ವೈರಸ್ ಸೋಂಕಿನಿಂದ ಒಣ ಕೆಮ್ಮು ಆಗಿದ್ದರೆ ಈ 6 ಕ್ರಮ ಬಳಸಿ ಸರಿ ಮಾಡ್ಕೊಳ್ಳಿ
ಜೇನುತುಪ್ಪ:
ಕೆಮ್ಮುನ್ನು ನಿಯಂತ್ರಿಸಲು ದಿನಕ್ಕೆ 1 ಚಮಚ ಜೇನುತುಪ್ಪವನ್ನು 3 ಬಾರಿ ತೆಗೆದುಕೊಳ್ಳಿ. ಕೆಮ್ಮು ನಿಮ್ಮ ನಿದ್ರೆಯನ್ನು ಅಡ್ಡಿಪಡಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ತೆಗೆದುಕೊಳ್ಳಿ.
ಉಪ್ಪು ನೀರು :
ಒಂದು ಲೋಟ ನೀರಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿ ಹೀಗೆ ಮಾಡಿದರೆ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.
ಬಿಸಿ ನೀರ ಶಾಖ :
ಒಂದು ಬಟ್ಟಲು ಬಿಸಿ ನೀರಿಗೆ ಸ್ವಲ್ಪ ನೀಲಗಿರಿ ಎಣ್ಣೆ ಅಥವಾ ಅಮೃತಾಂಜನ್ ಬೆರೆಸಿ ಟವೆಲ್ ನ ಸಹಾಯದಿಂದ ಗುಬ್ಬರು ಹಾಕಿಕೊಳ್ಳಿ ಶಾಖವನ್ನು ಪಡೆದುಕೊಳ್ಳಿ , ಈ ಬಿಸಿ ನೀರಿನ ಶಾಖಪಡೆದರೆ ಒಳ್ಳೆಯದು .
ಮೆಣಸು ಮತ್ತು ಜೇನು ತುಪ್ಪ :
ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಕಾಲು ಚಮಚ ಮೆಣಸು ಪುಡಿ ಮತ್ತು ಜೇನುತುಪ್ಪ ಬೆರೆಸಿ , 10 ನಿಮಿಷ ಆದ ಮೇಲೆ ಸ್ಟವ್ ನಿಂದ ಇಳಿಸಿ ,
ಆರಿಸಿ ಅರ್ಧ ಬಿಸಿ ಇರುವಾಗಲೇ ಸೇವಿಸಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೆಮ್ಮು ಮಾಯ.
ಶುಂಠಿ ಕಷಾಯ :
ಸಣ್ಣಗೆ ಕತ್ತರಿಸಿದ ಶುಂಠಿ ಒಂದು ಚಮಚ ,ಕಾಲು ಚಮಚ ಮೆಣಸು ಪುಡಿ ಮತ್ತು ಒಂದು ಚಮಚ ಜೇನುತುಪ್ಪ ಇಷ್ಟನ್ನು ಒಂದು ಲೋಟ ನೀರಿಗೆ ಹಾಕಿ ಕುದಿಯಲು ಬಿಡಿ 10 ನಿಮಿಷ ಆದ ಮೇಲೆ ಸ್ಟವ್ ನಿಂದ ಇಳಿಸಿ , ಆರಿಸಿ ಅರ್ಧ ಬಿಸಿ ಇರುವಾಗಲೇ ಸೇವಿಸಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೆಮ್ಮು ಮಾಯ.
ವೀಳ್ಯದ ಎಲೆ :
ಒಂದು ವೀಳ್ಯದ ಎಲೆ ತೆಗೆದು ಕೊಂಡು ಅದಕ್ಕೆ ಒಂದು ಬಸಳೆ ಎಲೆಯನ್ನು ಸೇರಿಸಿ , ಒಂದು ಸಣ್ಣ ತುಂಡು ಶುಂಠಿ ಮತ್ತು ಒಂದು ಲವಂಗ ಸೇರಿಸಿ ಮಡಸಿ ಬಾಯಲ್ಲಿ ಜಗಿಯಿರಿ ಹೀಗೆ ಮಾಡಿದರೆ
ಕೆಮ್ಮು ಬೇಗ ವಾಸಿಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
