸು ಕಡಿಮೆಯಾಗಿ ಕುಜ ದೋಷ ಬರುವುದು ಎಂದು ನಂಬಲಾಗಿದೆ.

3.ಶನಿ ದೇವರು ಕಪ್ಪು ಬಣ್ಣದ ಪ್ರಿಯ ಆದ್ದರಿಂದಲೇ ಕಪ್ಪು ಎಳ್ಳನ್ನು ಶನಿ ದೇವರಿಗೆ ಅರ್ಪಿಸಲಾಗುತ್ತದೆ, ನಮ್ಮ ತಲೆ ಕೂದಲಿನ ಮೇಲೆ ಅತ್ಯಂತ ಹಿಡಿತ ಇರುವುದು ಶನಿ ದೇವರಿಗೆ ,ಶನಿ ದೇವರು ಕುಜನಿಂದ ನಮ್ಮ ಕೂದಲಿನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳಿಂದ ನಮ್ಮನ್ನು ರಕ್ಷಿಸುತ್ತಾನೆ ಒಂದು ವೇಳೆ ಕೂದಲನ್ನು ಕತ್ತರಿಸಿಕೊಂಡರೆ ಮಂಗಳ ಗ್ರಹದ ಅಧಿಪತಿ ಕುಜನು ತನ್ನ ಅಧಿಪತ್ಯ ಸಾಧಿಸುತ್ತಾನೆ ಹಾಗು ಕೆಟ್ಟ ಶಕುನಗಳು ಶುರುವಾಗುತ್ತವೆ ಎಂದು ನಂಬಲಾಗಿದೆ.

ವೈಜ್ಞಾನಿಕ ಕಾರಣಗಳು :

ಹಿಂದಿನ ಕಾಲದಲ್ಲಿ ದೇವಿಯ ಆರಾಧನೆಗೆ ವಿಶೇಷ ಮಹತ್ವವನ್ನು ನೀಡಲಾಗಿತ್ತು ಮಂಗಳ ವಾರದ ದಿನ ಹೋಮ ,ಹವನ, ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು .
ಮಂಗಳವಾರ ಶುಭ ದಿನ ಮನೆಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ.

ಮಂಗಳವಾರ ಮನೆಯ ಹೆಣ್ಣು ಮಕ್ಕಳು ತಲೆಗೆ ಸ್ನಾನ ಮಾಡಿ ,ಮನೆಯನ್ನು ಶುಚಿಗೊಳಿಸಿ ಹೆಣ್ಣು ದೇವತೆಯ ಆರಾಧನೆ ಮಾಡುತ್ತಿರುತ್ತಾರೆ ,ಹೀಗಿರುವಾಗ ಮನೆಯ ಶುಶಿತ್ವದ ದೃಷ್ಟಿಯಿಂದ ಕೂದಲು ಕತ್ತರಿಸಬಾರದು ಎಂದು ಹೇಳಲಾಗುತ್ತಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top