fbpx
ಸಿನಿಮಾ

ಜೀ ಕನ್ನಡ ವಾಹಿನಿ ವಿರುದ್ಧ ಸಿಡಿದೆದ್ದ ದರ್ಶನ ಅಭಿಮಾನಿಗಳು

ಇತ್ತೀಚಿಗೆ ಜೀ ಕನ್ನಡ ವಾಹಿನಿ ಕರ್ನಾಟಕ ಹೆಮ್ಮೆ ಪಡುವ ಕೆಲಸ ಮಾಡಿರುವವರಿಗೆ “ಹೆಮ್ಮೆಯ ಕನ್ನಡಿಗ” ಪ್ರಶಸ್ತಿ ನೀಡಿ ಗೌರವಿಸಿದರು. ಮಂಡ್ಯದ ಐದು ರೂಪಾಯಿ ಡಾಕ್ಟರ್ ಎಂದು ಹೆಸರುವಾಸಿ ಆಗಿರುವ ಡಾ.ಎಸ್.ಸಿ.ಶಂಕರೇ ಗೌಡ ರವರಿಗೆ ‘ಹೆಮ್ಮೆಯ ವೈದ್ಯ’, ನಟ ರಮೇಶ್ ಅರವಿಂದ್ ಅವರಿಗೆ ‘ಹೆಮ್ಮೆಯ ಸ್ಫೂರ್ತಿ’, ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಹೆಮ್ಮೆಯ ನಾಯಕ ನಟಿ’, ಸಂಗೀತಗಾರ ಅರ್ಜುನ್ ಜನ್ಯ ಅವರಿಗೆ ‘ಹೆಮ್ಮೆಯ ಸಂಗೀತಗಾರ’, ಕ್ರೀಡಾಪಟುಗಳಾದ ವೇದ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರಿಗೆ ‘ಹೆಮ್ಮೆಯ ಕ್ರೀಡಾಪಟು’, ರಾಜ್.ಬಿ.ಶೆಟ್ಟಿ ಅವರಿಗೆ ‘ಹೆಮ್ಮೆಯ ಹೊಸ ಪ್ರತಿಭೆ’, ವಿಶ್ವೇಶ್ವರ ಭಟ್ ಅವರಿಗೆ ‘ಹೆಮ್ಮೆಯ ಪತ್ರಕರ್ತ’ ಪ್ರಶಸ್ತಿ ನೀಡಿ ಗೌರವಿಸಿದರು.

 

 

ಇತ್ತೀಚಿಗೆ ದರ್ಶನ ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್’ನ ಅವಾರ್ಡ್ ಪಡೆದಿದ್ದರು. ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಕನ್ನಡದ ಗರಿಮೆಯನ್ನು ಎತ್ತಿ ಹಿಡಿದ ನಟ ದರ್ಶನ್ ಅವರಿಗೆ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿಯನ್ನು ಜೀ ಕನ್ನಡ ನೀಡದಿರುವ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ಅಭಿಮಾನಿಗಳು ಜೀ ಕನ್ನಡ ವಾಹಿನಿ ವಿರುದ್ಧ ಕೆಂಡ ಕಾರುತ್ತಿದ್ದಾರೆ.

 

 

ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

 

 

 

 

” ಅವಾರ್ಡ್ ಗಳಿಗೋಸ್ಕರ ಬದುಕುವರಲ್ಲ ಇವರು,ಅಭಿಮಾನಿಗಳಿಗೋಸ್ಕರ ಬದುಕುವವರು ಇವರು
ಅವಾರ್ಡ್ ಗಳಿಗೋಸ್ಕರ ಕನಸು ಕಂಡವರಲ್ಲ ಇವರು
ಅಭಿಮಾನಿಗಳು ಕೊಡುವ ಪ್ರೀತಿ ಮುಂದೆ ಯಾವ ಅವಾರ್ಡ್ ಸಮವಿಲ್ಲ
ಆರುಕೋಟಿ ಅಪ್ಪಟ ಕನ್ನಡಿಗರು ನಮ್ಮ ಮನೆ ಮಗ ಎಂದು ಬಿಗಿದಪ್ಪಿಕೊಂಡಿರುವಾಗ ಇವ ನಿಜವಾದ “ಹೆಮ್ಮೆಯ ಕನ್ನಡಿಗ” #ಡಿಬಾಸ್ ” ಎಂದು ಟ್ವಿಟ್ ಮಾಡಿದ್ದಾರೆ.

 

 

ತನು ಎಂಬ ದರ್ಶನ ಅಭಿಮಾನಿ ಜೀ ಕನ್ನಡ ವಾಹಿನಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ

 

 

ಗಜ ದರ್ಶನ ಎನ್ನುವವರು ಜೀ ಕನ್ನಡ ವಾಹಿನಿಗೆ ಧಿಕ್ಕಾರ ಕೂಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top