fbpx
ಜೀವನ ಕ್ರಮ

ಜಂಬದ ಜಾದುಗಾರ ನ ಕೊಬ್ಬಿಳಿಸಿದ ತೆನಾಲಿ ರಾಮ

ಜಂಬದ ಜಾದುಗಾರ.

ಒಮ್ಮೆ ಶ್ರೀ ಕೃಷ್ಣ ದೇವರಾಯನ ಆಸ್ತಾನನದಲ್ಲಿ ಒಬ್ಬ ಜಾದೂಗಾರ ಬಂದ. ಅವನು ಆಸ್ಥಾನದಲ್ಲಿ ಇದ್ದವರನ್ನೆಲ್ಲ ತನ್ನ ಜಾದುವಿನಿಂದ ರಂಜಿಸಿದ.ಕೊನೆಯಲ್ಲಿ ಅವನು ಹೇಳಿದ “ಓ ಮಹಾರಾಜರೇ ಈ ರಾಜ್ಯದಲ್ಲಿ ಯಾರೂ ನನ್ನ ಜಾದುವಿಗೆ ಸಮನಾಗಲಾರರು” ಎಂದ.

ಕೃಷ್ಣ ದೇವರಾಯನಿಗೆ ಅವನ ಜಂಭ ಹಿಡಿಸಲಿಲ್ಲ .ಈ ಜಾದುಗಾರನನ್ನು ಸೋಲಿಸಬಲ್ಲವರು ಯಾರಾದರೂ ಇಲ್ಲಿದ್ದಾರೆಯೇ ಯಾರು ಎದ್ದೇಳಲಿಲ್ಲ. ರಾಜನಿಗೆ ಆಶ್ಚರ್ಯವಾಯಿತು ನಂತರ ಈ ಸಮಸ್ಯೆಗೆ ತೆನಾಲಿ ರಾಮ ಮಾತ್ರನೇ ಉತ್ತರ ನೀಡಬಲ್ಲ ಎಂದು ತಿಳಿಯಿತು.
ರಾಮನನ್ನು ಕರೆದು ಈ ರೀತಿ ಹೇಳಿದರು “ ರಾಮ ನಾನು ನಿನಗೆ ಒಂದು ದಿನ ಕಾಲಾವಕಾಶ ಕೊಡುತ್ತೇನೆ.ನೀನು ಈ ಜಾದುಗಾರ ಮಾಡಲಾಗದಂತಹ ಜಾದುವನ್ನು ನೀನು ಮಾಡಿ ತೋರಿಸಬೇಕು.ರಾಮ ಗಲಿಬಿಲಿಗೊಂಡು ದುಃಖದಿಂದ ಮನೆಗೆ ಹೋದ.

ತೆನಾಲಿ ರಾಮನ ಹೆಂಡತಿ ಕೇಳಿದಳು ಪ್ರಿಯ ಏನಾಯಿತು ನಿಮಗೆ ? ಏಕೆ ಹೀಗೆ ದುಃಖ ಪಡುತ್ತಿದ್ದೀರಿ ? .ರಾಜನು ನನಗೆ ಒಬ್ಬ ಜಾದುಗಾರನನ್ನು ಸೋಲಿಸಲು ಒಂದು ಜಾದು ಮಾಡಿ ತೋರಿಸಲು ಆಜ್ಞೆ ಮಾಡಿದ್ದಾರೆ.

ಅಷ್ಟೇ ಏನು ನೀವು ರಾಜನು ಹೇಳಿದ ಮಾತನ್ನು ಸರಿಯಾಗಿ ಹೇಳಿ ನಾನು ಆ ಜಾದುಗಾರನು ಮಾಡಲಾಗದ್ದನ್ನು ಮಾಡಬೇಕು ಎಂದು ಹೇಳಿದ ತೆನಾಲಿ ರಾಮ.ಆಗ ರಾಮನ ಹೆಂಡತಿ ಮಕ್ಕಳು ಮನೆಯ ಹೊರಗೆ ಮರಳಿನಲ್ಲಿ ಆಟವಾಡುತ್ತಿದ್ದುದ್ದನ್ನು ನೋಡಿದಳು.ಅವಳಿಗೆ ಒಂದು ಉಪಾಯ ಒಳೆಯಿತು.


ಮರುದಿನ ಆಸ್ಥಾನದಲ್ಲಿ ರಾಜ ‘ಶುಭಾಷಯ ರಾಮ. ಜಾದು ಮಾಡಲು ತಯಾರಾಗಿದ್ದೀಯ ?’ ಎಂದು ಕೇಳಿದ .ತೇನಾಲಿರಾಮ ಹೌದು ಮಹಾಪ್ರಭು ಎಂದ ರಾಮ.ನಾನು ನನ್ನ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡು ಒಂದು ಚಮತ್ಕಾರ ಮಾಡುತ್ತೇನೆ. ಜಾದುಗಾರನು ಇದನ್ನು ಕಣ್ಣು ತೆರೆದುಕೊಂಡೇ ಮಾಡಲಿ ನೋಡೋಣ.

ಕಣ್ಣು ಮುಚ್ಚಿಕೊಂಡು ಚಮತ್ಕಾರ ಮಾಡುವುದೇ ಬನ್ನಿ ಮಾಡಿ ನೋಡೋಣ ಎಂದು ಎಲ್ಲರು ನಡೆದರು. ರಾಮ ಅವನ ಕಣ್ಣುಗಳನ್ನು ಮುಚ್ಚಿಕೊಂಡು ಸ್ವಲ್ಪ ಹೊತ್ತು ಮರಳನ್ನು ತನ್ನ ಕಣ್ಣಿನ ಮೇಲೆ ಎರೆಚಿಕೊಂಡ .


‘ಬಾ ಇದನ್ನೇ ನೀನು ಹೀಗೆ ಕಣ್ಣು ತೆರೆದುಕೊಂಡು ಮಾಡಿ ತೋರಿಸು’ ಎಂದ ರಾಮ. ಜಾದುಗಾರ ತನ್ನ ಸೋಲನ್ನು ಒಪ್ಪಿಕೊಂಡ ಮತ್ತು ಹೊರಟೇ ಹೋದ.
ಎಂದಿನಂತೆಯೇ ರಾಜ ರಾಮನ ಗುಣಗಾನ ಮಾಡಿದ.ರಾಮನಿಗೆ ಬಂಗಾರದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟು ಸನ್ಮಾನಿಸಿದ.ಹೀಗೆ ತೆನಾಲಿ ರಾಮನ ಬುದ್ದಿ ಮತ್ತೊಮ್ಮೆ ಸಾಭೀತಾಯಿತು.ಜಂಭದ ಜಾದುಗಾರನ ಜಂಭವು ಇಳಿಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top