fbpx
ಭವಿಷ್ಯ

20 ಜೂಲೈ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೨೦ ಜುಲೈ ೨೦೧೭
ಸೂರ್ಯೋದಯ : ೦೫:೩೯
ಸೂರ್ಯಾಸ್ತ : ೧೯:೧೪
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಕೃಷ್ಣ ಪಕ್ಷ
ತಿಥಿ : ದ್ವಾದಶೀ
ನಕ್ಷತ್ರ : ರೋಹಿಣಿ
ಯೋಗ : ವೃದ್ಧಿ
ಅಮೃತಕಾಲ : ೧೪:೩೨ – ೧೫:೫೮

ರಾಹು ಕಾಲ: ೧೨:೧೮ – ೧೩:೫೭
ಗುಳಿಕ ಕಾಲ: ೧೦:೩೯ – ೧೨:೧೮
ಯಮಗಂಡ: ೦೭:೨೧ – ೦೯:೦೦

ಮೇಷ (Mesha)


ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಇರಲಿ. ಮಹಿಳೆಯರು ಆಗಾಗ ಋಣಾತ್ಮಕ ಚಿಂತನೆಯನ್ನು ಹೊಂದಲಿದ್ದಾರೆ. ವಿದ್ಯಾರ್ಥಿಗಳು ಅತೀ ಪರಿಶ್ರಮ ಹಾಕಲೇ ಬೇಕಾಗುವುದು.

ವೃಷಭ (Vrushabh)


ನವ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಆರ್ಥಿಕವಾಗಿ ಧನಾಗಮನ ಉತ್ತಮ. ಶ್ರೀದೇವತಾನುಗ್ರಹ ನಿಮ್ಮನ್ನು ಎಲ್ಲಾ ರೀತಿಯಲ್ಲಿ ಕಾಪಾಡಲಿದೆ. ಧೈರ್ಯದಿಂದ ಎದುರಿಸುತ್ತಾ ಮುಂದುವರಿಯಿರಿ.

ಮಿಥುನ (Mithuna)


ದಾಂಪತ್ಯದಲ್ಲಿ ಅನಾವಶ್ಯಕ ಕಲಹಕ್ಕೆ ಕಾರಣವಾಗದಿರಿ. ನೂತನ ಕೆಲಸಧಿಕಾರ್ಯಗಳಿಗೆ ಜಾಗ್ರತೆಯಿಂದ ಮುಂದುಧಿವರಿಯಿರಿ. ವ್ಯಾಪಾರ, ವ್ಯವಹಾರಗಳು ಉತ್ತಮ ಲಾಭದಾಯಕವಾಗಲಿವೆ. ಮಹಿಳೆಯರು ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ.

ಕರ್ಕ (Karka)


ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಯುವಕ, ಯುವತಿಯರಿಗೆ ಅನಿರೀಕ್ಷಿತ ಕಂಕಣಬಲ ಕೂಡಿ ಬಂದೀತು. ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಲವಿದೆ.

ಸಿಂಹ (Simha)


ದೇವತಾನುಗ್ರಹವಿರುವುದರಿಂದ ನಿಮ್ಮ ನಿರೀಕ್ಷಿತ ಕೆಲಸಕಾರ್ಯಗಳು ನಿಶ್ಚಿತ ರೂಪದಲ್ಲಿ ನಡೆದು ಹೋಗಲಿವೆ. ಉದ್ಯೋಗಿಗಳಿಗೆ ಉತ್ತಮ ಉದ್ಯೋಗದ ಅವಕಾಶಗಳು ಸಿಗಲಿವೆ. ದಿನಾಂತ್ಯ ಶುಭ.

ಕನ್ಯಾರಾಶಿ (Kanya)


ಅನಿರೀಕ್ಷಿತ ವೃತ್ತಿ ಕ್ಷೇತ್ರದಲ್ಲಿ ಅಪವಾದ ಭೀತಿ ತಂದೀತು. ಶುಭಮಂಗಲ ಕಾರ್ಯಗಳಿಗೆ ಅವಸರ ಮಾಡದಿರಿ. ಸದ್ಯದಲ್ಲೇ ವೃತ್ತಿ ಕ್ಷೇತ್ರದಲ್ಲಿ ಮುಂಭಡ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಶುಭ ಫ‌ಲಿತಾಂಶ.

ತುಲಾ (Tula)


ಆಧಿಕ ನಿರ್ಧಾರಗಳು ನಿಮ್ಮ ಚಿಂತನೆ ಮೇಲೆ ಹೊಂದಿ ಕೊಂಡಿರುತ್ತದೆ. ಧೈರ್ಯದಿಂದ ಮುಂದುವರಿಯಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ.

ವೃಶ್ಚಿಕ (Vrushchika)


ವಿದ್ಯಾರ್ಥಿಗಳಿಗೆ ತಮ್ಮ ಉತ್ತಮ ಭವಿಷ್ಯದಂತೆ ಮುನ್ನಡೆಗೆ ಸಕಾಲ. ಯೋಗ್ಯ ವಯಸ್ಕರು ಕಂಕಣಬಲವನ್ನು ಹೊಂದಲಿದ್ದಾರೆ. ವಿದ್ಯಾರ್ಥಿಗಳಿಗೆ ಶುಭವಿದೆ. ಅತಿಥಿಗಳ ಆಗಮನದಿಂದ ಸಂತಸ.

ಧನು ರಾಶಿ (Dhanu)


ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರವಾಗಿ ನಡೆದು ಹೋಗಲಿವೆ. ಆಗಾಗ ಆರ್ಥಿಕ ಸಮಸ್ಯೆಗಳು ತೋರಿ ಬಂದರೂ ಪರಿಹಾರವಾಗಲಿವೆ. ಹಿರಿಯರೊಡನೆ ವಾದ ವಿವಾದಕ್ಕೆ ಕಾರಣರಾಗದಿರಿ.

ಮಕರ (Makara)


ಆಗಾಗ ನವದಂಪತಿಗಳಿಗೆ ಸಂಚಾರ ಒದಗಿ ಬರಲಿದೆ. ಬೆನ್ನು ನೋವು, ಹೊಟ್ಟೆ ನೋವು ಕಾಲು ಗಂಟುಗಳ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಶುಭಮಂಗಲ ಕಾರ್ಯಗಳಿಗೆ ಇದು ಸಕಾಲ.

ಕುಂಭರಾಶಿ (Kumbha)


ಹಿರಿಯರೊಡನೆ ವಾದ, ವಿವಾದ ಬಗ್ಗೆ ಕಾರಣರಾಗದಿರಿ. ಆಗಾಗ ದೇಹಾರೋಗ್ಯದಲ್ಲಿ ಮಾರ್ಪಾಡು ತೋರಿ ಬರಬಹುದು. ಸಂಚಾರದಲ್ಲಿ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಿರಿ. ದಿನಾಂತ್ಯ ಶುಭ.

ಮೀನರಾಶಿ (Meena)


ಹಿರಿಯರ ಸಹಕಾರದಿಂದ ಕಾರ್ಯಧಿಸಾಧನೆಯಾಗುತ್ತದೆ. ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಮುನ್ನಡೆ ಇರುತ್ತದೆ. ಕೆಲಸಕಾರ್ಯಗಳಿಗೆ ಶ್ರೀದೇವತಾನುಗ್ರಹ ವಿರುವುದರಿಂದ ಧೈರ್ಯದಿಂದ ಮುನ್ನಡೆಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top