ಇಂದಿನ ದಿನಗಳಲ್ಲಿ ಡಯಾಬಿಟೀಸ್ ಅಥವಾ ಮಧುಮೇಹ ತೊಂದರೆಯಿಂದ ಬಳಲುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ. ಇದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗೆ ಬೇಕಾದರೂ ಈ ತೊಂದರೆ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಶಗಳಿಂದ ಉಂಟಾಗುವ ಈ ಕಾಯಿಲೆಯು ವಂಶಪಾರಂಪರ್ಯವಾಗಿಯೂ ಬರಬಹುದು.
ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ಸಾಮಾನ್ಯವಾಗಿ ಮಧುಮೇಹ ದಿಂದ ಬಳಲುತ್ತಿರುವವರು ಮೆಡಿಸಿನ್ ಮೂಲಕ ಕಂಟ್ರೋಲ್ ಮಾಡಿಕೊಳ್ಳುತ್ತಾರೆ ಕಾರಣ ಮಧುಮೇಹ ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗುವುದಿಲ್ಲ. ದುಡ್ಡು ಇದ್ದವರಿಗೆ ಸರಳವಾದ ಮಾರ್ಗ ಏನೆಂದರೆ ಮೆಡಿಸಿನ್ ಮೂಲಕ ಕಂಟ್ರೋಲ್ ಮಾಡುವುದು, ದುಡ್ಡು ಎಲ್ಲದವರಿಗೆ ಇಲ್ಲಿದೆ ಒಂದು ಸರಳ ಉಪಾಯ.
ಮೊದಲು ಈ ಕಾಯಿಲೆಯ ಪ್ರಮುಖ ಲಕ್ಷಣಗಳೆನೆಂದು ತಿಳಿಯೋಣ:
- ಪದೇ ಪದೇ ಮೂತ್ರವಿಸರ್ಜಿಸುವುದು,
- ತೀವ್ರವಾಗಿ ಬಾಯಾರಿಕೆ ಹಾಗು ಹಸಿವಾಗುವುದು,
- ತೂಕ ಹೆಚ್ಚುವದು ಅಥವಾ ಅಸಾಮಾನ್ಯ ತೂಕ ಇಳಿಕೆ,
- ಆಯಾಸ,
- ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ ಮುಂತಾದವುಗಳು.
ಮೆಂತ್ಯೆ
ಮೆಂತ್ಯೆಯನ್ನು ನೆನೆಸಿ ಮೊಳಕೆ ಕಟ್ಟಿ ದಿನಕ್ಕೆ ಒಂದು ಚಮಚ ಜಗಿದು ತಿನ್ನಿ ಹೀಗೆ ಮಾಡುತ್ತಾ ಬಂದರೆ ಸಕ್ಕರೆ ಖಾಯಿಲೆ ನಿಯಂತ್ರಣವಾಗುತ್ತದೆ .
ಚಕ್ಕೆ ಅಥವಾ ದಾಲ್ಚಿನ್ನಿ
ಒಂದು ಲೋಟ ನೀರನ್ನು ಚೆನ್ನಾಗಿ ಕಾಯಿಸಿ ಒಂದು ಸಣ್ಣ ಚಕ್ಕೆ ಸೇರಿಸಿ ಮತ್ತೆ ಕಾಯಿಸಿ ದಿನಕ್ಕೆ ಒಂದು ಲೋಟ ನೀರನ್ನು ಕುಡಿಯುತ್ತಾ ಸೇವಿಸಿ ಮೂರು ನಾಲ್ಕು ದಿನದಲ್ಲಿ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ .
ಕರಿ ಬೇವು
ಒಂದು ಹಿಡಿ ಕರಿ ಬೇವನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಬೇಯಿಸಿ , ನಂತರ ಒಂದು ಚಮಚ ಜೀರಿಗೆಯನ್ನು ಸೇರಿಸಿ ಕುಡಿಯುತ್ತಾ ಬನ್ನಿ ಹೀಗೆ ಮಾಡಿದರೆ ಸಹ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ .
ಮಾವಿನ ಎಲೆ
ಮೊದಲ, 10 ರಿಂದ 15 ಕೋಮಲವಾದ ಮಾವಿನ ಎಲೆಗಳನ್ನು ತೆಗೆದುಕೊಳ್ಳಿ ನಂತರ ಎಲೆಗಳನ್ನು ಚೆನ್ನಾಗಿ ಕುದಿಸಿರಿ ರಾತ್ರಿ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ನೀರಿನ್ನು ಕುಡಿಯಿರಿ. ಉತ್ತಮ ಫಲಿತಾಂಶಗಳಿಗಾಗಿ ನೀವು ಎರಡು ಅಥವಾ ಮೂರು ತಿಂಗಳ ಕಾಲ ಈ ವಿಧಾನವನ್ನು ಬಳಸಬೇಕು.
ಜೀರಿಗೆ
ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಜೀರಿಗೆ ಸಹಾಯ ಮಾಡುತ್ತದೆ, ಇದರಿಂದಾಗಿ ನಿಮ್ಮ ರಕ್ತದ ಗ್ಲುಕೋಸ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೆರವಾಗುತ್ತದೆ.
ಹೆಚ್ಚಿನ ಸಂದರ್ಭಗಳಲ್ಲಿ, ಮಧುಮೇಹ ಹೊಂದಿರುವ ಜನರು ಔಷಧಿಗಳೊಂದಿಗೆ ಜೀರಿಗೆ ಬೀಜಗಳನ್ನು ಚಿಕಿತ್ಸೆಯಲ್ಲಿ ಬಳಸಿದರೆ ಒಳ್ಳೆಯದು .
2 ಗ್ರಾಂ ಜೀರಿಗೆ ದಿನ ಸೇವಿಸುವುದರಿಂದ ಗ್ಲುಕೋಸ್, ರಕ್ತದೊತ್ತಡ ಕಡಿಮೆ ಆಗುತ್ತದೆ ಎಂದು 2010 ರ ಅಧ್ಯಯನವು ಬಹಿರಂಗಪಡಿಸಿದೆ.
ಜೀರಿಗೆಯನ್ನು ಸೇವಿಸುವುದು ಹೇಗೆ:
ಜೀರಿಗೆ ಪುಡಿಯನ್ನು ಆಹಾರದಲ್ಲಿ ಸೇರಿಸಿ ತಿನ್ನಬಹುದು. ಇಲ್ಲವಾದಲ್ಲಿ ನಿಮ್ಮ ಊಟದ 30 ನಿಮಿಷಗಳ ನಂತರ ಒಂದು ಲೋಟ ಜೀರಿಗೆ ನೀರನ್ನು ಸೇವಿಸಿ ಇದು ನಿಮ್ಮ ರಕ್ತದ ಗ್ಲುಕೋಸ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ .
ನೀವು ಈಗಾಗಲೇ ಮಧುಮೇಹಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಜೀರಿಗೆ ಬೀಜಗಳ ಸೇವನೆಯ ಬಗ್ಗೆ ನೀವು ಸ್ವಲ್ಪ ಹುಷಾರಾಗಿರುವುದು ಉತ್ತಮ ಏಕೆಂದರೆ ಜೀರಿಗೆ ಬೀಜಗಳ ಅತಿಯಾದ ಸೇವನೆಯು ನಿಮ್ಮ ರಕ್ತದ ಗ್ಲುಕೋಸ್ ಅನ್ನು ತುಂಬಾ ಕಡಿಮೆ ಮಾಡಬಹುದು, ಇದು ವೈದ್ಯಕೀಯ ತುರ್ತುಸ್ಥಿತಿಗೆ ಕಾರಣವಾಗಬಹುದು .
ದಿನವೂ ಬೆಳಗ್ಗೆ ಕಾಲು ಚಮಚ ಜೀರಿಗೆ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಮಧುಮೇಹ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ .
ಬೆಂಡೆಕಾಯಿ ನೀರು
ಬೇಕಾಗಿರುವ ಸಾಮಾಗ್ರಿಗಳು :
ಬೆಂಡೆಕಾಯಿ -100 ಗ್ರಾಂ
ನೀರು – ಒಂದು ಲೋಟ
ತಯಾರಿಸುವ ವಿಧಾನ :
ರಾತ್ರಿ ನೂರು ಗ್ರಾಂ ಬೆಂಡೆಕಾಯಿಯನ್ನು ಕತ್ತರಿಸಿ ಒಂದು ಬಟ್ಟಲಲ್ಲಿ ಹಾಕಿ ,
ನಂತರ ಒಂದು ಲೋಟ ಬಿಸಿ ನೀರನ್ನು ಬೆರೆಸಿ ನೆನೆಸಿಡಿ .
ಬೆಳಗ್ಗೆ ಈ ಮಿಶ್ರಣವನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು
ವಾರಕ್ಕೆ ಮೂರು ಬಾರಿ ಈ ಕ್ರಿಯೆಯನ್ನು ಮುಂದುವರಿಸಿದರೆ ಸಕ್ಕರೆ ಖಾಯಿಲೆ ದೂರವಾಗುತ್ತದೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
