ದಾರಿಯಲ್ಲಿ ಹೋಗುವಾಗ ರಸ್ತೆ ಅಪಘಾತ ಕಂಡರೆ ಎಷ್ಟೋ ಜನ ದೂರ ಓಡಿ ಹೋಗುವವರು ಇರುತ್ತಾರೆ. ಆದರೆ ಮಾನವೀಯತೆ ಗುಣವಿರುವ ಕೆಲವು ಜನ ಅಪಘಾತಕ್ಕೀಡಾದವರನ್ನು ರಕ್ಷಣೆ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಗಡಿ ತಾಲೂಕಿನ ಕುದೂರು ವ್ಯಾಪ್ತಿಯ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ಅವರು ಖುದ್ದಾಗಿ ತಾವೇ ಅಂಬ್ಯುಲೆನ್ಸ್ ಕರೆಸಿ, ಆಸ್ಪತ್ರೆಗೆ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಅದೇ ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸಂಸದ ಡಿ.ಕೆ.ಸುರೇಶ್ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿ ಗಾಯಗೊಂಡವರನ್ನು ತಾವೇ ಖುದ್ದಾಗಿ ಅಂಬ್ಯುಲೆನ್ಸ್ ಕರೆಸಿ, ಆಸ್ಪತ್ರೆಗೆ ಸೇರಿಸಿದರು. ಅಪಘಾತಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದು ಈ ಬಗ್ಗೆ ಸ್ಥಳೀಯರಿಂದ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಗಾಯಾಳುವಾಗಿದ್ದವರ ಕುಟುಂಬದವ್ರು, ಸ್ನೇಹಿತರು ಡಿ.ಕೆ.ಸುರೇಶ್ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಡಿ.ಕೆ.ಸುರೇಶ್ ಅವರ ಜನಪರ ಕೆಲಸಗಳು ಹಿಂದೆ ಮುಂದುವರೆಯಲಿ ಎಂದು ಜನರು ಆಶಿಸಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಕೊಡಗು ಪ್ರವಾಹ ಸಂಧರ್ಭದಲ್ಲೂ ಕೂಡ ಡಿಕೆ ಸುರೇಶ ಹಾಗು ಸಹೋದರ ಡಿಕೆ ಶಿವಕುಮಾರ್ ನೆರವಿನ ಹಸ್ತ ಚಾಚಿದ್ದಾರೆ ಎಂದು ತಿಳಿದು ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
