fbpx
ಸಣ್ಣ ಕಥೆ

ಪ್ರಪಂಚದಲ್ಲಿ ದೃಷ್ಟಿ ಇರುವವರಿಗಿಂತ ಕುರುಡರೇ ಹೆಚ್ಚಾಗಿದ್ದಾರೆ ಎಂದು ನಿರೂಪಿಸಿದ ಬುದ್ದಿವಂತ ಬೀರ್ ಬಲ್!!!

ಪ್ರಪಂಚದಲ್ಲಿ ದೃಷ್ಟಿ ಇರುವವರಿಗಿಂತ ಕುರುಡರೇ ಹೆಚ್ಚಾಗಿದ್ದಾರೆ ಎಂದು ನಿರೂಪಿಸಿದ ಬುದ್ದಿವಂತ ಬೀರ್ ಬಲ್!!!

 

ಒಂದು ದಿನ ಅಕ್ಬರ್ ಮತ್ತು ಬೀರ್ ಬಲ್ ಜೊತೆಯಲ್ಲಿ ವಾಯುವಿಹಾರಕ್ಕೆ ಹೋದರು ಆಗ ಅಕ್ಬರ್ ನು “ಬೀರ್ ಬಲ್ ಪ್ರಪಂಚದಲ್ಲಿ ಕುರುಡರು ಹೆಚ್ಚೇ ಅಥವಾ ಕಣ್ಣು ಇರುವವರು ಹೆಚ್ಚೇ” ಎಂದು ಕೇಳಿದರು ಅದಕ್ಕೆ ಬೀರ್ ಬಲ್ ನು “ಹೌದು ಕುರುಡರೇ ನಮ್ಮ ಪ್ರಪಂಚದಲ್ಲಿ ಹೆಚ್ಚಾಗಿದ್ದರೆ ಮಹಾಪ್ರಭು!”ಎಂದು ಹೇಳಿದನು ಅದಕ್ಕೆ ಅಕ್ಬರ್ “ಅದು ಹೇಗೆ ಬೀರ್ ಬಲ್, ನಾಳೆ ನೀನು ಅದನ್ನು ನಿರೂಪಿಸಬಲ್ಲೆಯೇ” ಎಂದು ಕೇಳಿದನು, ಆಗ ಬೀರ್ ಬಲ್ “ಆಗಲಿ ಮಹಾರಾಜ ನಾಳೆ ಅದನ್ನು ನಿರೂಪಿಸಿ ತೋರಿಸುತ್ತೇನೆ” ಎಂದು ಹೇಳಿದನು

ಮರುದಿನ ಬೀರ್ ಬಲ್ ಅರಮನೆಯ ಮುಂದೆ ಒಂದು ಮುರಿದು ಹೋಗಿರುವ ಮಂಚವನ್ನು ಇಟ್ಟುಕೊಂಡು ರಿಪೇರಿ ಮಾಡುತ್ತಾ ಕುಳಿತುಕೊಂಡಿದ್ದನು.ಅಲ್ಲಿಗೆ ಅಕ್ಬರ್ ಬಂದನು “ಬೀರ್ ಬಲ್ ನೀನು ಆಸ್ಥಾನಕ್ಕೆ ಬರದೇ ಇಲ್ಲಿ ಏನು ಮಾಡುತ್ತಿರುವೆ”ಎಂದು ಪ್ರಶ್ನಿಸಿದನು. ಅಕ್ಬರನು ಕೇಳಿದ್ದಕ್ಕೆ ಬೀರ್ ಬಲ್ ಏನೂ ಹೇಳದೆ ಬೀರ್ ಬೆಲ್ ನ ಸಹಾಯಕನ ಕಡೆ ನೋಡಿದನು ಆ ಸಹಾಯಕ ಏನನ್ನೋ ಬರೆದುಕೊಂಡನು. ಹೀಗೆ ಅಲ್ಲಿಗೆ ಬಂದ ಅನೇಕ ಜನರು ಅವನನ್ನು ಏನು ಮಾಡುತ್ತಿರುವೆ ಮತ್ತು ಮಂಚವನ್ನು ಏಕೆ ರಿಪೇರಿ ಮಾಡುತ್ತಿರುವೆ ಎಂದು ಕೇಳತೊಡಗಿದರು, ಬೀರ್ ಬಲ್ ನ ಸಹಾಯಕ ಎಲ್ಲವನ್ನು ಬರೆದುಕೊಳ್ಳುತ್ತಿದ್ದನು.

 

ಮರುದಿನ ಬೀರ್ ಬಲ್ ಆಸ್ಥಾನಕ್ಕೆ ಎರಡು ಹಾಳೆಗಳ ಪಟ್ಟಿಗಳೊಡನೆ ಬಂದನು, ಆಗ ರಾಜನು “ಬೀರ್ ಬಲ್ ನೀನು ಕುರುಡರು ಜಾಸ್ತಿ ಇದ್ದಾರೆ ಎಂದು ಹೇಳಿದ್ದೆಯಲ್ಲ ಅದನ್ನ ಯಾವಾಗ ನಿರೂಪಿಸುವೆ”ಎಂದು ಕೇಳಿದನು.ಅದಕ್ಕೆ ಬೀರ್ ಬಲ್ “ಈಗಲೇ ನಿರೂಪಿಸುತ್ತೇನೆ ಮಹಾಪ್ರಭು”ಎಂದು ಹೇಳಿದನು. ಬೀರ್ ಬಲ್ ಎರಡು ಹಾಳೆಗಳನ್ನು ಅಕ್ಬರನಿಗೆ ಕೊಟ್ಟನು ಒಂದು ಕುರುಡರ ಪಟ್ಟಿಯಾಗಿದ್ದು ಮತ್ತೊಂದು ದೃಷ್ಟಿ ಇರುವವರ ಪಟ್ಟಿಯಾಗಿತ್ತು.

ಆಗ ಅಕ್ಬರ್ “ಏನಿದು ಬೀರ್ ಬಲ್ ಮೊದಲ ಪಟ್ಟಿಯಲ್ಲಿ ಹೆಚ್ಚು ಹೆಸರುಗಳಿವೆ ಮತ್ತು ನನ್ನ ಹೆಸರನ್ನೂ ಕೂಡ ಸೇರಿಸಿದ್ದೀಯಾ ಮತ್ತು ಎರಡನೇ ಕಡಿಮೆ ಪಟ್ಟಿಯಲ್ಲಿ ಹೆಸರುಗಳಿವೆ,,ಇದೇನು ಹುಡುಗಾಟಿಕೆಯೇ?” ಎಂದು ಕೇಳಿದನು. ಅದಕ್ಕೆ ಬೀರ್ಬಲ್ “ಇಲ್ಲ ಮಹಾಪ್ರಭು, ಮೊದಲ ಪಟ್ಟಿಯಲ್ಲಿರುವವರು ನಾನು ಮಾಡುತ್ತಿದ್ದುದನ್ನು ನೋಡಿಯೂ ನನ್ನನ್ನು ಏನು ಮಾಡುತ್ತಿರುವೆ ಎಂದು ಕೇಳಿದವರು ಹಾಗಾಗಿ ಅವರು ಕುರುಡರು ಮತ್ತು ಇನ್ನೊಂದು ಪಟ್ಟಿಯಲ್ಲಿ ಮಂಚವನ್ನು ಏಕೆ ರಿಪೇರಿ ಮಾಡುತ್ತಿರುವೆ ಎಂದು ಕೇಳಿದ ಜನರದ್ದು ಹೀಗಾಗಿ ಇವರು ನಾನು ಏನು ಮಾಡುತ್ತಿದ್ದೇನೆಂದು ನೋಡಿ ತಿಳಿದುಕೊಂಡಿದ್ದರು, ಮತ್ತು ಅವರ ದೃಷ್ಟಿ ಸರಿಯಾಗಿರುವವರು,,ಈಗ ಹೇಳಿ ಮಹಾಪ್ರಭು ಯಾರು ಹೆಚ್ಚಾಗಿದ್ದಾರೆ ಎಂದು” ಎಂದು ಹೇಳಿದನು.

ಆಗ ಅಕ್ಬರ್ “ಕುರುಡರೇ ಹೆಚ್ಚಾಗಿದ್ದರೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ” ಎಂದು ನಾಚಿಕೆಯಿಂದ ತಲೆ ತಗ್ಗಿಸಿದನು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top