ಮಾಜಿ ಡಿವೈಎಸ್ಪಿ ಅನುಪಮಾ ಶಣೈ ನೇತ್ರತ್ವದಲ್ಲಿ ಹೊಸ ಪಕ್ಷ ಇಂದು ಅಸ್ತಿತ್ವಕ್ಕೆ ಬಂದಿದೆ. ಯುಗಾದಿ ಹಬ್ಬದ ದಿನವೇ ತಮ್ಮ ಹೊಸ ಪಕ್ಷದ ಲಾಂಛನ ಬಿಡುಗಡೆ ಮಾಡಿದ್ದಾರೆ.
ಇಂದು ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಅನುಪಮ ಶಣೈ, ತಮ್ಮ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಲಾಂಛನ ಬಿಡುಗಡೆ ಮಾಡಿದ್ದಾರೆ. ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿ ಹೊಸ ಪಕ್ಷ ಸ್ಥಾಪನೆ ಮಾಡಿರುವ ಅನುಪಮಾ ಶಣೈ, ಇದೇ ಮೊದಲ ಬಾರಿಗೆ ಒಬ್ಬ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ನಾಲ್ಕು ಬೆಂಡಿಕಾಯಿ ಇರುವ ಚೆಹ್ನೆಯನ್ನ ತಮ್ಮಪಕ್ಷದ ಚಿಹ್ನೆಯಾಗಿ ಬಿಡುಗಡೆ ಮಾಡಲಾಗಿದೆ. ಚುನಾವಣೆ ಚಿನ್ಹೆ ಬಿಡುಗಡೆ ಕಾರ್ಯಕ್ರಮಕ್ಕೆ ನಿರೀಕ್ಷೆಯಷ್ಟು ಜನ ಸೇರಿರಲಿಲ್ಲ.
ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷ ಹಾಗೂ ಚಿನ್ಹೆ ಅಧಿಕೃತವಾಗಿ ಉದ್ಘಾಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಹಾದೇವಪ್ಪ ಉದ್ಘಾವಿ ಸೇರಿ ಸುಮಾರು 12 ಜನ ವೇದಿಕೆಯಲ್ಲಿ ಉಪಸ್ಥಿತಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
