ಪತಂಜಲಿ ಗ್ರಾಹಕರಿಗೆ ವಿಮೆ 500 ರೂ. ಮೇಲ್ಪಟ್ಟ ಖರೀದಿಗೆ ಲಾಯಲ್ಟಿ ಕಾರ್ಡ್ ವಿತರಣೆ
ಪತಂಜಲಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಅಪಘಾತ ವಿಮೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಯೋಗ ಋಷಿ ಬಾಬಾ ರಾಮದೇವ್ ಹೇಳಿದ್ದಾರೆ. ಅವರು ಸೋಮವಾರ ಬಳ್ಳಾರಿ ನಗರದ ವಾಲ್ಮೀಕಿ ವೃತ್ತದ ಬಳಿ ಇರುವ ಪತಂಜಲಿ ಮೆಗಾ ಸ್ಟೋರ್ಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶಾದ್ಯಂತ ಗ್ರಾಹಕ ಸ್ನೇಹಿ ಸೇವೆ ವಿಸ್ತರಿಸಲು ಮುಂದಾಗಿರುವ ಪತಂಜಲಿ ಸಂಸ್ಥೆ ತನ್ನ ಎಲ್ಲ ಮೆಗಾಸ್ಟೋರ್ ಗ್ರಾಹಕರಿಗೆ ಫೆ.22ರೊಳಗೆ ಲಾಯಲ್ಟಿ (ಪರಿಹಾರ ವಿಮೆ) ಕಾರ್ಡ್ ವಿತರಿಸಲು ತೀರ್ಮಾನಿಸಿದೆ. ಈ ಸೌಲಭ್ಯದಡಿ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ ಐದು ಲಕ್ಷ ರೂ. ಹಾಗೂ ಅಂಗವೈಕಲ್ಯತೆಗೆ ಒಳಗಾಗುವವರಿಗೆ 2.5 ಲಕ್ಷ ರೂ. ಪರಿಹಾರ ಧನ ದೊರೆಯಲಿದೆ ಎಂದು ಯೋಗಗುರು ಬಾಬಾ ರಾಮದೇನ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಮೆಗಾಸ್ಟೋರಿನಿಂದಲೇ ಲಾತಲ್ಟಿ ಕಾರ್ಡ್ ಸೌಲಭ್ಯ ಪ್ರಾರಂಭಿಸಲಾಗುವುದೆಂದು ಹೇಳಿದ್ದಾರೆ. ಆರಂಭದಲ್ಲಿ ಒಂದೊಂದು ಸ್ಟೋರ್ ನಿಂದ ಸುಮಾರು ಒಂದು ಸಾವಿರ ಗ್ರಾಹಕರಿಗೆ ಕಾರ್ಡ್ ನೀಡಲಾಗುವುದು. ರಾಜ್ಯದ 11 ಮೆಗಾಸ್ಟೋರ್ ಸೇರಿ ದೇಶದ 260 ಮೇಗಾಸ್ಟೋರ್ ಗ್ರಾಹಕರಿಗೂ ಈ ಸೌಲಭ್ಯ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಶೇ.10 ರಿಯಾಯಿತಿ: ಪತಂಜಲಿ ಮೆಗಾ ಸ್ಟೋರಿನಲ್ಲಿ ಆಹಾರ ಮತ್ತು ಗಿಡಮೂಲಿಕೆಗಳ ಔಷಧ ಸಾಮಗ್ರಿ ಸೇರಿ ವಿವಿಧ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಶೇ.10 ರಿಯಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
