ಹೊಸ ವರ್ಷಕ್ಕೆ ಯೋಗರಾಜ್ ಭಟ್ರು ಹೊಸ ಸಾಂಗ್ ಬರ್ದವ್ರೆ ಕೇಳಿ ಮಜಾ ಮಾಡಿ.
‘ಯಬಡ-ತಬಡ- ಗಬಡಾ, ಖಾಲಿ ಪಾತ್ರೆ ಕಬ್ಬಿಣ, ಪೇಪರ್ ಬುಡುಬುಡಕೆ’ ಎಂಬ ಪದಗಳಿಂದಲೇ ಹಾಡುಗಳನ್ನು ರಚಿಸಿ ಕೇಳುಗರಿಗೆ ಮಜಾ ಕೊಡುವ ಯೋಗರಾಜ್ ಭಟ್ ಸಮಾಜದಲ್ಲಿ ಏನಾದರೊಂದು ಮಹತ್ವದ ಸಂಗತಿ ನಡೆದರೆ ಅದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಹಾಸ್ಯಭರಿತ ಧಾಟಿಯಲ್ಲಿ ತಮಗನಿಸಿದ್ದನ್ನು ಹಾಡಿನ ಮೂಲಕ ಹೇಳುವ ಯೋಗರಾಜ್ ಭಟ್ರು ಈಗ ಇದೇ ರೀತಿಯ ಮತ್ತೊಂದು ಹಾಡನ್ನು ಮಾಡಿದ್ದಾರೆ. ಈ ಹಿಂದೆ 2014ರ ಲೋಕ ಸಭಾ ಚುನಾವಣಾ ವೇಳೆ, ಪಿಯುಸಿ ಎಕ್ಸಾಮ್ ಪೇಪರ್ ಲೀಕ್ ಆಗಿದ್ದಾಗ ಮತ್ತು ಜಿ.ಎಸ್.ಟಿ ಬಂದಾಗ ಅವುಗಳನ್ನು ಅಣಕಿಸಿದ್ದ ಭಟ್ರ ಕಣ್ಣು ಈಗ ನ್ಯೂ ಇಯರ್ ಮೇಲೆ ಬಿದ್ದಿದೆ.
‘2018 ಬಂತು ಸ್ವಾಮಿ, ಇನ್ಮೇಲೆ ಎಲ್ಲಾ ಹೊಸಾದು!’ ಅಂತ ಸ್ಟಾರ್ಟ್ ಆಗೋ ಈ ಸಾಂಗ್ ಕೇಳಲು ಸಕತ್ ಮಜವಾಗಿದೆ. ಇರಲಿ, ಹೋಗಲಿ, ಬಿಡಲಿ, ಆಗಲಿ ಅಂತ ಸಕತ್ ಕ್ಯಾಚಿ ಪದಗಳು ಹಾಡಿನಲ್ಲಿ ಬರೆದಿರುವ ಭಟ್ರರು ಸ್ವತಃ ತಾವೇ ಹಾಡಿದ್ದಾರೆ. ಝೀ ಕನ್ನಡ ಆಹಿಣಿಯಲ್ಲಿ ಪ್ರಸವಾಗುತ್ತಿರುವ ಕಾಮಿಡಿ ಕಿಲಾಡಿಗಳು ಸೀಸನ್ 2 ರಲ್ಲಿ ಭಟ್ಟರು ತೀರ್ಪುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದು ಅದರ ಪ್ರಮೋಷನ್ ಗಾಗಿ ಈ ಹಾಡನ್ನು ತಯಾರು ಮಾಡಲಾಗಿದೆ.
ಭಟ್ರ ಈ ಹೊಸ ಹಾಡನ್ನು ಇಲ್ಲಿ ನೋಡಿ.
ತಮಾಷೆ ಜೊತೆಗೆ ಸಮಾಜಕ್ಕೆ ಸಂದೇಶ ಹೇಳುವ ಭಟ್ರು ಈ ಹಾಡಿನಲ್ಲೂ ಮತ್ತೆ ಎತ್ತಿ ಹಿಡಿದಿದ್ದಾರೆ. ಮನುಷ್ಯನ ಭಾವನೆಗಳನ್ನು ಹೊಗಳಿ, ಬೈದು, ಬುದ್ದಿಹೇಳಿ, ನಗಿಸಿ ಮಾಡಿರುವ ಈ ಅದ್ಭುತವಾದ ಹಾಡಿಗೆ ಜಗ್ಗೇಶ್, ರಕ್ಷಿತಾ , ಆನಂದ್ ಮೆಚ್ಚಿಕೊಂಡಿದ್ದು ಝೀ ಕನ್ನಡ ಅಧಿಕೃತ ಫೇಸ್ಬುಕ್ ಪೇಜ್’ನಲ್ಲಿ ಪೋಸ್ಟ್ ಮಾಡಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
