ಚಂದನ್ ಶೆಟ್ಟಿ ಮತ್ತು ಅಗ್ನಿಸಾಕ್ಷಿಯ ಸನ್ನಿಧಿ ಜೊತೆಗಿನ ಮದುವೆ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು ?
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರಾಂಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್ ಬಿಗ್ಬಾಸ್ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 05 ವಿಜೇತರಾಗಿರುವ ಚಂದನ್ ಶೆಟ್ಟಿ ಈಗ ಮಾಧ್ಯಮದಲ್ಲಿ ದಿನಾಲೂ ಸುದ್ದಿಯಲ್ಲಿದ್ದಾರೆ, ಎಲ್ಲ ಚಾನೆಲ್ ಗಳು ಚಂದನ್ ಅವರ ಬೆನ್ನು ಬಿದ್ದಿವೆ ಪ್ರಶ್ನೆ ಗಳ ಮೇಲೆ ಪ್ರಶ್ನೆ ಹರಿಬಿಡುತ್ತಿವೆ.
ಬಿಗ್ ಬಾಸ್ ಮನೆಯಲ್ಲಿ ಇರುವಾಗ ಚಂದನ್-ನಿವೇದಿತಾ, ಚಂದ-ಶ್ರುತಿ ಬಗ್ಗೆ ಗಾಸಿಪ್ಗಳು ಹಬ್ಬಿದ್ದವು. ಆದರೆ ಅವರು ನನ್ನ ಸ್ನೇಹಿತೆಯರು ಎಂದು ಚಂದನ ವಿವಾದಗಳಿಗೆ ತೆರೆ ಎಳೆದಿದ್ದರು. ತಾನು ಮದುವೆ ಆಗಬೇಕಿರುವ ಹುಡುಗಿ ಹೇಗೆ ಇರಬೇಕು ಅಂತ ಚಂದನ್ ಬಿಗ್ ಮನೆಯಲ್ಲಿ ಇರುವಾಗಲೇ ಹೇಳಿಕೊಂಡಿದ್ದರು. ನಾನು ಮದುವೆ ಆಗುವ ಹುಡುಗಿ ಗೃಹಿಣಿ ಆಗಿರಬೇಕು. ನನ್ನ ಕೆಲಸಕ್ಕೆ ಬೆನ್ನಲುಬಾಗಿ ಜೊತೆಯಾಗಿರಬೇಕು, ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಚಂದನ್ ಹೇಳಿದ್ದರು.
ಈಗ ಸಾಮಾಜಿಕ ಜಾಲತಾಣ ಫೇಸ್ಬುಕ್ ಪುಟಗಳಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿಯನ್ನು ಚಂದನ್ ಮದುವೆ ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿ ಹಬ್ಬಿದ್ದು . ಈ ಸುದ್ದಿ ಈಗ ವೈರಲ್ ಆಗಿದೆ ಫೇಸ್ಬುಕ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಇದೆ ತಿಂಗಳು 11 ಕ್ಕೆ ಇವರ ನಿಶ್ಚಿತಾರ್ಥ ನಡೆಯಲಿದೆ ಅಂತೆ..
ಈ ಮದುವೆ ಗಾಳಿಸುದ್ದಿಯನ್ನು ಚಂದನ್ ತಳ್ಳಿಹಾಕಿದ್ದಾರೆ , ಇದೆಲ್ಲ ಯಾರು ಹಬ್ಬಿಸಿದರೋ ಗೊತ್ತಿಲ್ಲ , ಜೀವನದಲ್ಲಿ ಇನ್ನು ಮಾಡಬೇಕಾದ ಕೆಲಸ ತುಂಬಾ ಇದೆ ,ನನ್ನ ಕೆರಿಯರ್ ತುಂಬಾ ಮುಖ್ಯ , ಮದುವೆ ಮಾಡಿಕೊಳ್ಳುವ ಆತುರ ನನಗಿಲ್ಲ ,ಅಗ್ನಿಸಾಕ್ಷಿ ಧಾರಾವಾಹಿಯ ನಟಿ ವೈಷ್ಣವಿ ಗೌಡ ಅವರನ್ನು ನಾನು ಇಂದಿಗೂ ಭೇಟಿಯಾಗಿಲ್ಲ .
ಕೆಲವು ಟ್ವೀಟ್ ಹಾಗು ಮೆಸೇಜ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ,
ಆಕೆಯನ್ನು ಟಿವಿ ಯಲ್ಲಿ ಮೂರು ನಾಲ್ಕು ಬಾರಿಯಷ್ಟೇ ನೋಡಿದ್ದೇನೆ , ಇದೆಲ್ಲ ಗಾಳಿಸುದ್ದಿ ಈ ರೀತಿಯ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
