fbpx
ಸಮಾಚಾರ

ಒಳ್ಳೆಯ ಹುಡುಗ ಪ್ರಥಮ್ ನಿಂದ ಕಚ್ಚಿಸಿಕೊಂಡ ಭುವನ್ ಕಥೆ

ಭುವನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು 2ನೇ ACJM ಕೋರ್ಟ್ ಪ್ರಥಮ್ ಗೆ ಷರತ್ತುಬದ್ಧ ಜಾಮೀನು ನೀಡಿದೆ. ಬಿಗ್ ಬಾಸ್ ಕನ್ನಡ ರಿಯಾಲಿಟಿ ಷೋ ವನ್ನು ಗೆದ್ದಿದ್ದ ಪ್ರಥಮ್

ಭಾನುವಾರ ತಲಘಟ್ಟಪುರದಲ್ಲಿ ಸಂಜು ಮತ್ತು ನಾನು ಎಂಬ ಕಿರುತೆರೆ ಧಾರಾವಾಹಿ ಚಿತ್ರೀಕರಣದ ಸಂದರ್ಭದಲ್ಲಿ ಸಹನಟ ಭುವನ್ ಅವರ ತೊಡೆಯನ್ನು ಕಚ್ಚಿ ರಾದ್ಧಾಂತ ಮಾಡಿದ್ದರು. ಈ ಸಂಭಂದ ನಟ ಭುವನ ಪ್ರಥಮ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಿದ್ದರು. ಭುವನ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಕೇಸ್ ಫೈಲ್ ಮಾಡಿದ್ದರು.

ಈ ಕುರಿತು ಇಂದು ವಿಚಾರಣೆ ನಡೆಸಿದ ಜಾಮೀನು ಅರ್ಜಿಯನ್ನ ವಿಚಾರಣೆ ನಡೆಸಿದ 2ನೇ ಎಸಿಜೆಎಂ ಕೋರ್ಟ್ ನ್ಯಾಯಧೀಶರಾದ ಪೃಥ್ವಿರಾಜ್ ವರ್ಣೀಕರ್, ಪ್ರಥಮ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.5 ಸಾವಿರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ, ಜುಲೈ 31 ರಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪ್ರಥಮ್ ಸೂಚಿಸಿದೆ ಎನ್ನಲಾಗಿದೆ.

ಈ ಕುರಿತು ಪ್ರಥಮ “ಭುವನ್ ನನ್ನ ಕುತ್ತಿಗೆಗೆ ಬಾರಿಸಿದ ಆದ್ದರಿಂದ ಆತ್ಮ ರಕ್ಷಣೆಗಾಗಿ ಅವನ ತೊಡೆ ಕಚ್ಚಬೇಕಾಯಿತು”ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top