ನಿವೇದಿತಾ ಆಡಿದ ಈ ಒಂದು ಮಾತಿಂದ ಕೋಪಗೊಂಡು ಆಕೆಯ ಜೊತೆ ಮಾತುಬಿಟ್ಟ ಮನೆಮಂದಿ..!
ಬಿಗ್ ಬಾಸ್ ಶುರುವಾದಾಗಿನಿಂದಲೂ ನಿವೇದಿತಾ ಏನೇ ಹೇಳಿದರು ತಲೆಕೆಡಿಸಿಕೊಳ್ಳದ ಬಿಗ್ ಬಾಸ್ ಮನೆಯ ಸದಸ್ಯರು ಇತ್ತೀಚಿನ ದಿನಗಳಲ್ಲಿ ನಿವೇದಿತಾ ವಿಷಯದಲ್ಲಿ ಸೀರಿಯಸ್ ಆಗುತ್ತಿದ್ದಾರೆ..ಚಿಕ್ಕ ಹುಡುಗಿ, ವೀಕ್ ಕಂಟೆಸ್ಟಂಟ್ ಎಂದು ಕೊಂಡಿದ್ದ ಸ್ಪರ್ಧಿಗಳು ನಿವೇದಿತಾ ಘಟಾನುಘಟಿ ಜನರನ್ನೇ ಹಿಂದಿಕ್ಕಿ 12 ವಾರಗಳವರೆಗೆ ಉಳಿದುಕೊಂಡಿರುವುದರ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ.
ನೆನ್ನೆಯ ಸಂಚಿಕೆಯಲ್ಲಿ ಈ ವಾರ ನಾನು ಮನೆಯಿಂದ ಹೊರ ಹೋಗಲಿದ್ದೇನೆ ಎಂದು ಕಾರ್ತಿಕ್ ಹೇಳಿದರು, ಇದಕ್ಕೆ ಸಮೀರಾಚಾರ್ಯ ನೀವು ಹೋಗಲ್ಲ ಎಂದು ಹೇಳಿದರು. ಇಬ್ಬರ ನಡುವೆ ಈ ವಿಷಯದ ಬಗ್ಗೆ ಚರ್ಚೆ ನಡೆದು ಬೆಟ್ಟಿಂಗ್ ಕಟ್ಟಿದ್ದಾರೆ. ಇವರಿಬ್ಬರ ಮಧ್ಯೆ ಮಾತನಾಡಿದ ನಿವೇದಿತಾ “ಯಾರು ಏನಾದ್ರೂ ಆಗಲಿ, ನಾನು ಮಾತ್ರ ಟಾಪ್ 5 ರಲ್ಲಿ ಇದ್ರೆ ಸಾಕಪ್ಪ” ಒಬ್ಬಳಾಗಿರುತ್ತೇನೆ ಎಂದು ಹೇಳಿದಳು.ಆಗ ಕೆಲವು ಸದಸ್ಯರು ಇದು ಸ್ವಾರ್ಥ, ಕೆಟ್ಟ ಬುದ್ದಿ ಎಂದು ನಿವೇದಿತಾಳನ್ನು ನಿಂದಿಸಿದರು. ಆಗ “ನಾನು ತಮಾಷೆಗೆ ಹೇಳಿದ್ದು” ಎಂದು ನಿವೇದಿತಾ ಹೇಳಿದರಾದರೂ, ಯಾರೂ ಕೇಳಲಿಲ್ಲ.
ಸಹ ಸ್ಪರ್ಧಿಗಳ ವಾಗ್ದಾಳಿಗೆ ತತ್ತರಿಸಿದ ನಿವೇದಿತಾ ಕಣ್ಣೀರು ಹಾಕುತ್ತ ”ಐ ಹೇಟ್ ಪೀಪಲ್ ನನ್ನನ್ನು ಯಾರೂ ಮಾತನಾಡಿಸಬೇಡಿ ಎಂದು ಹೇಳಿದಳು. ಇದರಿಂದ ಕೋಪಗೊಂಡ ಸದಸ್ಯರು ನಿವೇದಿತಾ ಅವರೊಂದಿಗೆ ಸದಸ್ಯರು ಮಾತನಾಡುವುದನ್ನು ನಿಲ್ಲಿಸಿದರು..ಜಪ್ಪಯ್ಯ ಅಂದ್ರು ಕೂಡ ಯಾರು ಕೂಡ ನಿವೇದಿತಾ ಜೊತೆ ಮಾತನಾಡಲಿಲ್ಲ ಇದರಿಂದ ಬೇಸರಗೊಂಡ ನಿವೇದಿತಾ ಮತ್ತೆ ಕಣ್ಣೀರಿಟ್ಟಿದ್ದಾಳೆ.. ಕೊನೆಯಲ್ಲಿ ಸಮೀರಾಚಾರ್ಯ ಹಾಗೂ ರಿಯಾಜ್ ನಿವೇದಿತಾರನ್ನು ಮಾತನಾಡಿಸಿ ಸಮಾಧಾನಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
