fbpx
ಮನೋರಂಜನೆ

ಸಿಂಪಲ್ ಸ್ಟಾರ್ ‘ರಕ್ಷಿತ್ ಶೆಟ್ಟಿ’ಯವರಿಗೆ ಕನ್ನಡ ಚಿತ್ರರಂಗದ ಈ ಪದ್ಧತಿ ಇಷ್ಟವಿಲ್ಲವಂತೆ..! ಯಾವುದು.?

ಸಿಂಪಲ್ ಸ್ಟಾರ್ ‘ರಕ್ಷಿತ್ ಶೆಟ್ಟಿ’ಯವರಿಗೆ ಕನ್ನಡ ಚಿತ್ರರಂಗದ ಈ ವಿಷಯ ಇಷ್ಟವಿಲ್ಲವಂತೆ..! ಯಾವುದು?

 

 

ತಮ್ಮ ಚಿತ್ರಗಳ ಮೂಲಕ ಯುವ ಜನರ ಮನಸ್ಸು ಗೆದ್ದಿರುವ ಕನ್ನಡಚಿತ್ರ ರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರಿಗೆ ಸ್ಯಾಂಡಲ್ ವುಡ್ ನ ಈ ಪದ್ಧತಿ ಇಷ್ಟವಿಲ್ಲವಂತೆ. ಅಷ್ಟಕ್ಕೂ ಆ ಪದ್ಧತಿ ಯಾವುದು? ಮುಂದೆ ಓದಿ..

 

 

ಅಕುಲ್ ಬಾಲಾಜಿ ನಿರೂಪಕನಾಗಿ ನಡೆಸಿಕೊಡುವ ಕಲರ್ಸ್ ಸೂಪರ್ ವಾಹಿನಿಯ ‘ಸೂಪರ್ ಟಾಕ್ ಟೈಮ್’ ಅತಿ ಹೆಚ್ಚು ವಿವಾದಗಳನ್ನು ಉಂಟು ಮಾಡುವ ಈ ಕಾರ್ಯಕ್ರಮ ವಾಗಿಬಿಟ್ಟಿದೆ ಒಂದಲ್ಲ ಒಂದು ವಿವಾದದಲ್ಲಿ ಬಹಳ ಪ್ರಚಲಿತವಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಈ ವಾರ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ದಸರಾ ವಿಶೇಷವಾಗಿ ಆಗಮಿಸಿದ್ದರು.

 

 

ಸ್ವಲ್ಪ ಮೋಜು ಮಸ್ತಿ ಹರಟೆಗಳ ನಂತರ ಅಕುಲ್ ಬಾಲಾಜಿ ರ್ಯಾಫೈಡ್ ಫೇರ್ ರೌಂಡ್ ಅನ್ನು ಶುರು ಮಾಡಿದರು. ವಿವಾದಗಳಿಗೂ ರಕ್ಷಿತ್ ಶೆಟ್ಟಿಯವರಿಗೂ ಬಹಳ ದೂರ, ಹೀಗಿರುವಾಗ ಎಲ್ಲರು ಕಾಯುತ್ತಿದ್ದ ಪ್ರಶ್ನೆಗಳಿಗೆ ಬಹಳ ನಾಜೂಕಾಗಿಯೇ ಉತ್ತರವನ್ನು ರಕ್ಷಿತ್ ಕೊಟ್ಟರು.

 

 

ರ್ಯಾಪಿಡ್ ಫೈರ್ ಸುತ್ತಿನಲ್ಲಿ ನಿರೂಪಕ ಅಕುಲ್ ರಕ್ಷಿತ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಯಾವ ವಿಷಯ ನಿಮಗೆ ಇಷ್ಟವಾಗೋದಿಲ್ಲ ಎಂದು ಪ್ರಶ್ನೆ ಕೇಳುತ್ತಾರೆ ಆಗ “ನಮ್ಮ ಕನ್ನಡ ಚಿತ್ರಗಳಿಗೆ ಕೆಲಸ ಮಾಡುವ ಲೈಟ್ ಮ್ಯಾನ್ ಗಳಿಗೆ ಆರ್ಟ್ ಆಫೀಸರ್ ಗಳಿಗೆ ದಿನವೊಂದಕ್ಕೆ 750 ರೂಪಾಯಿ ಬಾಟಾ ಕೊಡೋದಕ್ಕೂ ಹಿಂದೆ ಮುಂದೆ ನೋಡಲಾಗುತ್ತದೆ,,ಈ ಪದ್ಧತಿ ನನಗೆ ಇಷ್ಟವಿಲ್ಲ,, ಕೋಟಿಗಟ್ಟಲೆ ಖರ್ಚು ಮಾಡಿ ಮಾಡುವ ಸಿನಿಮಾಗಳಲ್ಲಿ ಕೆಲಸ ಮಾಡುವ ತೆರೆಯ ಹಿಂದಿನ ಕಲಾವಿದರಿಗೆ ಸ್ವಲ್ಪ ಜಾಸ್ತಿ ಹಣ ನೀಡಬೇಕು ” ಎಂದು ಹೇಳಿದ್ದಾರೆ.

 

 

ಅಲ್ಲದೆ ಕಿರಿಕ್ ಪಾರ್ಟಿ ಚಿತ್ರ ಹಿಟ್ ಆದಾಗ ಪ್ರತಿಯೊಬ್ಬ ಲೈಟ್ ಆಫೀಸರ್ಸ್ ಹಾಗು ಆರ್ಟ್ ಆಫೀಸರ್ ಗಳನ್ನು ಕರೆದು ಅವರಿಗೆ ಶೂಟಿಂಗ್ ಟೈಮ್ ನಲ್ಲಿ ಎಷ್ಟು ಹಣ ಕೊಡಲಾಗಿತ್ತೋ ಅಷ್ಟೇ ಹಣವನ್ನೇ ಮತ್ತೆ ಕೊಟ್ಟಿದ್ದೆವು..ಎಂದು ರಕ್ಷಿತ್ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top