ಕೋಟ್ಯಧಿಪತಿ ಕಾರ್ಯಕ್ರಮ ಎಂಬ ಕಾರ್ಯಕ್ರಮ ಯಾವ ಮಟ್ಟಿಗೆ ಜನಮಾನಸದಲ್ಲಿ ಹೆಸರು ಮಾಡಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ, ಎರಡು ಸೀಸನ್ ಗಳನ್ನೂ ಯಶಸ್ವಿಯಾಗಿ ನಡೆದಿದ್ದ ಈ ಕಾರ್ಯಕ್ರಮ ಅದ್ಯಾಕೋ ಗೊತ್ತಿಲ್ಲ ಮುಂದಿನ ಸೀಸನ್’ಗಳು ಪ್ರಾರಂಭವಾಗಿರಲಿಲ್ಲ. ಆದರೀಗ ಮೂರನೇ ಸೀಸನ್ ಶುರುಮಾಡಲು ತೆರೆ ಮರೆಯಲ್ಲಿ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ ಎಮ್ ಸುದ್ದಿಗಳು ಹರಿದಾಡುತ್ತಿದೆ.
ಈ ಹಿಂದಿನ 2 ಸೀಸನ್’ಗಳನ್ನೂ ಅನ್ನು ಪುನೀತ್ ರಾಜ್ ಕುಮಾರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು ಆದರೆ ಸದ್ಯ ಪುನೀತ್ ಕಲರ್ಸ್ ನಲ್ಲಿ ಹೊಸ ಮಾಡುತ್ತಿರುವುದರಿಂದ ಈ ಭಾರಿ ಕನ್ನಡದ ಕೋಟ್ಯಾಧಿಪತಿ ಸೀಸನ್ 3ನ್ನು ನಡೆಸಿಕೊಡೋದಕ್ಕೆ ಪುನೀತ್’ನಿಂದ ಸಾಧ್ಯವಾಗೋಲ್ಲ. ಹಾಗಾಗಿ ಈ ಶೋವನ್ನು ಯಾರು ನಡೆಸಿಕೊಡುತ್ತಾರೆ ಎಂಬುದು ಕುತೂಹಲಕರ ಸಂಗತಿಯಾಗಿದೆ..
ಕೋಟ್ಯಾಧಿಪತಿಯ ಹೊಸ ಸೀಸನ್ ಕಾರ್ಯಕ್ರಮವನ್ನು ನಡೆಸಿಕೊಳ್ಳಲು ಈ ಹಿಂದೆ ಉಪೇಂದ್ರ, ಯಶ್, ರಮ್ಯಾ ಸೇರಿ ಅನೇಕ ನಟರ ಹೆಸರು ಕೇಳಿಬಂದಿತ್ತು ಇದೀಗ ಈ ಸಾಲಿಗೆ ಮಾತೊಂದು ಹೆಸರು ಸೇರ್ಪಡೆಗೊಳ್ಳುತ್ತಿದ್ದು ಚಂದನವನದ ಚಿರಸುಂದರ ನಟ ಎಂದೇ ಖ್ಯಾತಿ ಪಡೆದುಕೊಂಡಿರುವ ರಮೇಶ್ ಅರವಿಂದ್ ಅವರು ಈ ಕಾರ್ಯಕ್ರಮವನ್ನ ನಡೆಸಿಕೊಡಲಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಈಗಾಗಲೇ ಕಿರುತೆರೆಯ ಅನೇಕ ಶೋಗಳನ್ನು ನಿರೂಪಣೆ ಮಾಡಿ ಯಶಸ್ವಿಗೊಳಿಸಿರುವ ನಟ, ನಿರ್ದೇಶಕ ರಮೇಶ್ ಅವರಿಗೆ ಇದೀಗ ಕನ್ನಡ ಕೋಟ್ಯಾಧಿಪತಿ’ ಕಾರ್ಯಕ್ರಮಕ್ಕೆ ಸಾರಥ್ಯ ವಹಿಸಿಕೊಳ್ಳುವಂತೆ ಬೇಡಿಕೆ ಬಂದಿದೆ.
ಕಾರ್ಯಕ್ರಮದ ನಿರೂಪಣೆ ಮಾಡುವ ಬಗ್ಗೆ ಈಗಾಗಲೇ ಅಂತಿಮ ಹಂತದ ಮಾತುಕತೆ ನಡೆಯುತ್ತಿದ್ದು ಅಗ್ರಿಮೆಂಟ್ ಗಳಿಗೆ ರಮೇಶ್ ಇನ್ನೂ ಸಹಿ ಹಾಕಿಲ್ಲ.. ಎಲ್ಲವೂ ಫೈನಲ್ ಆದ ಮೇಲಷ್ಟೇ ಅಧಿಕೃತವಾಗಿ ಮಾಹಿತಿ ಬಹಿರಂಗ ಪಡಿಸುವ ಉದ್ದೇಶ ರಮೇಶ್ ಅವರದ್ದು. ಹಾಗಾಗಿಯೇ ಈ ವಿಷಯವನ್ನು ಗುಟ್ಟಾಗಿ ಇಟ್ಟಿದ್ದಾರೆ. ಈ ಹಿಂದೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದ ರಮೇಶ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನೂ ಕೂಡ ಅಷ್ಟೇ ಅಚ್ಚುಕಟ್ಟಾಗಿ ನಡೆಸಿಕೊಡುವ ನಿರೀಕ್ಷೆಯಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
