ರಸ್ತೆಯ ಗುಂಡಿಗೆ ಬಿದ್ದು ಮಗು ಸಾವನ್ನಪ್ಪಿದ್ದಕ್ಕೆ ಮಗುವಿನ ತಂದೆ ಮೇಲೆಯೇ ಕೇಸ್..!
ತನ್ನ 18 ತಿಂಗಳ ಮಗುವನ್ನು ಕಳೆದುಕೊಂಡ ತಂದೆಯ ವಿರುದ್ಧ ಮಣಿಪಾಲ್ ಪೊಲೀಸರು ಕೇಸ್ ಬುಕ್ ಮಾಡಲಾಗಿದೆ…ತನ್ನ ಮಗುವನ್ನು ಕಳೆದುಕೊಂಡ ದುಃಖದಲ್ಲಿರುವ ತಂದೆ ತಾಯಿಗಳು ಅವರ ವಿರುದ್ಧ ಕೇಸ್ ಹಾಕುವ ಮೂಲಕ ಗಾಯದ ಮೇಲೆ ಬರಿಯ ಎಳೆದಿದ್ದಾರೆ.. ಮುಂದೆ ಓದಿ.
ಉಮೇಶ್ ಪೂಜಾರಿಯವರು ಅಕ್ಟೋಬರ್ 02ನೇ ತಾರೀಕಿನಂದು ಮಣಿಪಾಲ್ನಿಂದ ಹಿರಿಯಾಡ್ಕಕ್ಕೆ ಹೆಂಡತಿ ಮತ್ತು ಮಗುವೊಂದಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ತಮಗೆ ಅರಿವಾಗದ ರೀತಿಯಲ್ಲಿ ರಸ್ತೆಯಲ್ಲಿನ ಗುಂಡಿಗೆ ಬೈಕ್ ಇಳಿದಿದೆ ಬೈಕ್ ಗುಂಡಿಗೆ ಇಳಿದ ಪರಿಣಾಮ ತಾಯಿ ಪ್ರಮೋದ ಉಮೇಶ್ ತನ್ನ ಸಮತೋಲನವನ್ನು ಕಳೆದುಕೊಂಡು ಕೆಳೆಗೆ ಬಿದ್ದುವು ಗಾಯಗೊಂಡಿದ್ದಾರೆ. ಒಂದು ವರ್ಷ ಎಂಟು ತಿಂಗಳ ಪುತ್ರ ಚಿರಾಗ್ ಗುಂಡಿಗೆ ಬಿದ್ದು ತೀವ್ರ ಗಾಯಗೊಂಡ ಕಾರಣ ಸ್ಪ್ಲಾದಲ್ಲೇ ಸಾವನ್ನಪ್ಪಿತ್ತು.
ಘಟನೆ ನಡೆದ ಒಂದು ವಾರದ ಬಳಿಕ ವಿಪರೀತ ವೇಗ ಮತ್ತು ಅಜಾಗರೂಕತೆ, ನಿರ್ಲಕ್ಷ್ಯದಿಂದ ವಾಹನ ಚಾಲನೆ ಸೆಕ್ಷನ್ಗಳ ಅಡಿಯಲ್ಲಿ ಮಗುವಿನ ತಂದೆಯ ವಿರುದ್ಧವೇ
ಮಣಿಪಾಲ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. “ನಾವು ಬೈಕಿನಲ್ಲಿ ತುಂಬಾ ನಿಧಾನವಾಗಿ ಹೋಗುತ್ತಿದ್ದೆವು ರಸ್ತೆಯಲ್ಲಿ ಜಾಸ್ತಿ ಗುಂಡಿಗಳಿರುವುದರಿಂದ ನನ್ನ ಕೈ ಮೂಳೆ ಮುರಿದಿದೆ. ಮಗು ತೀವ್ರವಾಗಿ ಗಾಯಗೊಂಡಿದ್ದರಿಂದ ಸಾವನ್ನಪ್ಪಿದೆ. ನನ್ನ ಮಗುವನ್ನು ನಾನೇ ಸಾಯಿಸ್ತೀನ..?” ಎಂದು ಮಗುವಿನ ತಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
