ಶುಕ್ರವಾರ, ೨೮ ಜುಲೈ ೨೦೧೭
ಸೂರ್ಯೋದಯ : ೦೫:೪೪
ಸೂರ್ಯಾಸ್ತ : ೧೯:೧೦
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಶ್ರಾವಣ
ಪಕ್ಷ : ಶುಕ್ಲ ಪಕ್ಷ
ತಿಥಿ : ಪಂಚಮೀ
ನಕ್ಷತ್ರ : ಹಸ್ತ
ಯೋಗ : ಶಿವ
ಅಮೃತಕಾಲ : ೨೩:೨೬ – ೨೫:೦೬
ರಾಹು ಕಾಲ: ೧೦:೪೬ – ೧೨:೨೭
ಗುಳಿಕ ಕಾಲ: ೦೭:೨೫ – ೦೯:೦೫
ಯಮಗಂಡ: ೧೫:೪೯ – ೧೭:೨೯
ಮೇಷ (Mesha)
ವಿದ್ಯಾರ್ಥಿಗಳಿಗೆ ವಿದೇಶಿಯಾನದ ಯೋಗ ಕೂಡಿ ಬರಬಹುದು. ಆಗಾಗ ಆರೋಗ್ಯದ ಬಗ್ಗೆ ಗಮನ ಹರಿಸಬಹುದು. ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿದಾಯಕ ವಾತಾವರಣ ಸಮಾಧಾನ ತರಲಿದೆ. ಅತಿಥಿಗಳು ಬಂದಾರು.
ವೃಷಭ (Vrushabh)
ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಅವಕಾಶ ದೊರಕಲಿದೆ. ಆರೋಗ್ಯ ಭಾಗ್ಯದಲ್ಲಿ ಹಂತ ಹಂತವಾಗಿ ಸಮಾಧಾನ ತೋರಿ ಬರಲಿದೆ. ವ್ಯಾಪಾರ, ವ್ಯವಹಾರಗಳು ಲಾಭಕರವಾಗಲಿವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಗಮನ ಅಗತ್ಯ.
ಮಿಥುನ (Mithuna)
ಆಗಾಗ ತೋರಿ ಬರುವ ಅಡಚಣೆಗಳು ಹಂತ ಹಂತವಾಗಿ ಕಡಿಮೆಯಾಗಲಿವೆ. ಆರ್ಥಿಕವಾಗಿ ಹೆಚ್ಚಿನ ಖರ್ಚುವೆಚ್ಚಗಳನ್ನು ನಿಯಂತ್ರಿಸಿರಿ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ಜಾಗ್ರತೆ ವಹಿಸಿದರೆ ಉತ್ತಮ.
ಕರ್ಕ (Karka)
ಮಾನಸಿಕವಾಗಿ ಅದಷ್ಟು ಸಮಾಧಾನವನ್ನು ಇಟ್ಟುಕೊಳ್ಳಿರಿ. ಮಹಿಳೆಯರು ಅನಾವಶ್ಯಕವಾಗಿ ಕೋಪ, ಉದ್ವೇಗಕ್ಕೆ ಒಳಗಾದಾರು. ಆರ್ಥಿಕ ಲಾಭ ವೃದ್ಧಿಸಲಿದೆ. ಸಂಚಾರದ ಬಗ್ಗೆ ವಾಹನ ಖರೀದಿಯ ಯೋಗವಿದೆ. ದಿನಾಂತ್ಯ ಶುಭ.
ಸಿಂಹ (Simha)
ದೇವತಾನುಗ್ರಹ ನಾನಾ ರೀತಿಯಿಂದ ಕಾಪಾಡಲಿದೆ. ಆದರೂ ಋಣಾತ್ಮಕ ಚಿಂತೆಗೆ ಗುರಿಯಾಗದಿರಿ. ದೈಹಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಹಿರಿಯರಿಗೆ ತೀರ್ಥಯಾತ್ರಾ ಸ್ಥಾನ ಭಾಗ್ಯವಿದೆ. ಆರೋಗ್ಯದಲ್ಲಿ ಜಾಗ್ರತೆ.
ಕನ್ಯಾರಾಶಿ (Kanya)
ಅನಾವಶ್ಯಕವಾಗಿ ವಾದ, ವಿವಾದಗಳಿಗೆ ಕಾರಣರಾಗದಿರಿ. ಆರ್ಥಿಕವಾಗಿ ಆಗಾಗ ಏರುಪೇರುಗಳು ತೋರಿ ಬಂದಾವು. ಅನಿರೀಕ್ಷಿತವಾಗಿ ಬಂದ ಅತಿಥಿಗಳ ಆಗಮನ ಸಂತಸ ತಂದೀತು. ಮೇಲಧಿಕಾರಿಗಳಿಗೆ ಮುಂಂಭಡ್ತಿ ಯೋಗವಿದೆ.
ತುಲಾ (Tula)
ಸಾಂಸಾರಿಕವಾಗಿ ಹಂತ ಹಂತವಾಗಿ ಸಂತೋಷದ ವಾತಾವರಣ. ನಿಮ್ಮ ಎಷ್ಟೋ ಕೆಲಸಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಿವೆ. ಆರ್ಥಿಕವಾಗಿ ನಾನಾ ರೀತಿಯ ಧನಾಗಮನ ವಿರುವುದು. ಹಿರಿಯರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ.
ವೃಶ್ಚಿಕ (Vrushchika)
ಶನಿ ಪ್ರತಿಕೂಲ ಸ್ಥಿತಿಯಲ್ಲಿದ್ದರೂ ಗುರು ಲಾಭ ಸ್ಥಾನದಲ್ಲಿರುವ ಕಾರಣ ಶನಿಯಿಂದ ಬಂದ ದೋಷ ಗುರುವಿನಿಂದ ಉಉಪಶಮನವಾದೀತು. ದೃಢ ನಿರ್ಧಾರ, ಪ್ರಯತ್ನಬಲವು ನಿಮ್ಮನ್ನು ಮುನ್ನಡೆಗೆ ಸಾಧಕವಾದಾನು.
ಧನು ರಾಶಿ (Dhanu)
ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಕಂಡು ಬರದಿದ್ದರೂ ಆಗಾಗ ಧನಾಗಮನ ಸಮಾಧಾನ ತರಲಿದೆ. ಸಾಂಸಾರಿಕವಾಗಿ ಸಮಾಧಾನದ ವಾತಾವರಣವಿದ್ದರೂ ಕಿರಿಕಿರಿ ತಪ್ಪದು. ವಿದ್ಯಾರ್ಥಿಗಳು ತಮ್ಮ ಫಯತ್ನಬಲದ ಸಾರ್ಥಕ್ಯ ಪಡೆದಾರು.
ಮಕರ (Makara)
ಆಗಾಗ ಅತಿಥಿಗಳ ಆಗಮನ ಸಮಾಧಾನ ತಂದರೂ ಖರ್ಚುವೆಚ್ಚಗಳಿಗೆ ಕಾರಣವಾಗಲಿದೆ. ನ್ಯಾಯಾಲಯದ ಕೆಲಸಕಾರ್ಯಗಳು ಅಡೆತಡೆಗಳಿಂದಲೆ ಯಶಸ್ಸನ್ನು ತರಲಿವೆ. ಮನೆಯಲ್ಲಿ ಶುಭಕಾರ್ಯಚಿಂತನೆ ಕಾರ್ಯಗತವಾಗಲಿದೆ.
ಕುಂಭರಾಶಿ (Kumbha)
ಲಾಭ ಸ್ಥಾನದ ಕುಜ ಸದ್ಯದಲ್ಲೇ ಅಭಿವೃದ್ಧಿಗೆ ಕಾರಣನಾಗಲಿದ್ದಾನೆ. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಹೆಚ್ಚಿಸಿದ್ದಲ್ಲಿ ಯಶಸ್ಸನ್ನು ಪಡೆದಾರು. ಹಿರಿಯರು ಕಿರಿಯರ ಬಗ್ಗೆ ವಾದ, ವಿವಾದವಾಗದಂತೆ ಜಾಗರೂಕರಾಗಿರಿ.
ಮೀನರಾಶಿ (Meena)
ನವದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಆರ್ಥಿಕವಾಗಿ ಬರಬೇಕಾದ ಸಾಲ ಮರುಪಾವತಿಯಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆಯಬಹುದು. ಗೃಹ ನಿರ್ಮಾಣಕ್ಕೆ ಇದು ಸಕಾಲ. ನಿಶ್ಚಿಂತೆಯಿಂದಿರಿ. ಮನಸ್ಸು ಮಾಡಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
