fbpx
ಮಾಹಿತಿ

ಕೆರೆ ನೀರಿನ ಪ್ರಭಾವಕ್ಕೆ ಶಿಲೆಗಳಾದ ಈ ಪ್ರಾಣಿ ಪಕ್ಷಿ ಬಗ್ಗೆ ನೀವು ತಿಳ್ಕೊಳ್ಳೆಬೇಕು

ಕೆರೆಯ ನೀರಿನಿಂದ ಶಿಲೆಗಳಂತೆ ಆದ ಪ್ರಾಣಿ ಪಕ್ಷಿಗಳು!!

ನಾವು ಪುರಾಣಗಳಲ್ಲಿ ದೇವತೆಗಳು ಶಾಪ ಕೊಟ್ಟು ರಾಕ್ಷಸರು ಕಲ್ಲಂತೆ ಆದ್ರೂ ಅಂತ ಕೇಳಿರ್ತೀರಿ ,ಆದ್ರೆ ಒಂದು ಕೆರೆಯ ನೀರಿನಿಂದ ಪ್ರಾಣಿ ಪಕ್ಷಿಗಳು ಕಲ್ಲಾಗಿ ಹೋಗಿರುವುದನ್ನು ಕೇಳಿದ್ದೀರಾ ?ಇಲ್ಲ ಅಲ್ವಾ ಆದ್ರೆ ಅದು ನಿಜ

ಒಂದು ಜಾಗದ ಕೆರೆಯೊಂದರಲ್ಲಿ ವಿಜ್ಞಾನ ಲೋಕಕ್ಕೆ ಸವಾಲೆಸೆಯುವಂತಹ ಒಂದು ವಿಸ್ಮಯ ನಡೆದಿದೆ.
ಆ ವಿಸ್ಮಯ ನಡೆದಿರೋ ಜಾಗ ಇರುವುದು ಉತ್ತರ ತಾನ್ಜೇನಿಯಾದ ಲೇಕ್ ನಾಟ್ರನ್ ಕೆರೆಯಲ್ಲಿ.

 

 

ನಿಕ್ ಬ್ರಾಂಡ್ ಎನ್ನುವ ಛಾಯಾಗ್ರಾಹಕ ಫೋಟೋಗ್ರಫಿ ಮಾಡಲೆಂದು ಈ ಲೇಕ್ ನಾಟ್ರನ್ ಕೆರೆಯ ಬಳಿ ಹೋದಾಗ
ಕೆರೆಯಲ್ಲಿ ಶಿಲೆಗಳಂತೆ ನಿಂತಿದ್ದ ಬಾವಲಿಗಳು ಹಾಗೂ ಕೆಲ ಪಕ್ಷಿಗಳನ್ನು ನೋಡಿ ಆಶ್ಚರ್ಯ ಚಕಿತನಾದ.
ಆಶ್ಚರ್ಯ ಮತ್ತು ಕುತೂಹಲದಿಂದ ಅದಕ್ಕೆ ಸರಿಯಾದ ಕಾರಣ ತಿಳಿಯಲು ಸಂಶೋಧನೆಗೆ ಮುಂದಾಗುತ್ತಾನೆ .
ಹತ್ತು ದಿನಗಳ ಕಾಲ ನಡೆಸಿದ ಸಂಶೋಧನೆಯಲ್ಲಿ ನಿಕ್ ಬ್ರಾಂಡ್ಗೆ ಗೊತ್ತಾಗಿದ್ದು ಆ ಕೆರೆಯ ನೀರಿನಲ್ಲಿ ರಾಸಾಯನಿಕ ಅಂಶಗಳು ಬೆರೆತು ಹೋಗಿವೆ ಮತ್ತು ನೀರು ಮುಂದೆ ಸಾಗೋದಿಲ್ಲ ಎಂದು .
ಆದರೆ ನಿಕ್ ಬ್ರಾಂಡ್ ಎಷ್ಟು ಪ್ರಯತ್ನ ಮಾಡಿದರು ಆದರೆ ನಿಜವಾದ ಕಾರಣ ಕಂಡು ಹಿಡಿಯಲು ಆಗಲಿಲ್ಲ .

 

 

ಆ ಊರಿನ ಜನರು ಇದನ್ನು ಭೂತ, ಪಿಶಾಚಿಗಳ ಕಾಟ ಎಂದು ನಂಬಿ ಆ ಕೆರೆಯ ಹತ್ತಿರ ಹೋಗುವುದನ್ನೇ ಬಿಟ್ಟುಬಿಟ್ಟಿದರು.

ಆದ್ರೆ ವಿಜ್ಞಾನಿಗಳ ಸಂಶೋಧನೆಯ ಮೂಲಕ ಅದಕ್ಕೆ ಮೂಲ ಕಾರಣ ಗೊತ್ತಾಗಿದೆ ,ಆ ಕಾರಣ ಏನು ಅಂದ್ರೆ

ಆ ಕೆರೆಯಲ್ಲಿ ಅತಿಯಾದ ಸೋಡಾ ಹಾಗೂ ಉಪ್ಪಿನ ಅಂಶವಿದೆಯಂತೆ.ಹಾಗಾಗಿ ಈ ಕೆರೆಯ ನೀರು ರಾಸಾಯನಿಕ ಅಂಶಗಳನ್ನು ಒಳಗೊಂಡಿದೆ ಜೊತೆಗೆ ವಿಷಯುಕ್ತ ಖನಿಜಗಳು ಇದರಲ್ಲಿ ಬೆರೆತು ಹೋಗಿವೆ.
ನೀರನ್ನು ಕುಡಿಯಲು ಈ ಕೆರೆಯ ಬಳಿ ಬಂದ ಪ್ರಾಣಿ ಹಾಗೂ ಪಕ್ಷಿಗಳು ಈ ಕೆರೆಯ ನೀರನ್ನು ಕುಡಿದು ದೇಹ ಬಡಕಲಾಗಿ ಅವು ಅಸ್ಥಿಪಂಜರದಂತಾಗಿ ಸಾವನ್ನಪ್ಪಿವೆ ಮತ್ತು ಬಿಸಿಲಿಗೆ ಒಣಗಿ ಶಿಲೆಯಂತಾಗಿವೆ.

ಈಗಲೂ ಲೇಕ್ ನಾಟ್ರನ್ ಕೆರೆಯಲ್ಲಿ ಇದೇ ರೀತಿಯ ಶಿಲಾ ರೂಪದ ಹಕ್ಕಿಗಳನ್ನು ನಾವು ನೋಡಬಹುದು .
ನಿಜವಾದ ಕಾರಣ ತಿಳಿದ ಆ ಊರಿನ ಜನ ಭೂತ, ಪಿಶಾಚಿಗಳ ಮೇಲೆ ಇದ್ದ ಭಯ ಬಿಟ್ಟು ಧೈರ್ಯದಿಂದ ಕೆರೆಯ ಸುತ್ತಮುತ್ತ ಓಡಾಡುತ್ತಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top